Tuesday, June 24

ಶಾಸಕ ರಾಜಣ್ಣ ಹತ್ಯೆ ಸಂಚು; ಸ್ಫೋಟಕ ಆಡಿಯೋ ಬಹಿರಂಗ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್‌ ಸಂಚಿನ ಪ್ರಕರಣದ ಜೊತೆಯಲ್ಲೇ ವೇಳೆ ಶಾಸಕ ರಾಜೇಂದ್ರ ಹತ್ಯೆ ಸಂಚಿನ ಆರೋಪವೂ ತಲ್ಲಣ ಸೃಷ್ಟಿಸಿದೆ.

ತಮ್ಮ ಹತ್ಯೆಗೆ ಸಂಚು ನಡೆದಿದೆ ಎಂದು ಸಹಕಾರ ಸಚಿವ ಕೆಎನ್​ ರಾಜಣ್ಣ ಪುತ್ರ, ಎಂಎಲ್​ಸಿ ರಾಜೇಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಎಫ್​ಐಆರ್​ ಕೂಡ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿರುವಂತೆಯೇ, ಹತ್ಯೆ ಸಂಚಿನದ್ದೆನ್ನಲಾದ ಆಡಿಯೋ ತುಣುಕೊಂದು ವೈರಲ್ ಆಗಿದೆ.

ಕೊಲೆ ಸಂಚಿಗೆ ಸಂಬಂಧಿಸಿದ ಆಡಿಯೋವನ್ನೂ ಪೊಲೀಸರಿಗೆ ನೀಡಿದ್ದಾಗಿ ರಾಜೇಂದ್ರ ಹೇಳಿದ್ದರು. ಆ ಆಡಿಯೋದ್ದೆನ್ನಲಾದ ತುಣುಕೊಂದು ಬಹಿರಂಗವಾಗಿದೆ. ಮಹಿಳೆಯು ಆ ಆಡಿಯೋದಲ್ಲಿ ಅನೇಕ ರಹಸ್ಯಗಳನ್ನು ಆಡಿಯೋದಲ್ಲಿ ಹೇಳಿಕೊಂಡಂತಿದೆ. ಆದರೆ, ಹತ್ಯೆ ಸಂಚಿನ ಹಿಂದಿನ ಮಹಾನಾಯಕ ಯಾರು ಎಂಬ ಸುಳಿವು ವ್ಯಕ್ತವಾಗಿಲ್ಲ.