
‘ಸೋಮನಾಥ ದೇವಾಲಯ ಭಾರತದ ನಾಗರಿಕತೆಯ ಶಾಶ್ವತ ಸಂಕೇತ’ ಎಂದ ಸಿಎಂ ನಾಯ್ಡು
ಅಮರಾವತಿ: ಸೋಮನಾಥ ದೇವಾಲಯವು ಭಾರತದ ನಾಗರಿಕತೆಯ ಚೈತನ್ಯದ ಶಾಶ್ವತ ಸಂಕೇತವಾಗಿದ್ದು, ಅದನ್ನು ಶತಮಾನಗಳಿಂದ ರಕ್ಷಿಸಿ ಪುನರ್ನಿರ್ಮಿಸಿದವರ ಭಕ್ತಿ ಮತ್ತು ತ್ಯಾಗವನ್ನು ಪ್ರತಿಬಿಂಬಿಸುತ್ತದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.ಸೋಮನಾಥ ದೇವಾಲಯದ ಪುನಃಸ್ಥಾಪನೆಯ 75 ವರ್ಷಗಳ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ ಮಹಾಪೂಜೆ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ ಅವರು, “ನಮ್ಮದು ನಂಬಿಕೆಯನ್ನು ಗೌರವಿಸುವ ಭೂಮಿ. ಸೋಮನಾಥ ದೇವಾಲಯ ಕೇವಲ ಪೂಜಾ ಸ್ಥಳವಲ್ಲ, ಅದು ಭಾರತದ ನಾಗರಿಕತೆಯ ಶಕ್ತಿಯ ಸಂಕೇತ” ಎಂದು ಬರೆದಿದ್ದಾರೆ.ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ “ವಿಕಾಸ್ ಭಿ, ವಿರಾಸತ್ ಭಿ” ಎಂಬ ಧೋರಣೆಯನ್ನು ಅನುಸರಿಸುತ್ತಿದ್ದು, ಅಭಿವೃದ್ಧಿಯ ಜೊತೆಗೆ ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಸಂರಕ್ಷಣೆಯನ್ನೂ ಮುಂದುವರಿಸುತ್ತಿದೆ ಎಂದು ನಾಯ್ಡು ಹೇಳಿದ್ದಾರೆ.Ours is a land where faith is respected and serves as a force that unites everyone. Somnath Temple is more than a plac...









