
ಅಮರನಾಥ ಯಾತ್ರೆ ಆರಂಭ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ
ಶ್ರೀನಗರ: ಬಿಗಿ ಭದ್ರತಾ ವ್ಯವಸ್ಥೆಯ ನಡುವೆ ಈ ವರ್ಷದ ಅಮರನಾಥ ಯಾತ್ರೆ ಜುಲೈ 3ರಿಂದ ಆರಂಭವಾಗಿದ್ದು, ಮೊದಲ ದಿನವೇ 12,300ಕ್ಕೂ ಹೆಚ್ಚು ಯಾತ್ರಿಕರು ಪವಿತ್ರ ಗುಹಾ ದೇವಾಲಯದಲ್ಲಿ ದರ್ಶನ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶುಕ್ರವಾರ, 6,411 ಯಾತ್ರಿಕರ ಮತ್ತೊಂದು ತಂಡ ಜಮ್ಮುವಿನ ಭಗವತಿ ನಗರ ಯಾತ್ರಾ ನಿವಾಸದಿಂದ ಕಣಿವೆಗೆ ಹೊರಟಿದೆ. ಈ ಪೈಕಿ 2,789 ಯಾತ್ರಿಕರು ಬಾಲ್ಟಾಲ್ ಮೂಲ ಶಿಬಿರಕ್ಕೆ, ಉಳಿದ 3,622 ಯಾತ್ರಿಕರು ನುನ್ವಾನ್ (ಪಹಲ್ಗಾಮ್ ಶಿಬಿರ) ಕಡೆಗೆ ಪ್ರಯಾಣ ಬೆಳೆಸಿದ್ದಾರೆ.ಏಪ್ರಿಲ್ನಲ್ಲಿ ಪಹಲ್ಗಾಮ್ ಸಮೀಪ ನಡೆದ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ, ಈ ಬಾರಿ ಯಾತ್ರೆಗೆ ಹಲವು ಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಸೇನೆ, ಬಿಎಸ್ಎಫ್, ಸಿಆರ್ಪಿಎಫ್, ಎಸ್ಎಸ್ಬಿ ಮತ್ತು ಸ್ಥಳೀಯ ಪೊಲೀಸರ ಜೊತೆಗೆ 180 ಹೆಚ್ಚುವರಿ ಸಿಎಪಿಎಫ್ ಕಂಪನಿಗಳನ್ನು ನಿಯೋಜನೆ ಮಾಡಲಾಗಿದೆ.ಯಾತ್ರಾ ಮಾರ್ಗದಲ್ಲಿರುವ ಎಲ್ಲಾ ಸಾರಿಗೆ ಶಿಬಿರಗಳು ಹಾಗೂ ಜಮ್ಮುವಿನಿಂದ ಪವಿತ್ರ ಗುಹಾ ದೇವಾಲಯದವರೆಗೆ ಎಲ್ಲ ಭದ್ರತಾ ವ್ಯವಸ್ಥೆಗಳನ್ನು ಶಕ್ತಿಗೊಳಿಸಲಾಗಿದೆ. ಪಹಲ್ಗಾ...









