
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದಿಂದ ಅಯೋಜಿಸಿದ್ದ ಮಾತೆ ʻಸಾವಿತ್ರಿ ಬಾಯಿ ಫುಲೆʼ ಅವರ 195ನೇ ಜಯಂತಿ ಸಮಾರಂಭದ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಶಿಕ್ಷಣ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಎಂ.ಸಿ. ಎರ್ರಿಸ್ವಾಮಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಸಾವಿತ್ರಿ ಬಾಯಿ ಫುಲೆ ಬಗ್ಗೆ ಹೆಚ್ಚು ಹೆಚ್ಚಾಗಿ ಪುಸ್ತಕಗಳನ್ನು ಓದಬೇಕು. ಸಾವಿತ್ರಿ ಬಾಯಿ ಫುಲೆ ಅವರು ಒಬ್ಬ ಶಿಕ್ಷಕಿಯಾಗಿ ಇವರ ಸೇವೆ ನಮ್ಮ ಸಮಾಜಕ್ಕೆ ದಾರಿ ದ್ವೀಪ ಇದ್ದಂತೆ, ಇವರ ಕೊಡುಗೆ ಅಪಾರ, ಸಮಾಜದ ಬೆಳಕಾಗಿ, ಕವಿಯಾಗಿ ತಮ್ಮ ಜೀವನ ಉದ್ದಕ್ಕೂ ಹಗಲಿರುಳು ಶ್ರಮಿಸಿದ ಹೆಮ್ಮೆಯ ಮಾತೆ ಎಂದರು.
ವಿದ್ಯುನ್ಮಾನ ವಿಭಾಗದ ಪ್ರಾಧ್ಯಾಪಕರಾದ ಡಾ.ವಾಹಿನಿ ಅರವಿಂದ್ ಮಾತನಾಡಿ, ನನ್ನ ಅಧ್ಯಯನಕ್ಕೆ ಪೂರಕವಾಗಿ ಇಲ್ಲಿ ನನ್ನ ತಾತ ಅಜ್ಜ, ನನ್ನ ಅಪ್ಪ, ನನ್ನ ಮಾವ ಅಧ್ಯಾಪಕರಾಗಿದ್ದರು. ಪ್ರಮುಖ ಕ್ಷೇತ್ರಗಳೆಂದರೆ ಇವು ಅಧ್ಯಾಪಕ ವೃತ್ತಿ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಇಡೀ ಸಮಾಜಕ್ಕೆ ಮಾದರಿ. ಹಾಗೆ ಮಾತೆ ಸಾವಿತ್ರಿ ಬಾಯಿ ಫುಲೆರವರು ಆ ಕಾಲಘಟ್ಟದಲ್ಲಿ ಎಲ್ಲಾ ಮಹಿಳೆಯರ ಸಬಲೀಕರಣಕ್ಕಾಗಿ ಹಗಲಿರಲು ಶ್ರಮಿಸಿದವರು, ನಮ್ಮ ಸಮಾಜದಲ್ಲಿ ಹೆಣ್ಣು-ಗಂಡು ಸಮಾನವಾಗಿ ಶಾಲೆ ಆರಂಭಿಸಿದರು ಎಂದರು.
ಅಂಬೇಡ್ಕರ ಸಹ ಇವರ ಆದರ್ಶ ಚಿಂತನೆಗಳು ಸಂವಿಧಾನದಲ್ಲಿ ಅಳವಡಿಸಿದ್ದು ವಿಶೇಷ ಸಂಗತಿ. ಶಿಕ್ಷಣದ ಹಕ್ಕು ಇದೆ ಪ್ರತಿಯೊಬ್ಬರೂ ಕೂಡ ಸಮರ್ಥವಾಗಿ ಬಳಸಿಕೊಳ್ಳಬೇಕು. ನಮ್ಮಲ್ಲಿ ಸಂಸ್ಕಾರವಿದ್ದರೆ ಮಾತ್ರ ನಾವು ಇನ್ನೊಬ್ಬರಿಗೆ ಸಂಸ್ಕಾರ ಹೇಳಬಹುದು. ಮುಂದಿನ ದಿನಗಳಲ್ಲಿ ಸಾವಿತ್ರಿ ಬಾಯಿ ಫುಲೆ ಅವರ ವಿಚಾರಧಾರೆಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜಕರಾದ ಡಾ.ವಾಣಿಶ್ರೀ ಕೊಪ್ಪದ ಅವರು, ಅಂದಿನ ದಿನಗಳಲ್ಲಿ ಮಾತೆ ಸಾವಿತ್ರಿ ಬಾಯಿ ಫುಲೆ ಅವರು ಅನುಭವಿಸಿದ ಸಾಕಷ್ಟು ನೋವು ನಮ್ಮ ಕಣ್ಣು ಒದ್ದೆಯಾಗುತ್ತದೆ. ಶಿಕ್ಷಕರಾದವರು ತಮ್ಮ ಒತ್ತಡವನ್ನು ಮಕ್ಕಳ ಮುಂದೆ ಹೇಳಬಾರದು. ನಮ್ಮನ್ನು ದ್ವೇಷಿಸುವರು ಇರುತ್ತಾರೆ ನಮ್ಮ ಗುರಿ ಆತ್ಮಸ್ಥೈರ್ಯ ನಮಗೆ ಪ್ರೇರಣೆಯಾಗಬೇಕು. ನಂತರ ಅಧ್ಯಾಪಕರು ಆದವರು ನಾವು ಮಕ್ಕಳಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ದುರಂತ ಎಂದರೆ ಸಾವಿತ್ರಿ ಬಾಯಿ ಫುಲೆ ಅವರು ಶಿಕ್ಷಣ ಕಲಿಸುವ ಸಂದರ್ಭದಲ್ಲಿ ದಾರಿಯಲ್ಲಿ ಹೋಗುವಾಗ ಸಗಣಿ ಎರಚುವುದು, ಹೀಯಾಳಿಸಿ ಆಡಿಕೊಳ್ಳುವಂತಹ ಸನ್ನಿವೇಶ ಕಂಡು ಬಂದಿದ್ದರು ಕೂಡ ಎದ್ದೆಗುಂದದೆ ಧೈರ್ಯದಿಂದ ಅಸಂಖ್ಯಾತ ಮಹಿಳೆಯರಿಗೆ, ಮಕ್ಕಳಿಗೆ ಶಿಕ್ಷಣ ನೀಡಿದ್ದು ಹೆಮ್ಮೆಯ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಶಿಕ್ಷಣ ವಿಭಾಗದ ಸಂಯೋಜಕರಾದ ಡಾ. ವಾಣಿಶ್ರೀ ಕೊಪ್ಪದ, ವಿದ್ಯುನ್ಮಾನ ವಿಭಾಗದ ಪ್ರಾಧ್ಯಾಪಕರಾದ ಡಾ.ವಾಹಿನಿ ಅರವಿಂದ್, ಶಿಕ್ಷಣ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಎಂ.ಸಿ. ಎರ್ರಿಸ್ವಾಮಿರವರು, ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾರ್ಥಿಗಳು, ಪ್ರಥಮ ಮತ್ತು ದ್ವಿತೀಯ ವರ್ಷದ ಎಂ.ಇಡಿ ಪ್ರಶಿಕ್ಷಾಣಾರ್ಥಿಗಳು ಉಪಸ್ಥಿತರಿದ್ದರು.
