Wednesday, June 25

ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ನೇಮಕ: ಹೊಸ ಸಾರಥಿಗಳ ಪಟ್ಟಿ ಇಲ್ಲಿದೆ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಹೊಸ ಸಾರಥಿಗಳ ಪ್ರಕ್ರಿಯೆ ಬಿರುಸುಗೊಂಡಿದೆ. ವಿವಿಧ ಸಂಘಟನಾ ಜಿಲ್ಲೆಗಳಿಗೆ ಹೊಸ ಅಧ್ಯಕ್ಷರ ನೇಮಕವಾಗಿದೆ. 23 ಜಿಲ್ಲೆಗಳಿಗೆ ಬಿಜೆಪಿ ನೂತನ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ. ಕೆಲ ಜಿಲ್ಲೆಗಳಿಗೆ ಹಳೇಬರನ್ನೇ ಮುಂದುವರಿಸಲಾಗಿದೆ. ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉತ್ತರ ಕನ್ನಡ, ಹುಬ್ಬಳ್ಳಿ- ಧಾರವಾಡ, ಧಾರವಾಡ ಗ್ರಾಮಾಂತರ, ಬೆಳಗಾವಿ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ, ಬೀದರ್, ಕಲಬುರಗಿ, ಬಳ್ಳಾರಿ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರನ್ನು ಮರು ನೇಮಕ ಮಾಡಲಾಗಿದೆ.

ನೂತನ ಜಿಲ್ಲಾಧ್ಯಕ್ಷರ ಪಟ್ಟಿ:

  • ಮೈಸೂರು ನಗರ: ಎಲ್.ನಾಗೇಂದ್ರ,

  • ಚಾಮರಾಜನಗರ: ಸಿ.ಎಸ್.ನಿರಂಜನ್‌ಕುಮಾರ್,

  • ದಕ್ಷಿಣ ಕನ್ನಡ: ಸತೀಶ್ ಕುಂಪಲಿ,

  • ಚಿಕ್ಕಮಗಳೂರು: ದೇವರಾಜ ಶೆಟ್ಟಿ,

  • ಶಿವಮೊಗ್ಗ: ಎನ್.ಕೆ.ಜಗದೀಶ್,

  • ಉತ್ತರ ಕನ್ನಡ: ನಾರಾಯಣ ಶ್ರೀನಿವಾಸ ಹೆಗಡೆ,

  • ಹುಬ್ಬಳ್ಳಿ-ಧಾರವಾಡ: ತಿಪ್ಪಣ್ಣ ಮಜ್ಜಗಿ,

  • ಧಾರವಾಡ ಗ್ರಾಮಾಂತರ: ನಿಂಗಪ್ಪ ಡಿ.ಸುತಗಟ್ಟಿ,

  • ಬೆಳಗಾವಿ (ನ): ಗೀತಾ ಸುತಾರ್,

  • ಬೆಳಗಾವಿ (ಗ್ರಾ): ಸುಭಾಷ್ ದುಂಡಪ್ಪ ಪಾಟೀಲ್,

  • ಚಿಕ್ಕೋಡಿ: ಸತೀಶ್ ಅಪ್ಪಾಜಿಗೋಲ್,

  • ಬೀದರ್: ಮನಾಥ್ ಪಾಟೀಲ್,

  • ಕಲಬುರಗಿ (ನ): ಚಂದ್ರಕಾಂತ ಬಿ.ಪಾಟೀಲ್,

  • ಕಲಬುರಗಿ {ಗ್ರಾ) : ಅಶೋಕ ಶಾಂತಪ್ಪ ಬಗಲಿ,

  • ಯಾದಗಿರಿ: ಬಸವರಾಜ ವಿಭೂತಿಹಳ್ಳಿ,

  • ಕೊಪ್ಪಳ: ಧಡೇಸುಗೂರು ಬಸವರಾಜ್,

  • ಬಳ್ಳಾರಿ: ಅನಿಲ್ ಕುಮಾರ್ ಮೋಕಾ,

  • ವಿಜಯನಗರ: ಸಂಜೀವರೆಡ್ಡಿ ಎಸ್,

  • ಚಿಕ್ಕಬಳ್ಳಾಪುರ: ಬಿ.ಸಂದೀಪ್,

  • ಕೋಲಾರ: ಓಂ ಶಂಕ್ತಿ ಛಲಪತಿ,

  • ಬೆಂಗಳೂರು (ಗ್ರಾ): ಎಸ್.ಹರೀಶ್,

  • ಬೆಂಗಳೂರು (ಕೇ): ಎ.ಆರ್.ಸಪ್ತಗಿರಿ ಗೌಡ,

  • ಬೆಂಗಳೂರು (ದ): ಸಿ.ಕೆ.ರಾಮಮೂರ್ತಿ.