Sunday, June 22

ವೀಡಿಯೊ

ಆಡಿಯೋ ಬಾಂಬ್: ನೀವೇ ರಾಜೀನಾಮೆ ಕೊಡ್ತೀರಾ? ಜಮೀರ್ ಅವರ ರಾಜೀನಾಮೆ ಪಡೀತೀರಾ? ಸಿಎಂಗೆ ಬಿಜೆಪಿ ಪ್ರಶ್ನೆ

ಆಡಿಯೋ ಬಾಂಬ್: ನೀವೇ ರಾಜೀನಾಮೆ ಕೊಡ್ತೀರಾ? ಜಮೀರ್ ಅವರ ರಾಜೀನಾಮೆ ಪಡೀತೀರಾ? ಸಿಎಂಗೆ ಬಿಜೆಪಿ ಪ್ರಶ್ನೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಆರ್ಥಿಕವಾಗಿ ದಿವಾಳಿ ಆಗಿರುವ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ವಸತಿ ನಿಗಮದ ಮನೆಗಳನ್ನು ಹಣ ಕೊಟ್ಟವರಿಗೆ ಮಾತ್ರ ನೀಡಿ ಹಗಲು ದರೋಡೆ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಆರ್ಥಿಕವಾಗಿ ದಿವಾಳಿ ಆಗಿರುವ ಭ್ರಷ್ಟ @siddaramaiah ಸರ್ಕಾರ ವಸತಿ ನಿಗಮದ ಮನೆಗಳನ್ನು ಹಣ ಕೊಟ್ಟವರಿಗೆ ಮಾತ್ರ ನೀಡಿ ಹಗಲು ದರೋಡೆ ಮಾಡುತ್ತಿದೆ. ಆಳಂದ ಶಾಸಕ @brpatilmla ಹಾಗೂ ಸಚಿವ @BZZameerAhmedK ಅವರ ಆಪ್ತ ಕಾರ್ಯದರ್ಶಿ ಸರ್ಫ ರಾಜ್ ಖಾನ್ ಮನೆಗಳನ್ನು ಹಣ ಪಡೆದು ಹಂಚಿರುವ ಬಗ್ಗೆ ದೂರವಾಣಿ ಕರೆಯಲ್ಲಿ ಮಾತನಾಡಿಕೊಂಡಿದ್ದಾರೆ.… pic.twitter.com/ykPrqXGQ5I — BJP Karnataka (@BJP4Karnataka) June 20, 2025 ಆಳಂದ ಶಾಸಕ ಬಿ.ಆರ್.ಪಾಟೀಲ್ ಹಾಗೂ ಸಚಿವ ಸಚಿವ ಜಮೀರ್ ಅಹ್ಮದ್ ಅವರ ಆಪ್ತ ಕಾರ್ಯದರ್ಶಿ ಸರ್ಫ ರಾಜ್ ಖಾನ್ ಮನೆಗಳನ್ನು ಹಣ ಪಡೆದು ಹಂಚಿರುವ ಬಗ್ಗೆ ದೂರವಾಣಿ ಕರೆಯಲ್ಲಿ ಮಾತನಾಡಿಕೊಂಡಿದ್ದಾರೆ ಎನ್ನಲಾದ ಆಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಬಿಜೆಪಿ, ಸಿದ್ದರಾಮಯ್ಯ ಅವರೇ ರಾಜೀನಾಮೆ ನೀಡುತ್ತಿರೋ ಅಥವಾ ನಿಮ್ಮ ಆಪ್ತ ಜಮೀರ್ ಅವರಿಂದ ರಾಜೀ...
‘ಘಾಟಿ’ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಹೊಸ ಲುಕ್: ‘ಸೈಲೋರ್’ ಪ್ರೋಮೋ..

‘ಘಾಟಿ’ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಹೊಸ ಲುಕ್: ‘ಸೈಲೋರ್’ ಪ್ರೋಮೋ..

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ, ಸಿನಿಮಾ
ಚೆನ್ನೈ: ನಟಿ ಅನುಷ್ಕಾ ಶೆಟ್ಟಿ ಹಾಗೂ ತಮಿಳು ನಟ ವಿಕ್ರಮ್ ಪ್ರಭು ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಘಾಟಿ' ಚಿತ್ರದ ಮೊದಲ ಹಾಡು 'ಸೈಲೋರ್'ನ ಪ್ರೋಮೋ ಬಿಡುಗಡೆಯಾಗಿದೆ. ಇದೇ ಜುಲೈ 11ರಂದು ತೆರೆಗೆ ಬರಲಿರುವ ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಕ್ರಿಶ್ ಜಾಗರ್ಲಮುಡಿ ನಿರ್ದೇಶನ ಮಾಡಿದ್ದು, 'ವೇದಂ' ನಂತರದ ಅನುಷ್ಕಾ ಮತ್ತು ಕ್ರಿಷ್ ಅವರ ಎರಡನೇ ಸಹಯೋಗ ಇದಾಗಿದೆ. https://www.youtube.com/watch?v=HPouR1lQ6Xw&list=RDHPouR1lQ6Xw&start_radio=1 ಸಾಗರ್ ನಾಗವೆಲ್ಲಿ ಸಂಗೀತ ಸಂಯೋಜನೆ ಮಾಡಿರುವ ‘ಸೈಲೋರ್’ ಎಂಬ ಲಯಬದ್ಧ ಹಾಡಿಗೆ, ನಿರ್ದೇಶಕ ಕ್ರಿಶ್ ಜಾಗರ್ಲಮುಡಿ ಸಾಹಿತ್ಯ ಬರೆದು ಲಿಪ್ಸಿಕಾ ಭಾಷ್ಯಂ, ಸಾಗರ್ ನಾಗವೆಲ್ಲಿ ಮತ್ತು ಸೋನಿ ಕೊಮಂಡೂರಿ ಹಾಡು ಹಾಡಿದ್ದಾರೆ. ಈ ಪ್ರೋಮೋ ಅಭಿಮಾನಿಗಳು ಹಾಗೂ ಚಲನಚಿತ್ರ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ. ಯುವಿ ಕ್ರಿಯೇಷನ್ಸ್ ಬ್ಯಾನರ್‌ನಡಿಯಲ್ಲಿ ರಾಜೀವ್ ರೆಡ್ಡಿ ಮತ್ತು ಸಾಯಿ ಬಾಬು ಜಾಗರ್ಲಮುಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಅನುಷ್ಕಾ ಶೆಟ್ಟಿ ಅವರ ಯುವಿ ಕ್ರಿಯೇಷನ್ಸ್ ನಿರ್ಮಾಣದ ನಾಲ್...
‘ಒಂದು ಭೂಮಿ, ಒಂದು ಆರೋಗ್ಯ’: ವಿಶಾಖಪಟ್ಟಣದಲ್ಲಿ ಯೋಗ ಮಹಾಸಂಭ್ರಮ

‘ಒಂದು ಭೂಮಿ, ಒಂದು ಆರೋಗ್ಯ’: ವಿಶಾಖಪಟ್ಟಣದಲ್ಲಿ ಯೋಗ ಮಹಾಸಂಭ್ರಮ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ವಿಶಾಖಪಟ್ಟಣಂ: 11ನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶನಿವಾರ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆರ್‌ಕೆ ಬೀಚ್‌ನಲ್ಲಿ ನಡೆದ ರಾಷ್ಟ್ರೀಯ ಯೋಗ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ವಹಿಸಿ, ಮೂರು ಲಕ್ಷಕ್ಕೂ ಹೆಚ್ಚು ಯೋಗಾಭ್ಯಾಸಿಗಳೊಂದಿಗೆ ಸಾಮೂಹಿಕ ಯೋಗ ಶಿಸ್ತನ್ನು ಪಾಲಿಸಿದರು. Yoga isn't just an exercise. It is a way of life. Wonderful to join this year's Yoga Day celebrations in Visakhapatnam. https://t.co/ReTJ0Ju2sN— Narendra Modi (@narendramodi) June 21, 2025 'One Earth, One Health' ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಈ ಉತ್ಸವಾತ್ಮಕ ಕಾರ್ಯಕ್ರಮವು ಯೋಗದ '2.0 ಯುಗ'ಕ್ಕೆ ನಾಂದಿ ಹಾಡಿದೆ ಎಂದು ಪ್ರಧಾನಿಯವರು ಹೇಳಿದ್ದಾರೆ. "ಇಂದಿನ ಯುದ್ಧಗಳು, ಅಶಾಂತಿ ಹಾಗೂ ಅಸ್ಥಿರತೆಯ ನಡುವೆ, ಯೋಗವೇ ಜಗತ್ತಿಗೆ ಶಾಂತಿಯ ದಾರಿ ತೋರಿಸುತ್ತಿದೆ. ಇದು ವಿಶ್ವದ ಆತ್ಮಶುದ್ಧಿಗೆ ಪಥದಂತಿದೆ" ಎಂದು ಮೋದಿ ಭಾವಪೂರ್ಣವಾಗಿ ಹೇಳಿದರು. 2024ರ ಯೋಗ ದಿನದ ಧ್ಯೇಯವಾಕ್ಯವಾಗಿ ಘೋಷಿಸಲಾದ 'ಒಂದು ಭೂಮಿಗೆ, ಒ...
ಯೋಗ ಜಗತ್ತಿಗೆ ಶಾಂತಿಯ ದಿಕ್ಕು ತೋರಿಸುತ್ತದೆ: ಪ್ರಧಾನಿ ಮೋದಿ

ಯೋಗ ಜಗತ್ತಿಗೆ ಶಾಂತಿಯ ದಿಕ್ಕು ತೋರಿಸುತ್ತದೆ: ಪ್ರಧಾನಿ ಮೋದಿ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ವಿಶಾಖಪಟ್ಟಣಂ: “ಯೋಗವು ಕೇವಲ ವ್ಯಾಯಾಮವಲ್ಲ, ಅದು ಜೀವನ ಶೈಲಿ. ಅಸ್ಥಿರತೆಯ ಈ ಯುಗದಲ್ಲಿ ಯೋಗವೇ ಜಗತ್ತಿಗೆ ಶಾಂತಿಯ ದಿಕ್ಕನ್ನು ತೋರಿಸುತ್ತದೆ,” ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವ ಸಮುದಾಯಕ್ಕೆ ಸಂದೇಶ ನೀಡಿದ್ದಾರೆ. Yoga isn't just an exercise. It is a way of life. Wonderful to join this year's Yoga Day celebrations in Visakhapatnam. https://t.co/ReTJ0Ju2sN— Narendra Modi (@narendramodi) June 21, 2025 ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆರ್‌ಕೆ ಬೀಚ್‌ನಲ್ಲಿ ಶನಿವಾರ ನಡೆದ 11ನೇ ಅಂತರರಾಷ್ಟ್ರೀಯ ಯೋಗ ದಿನದ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಮೂರು ಲಕ್ಷಕ್ಕೂ ಹೆಚ್ಚು ಜನರೊಂದಿಗೆ ಸಾಮಾನ್ಯ ಯೋಗ ಶಿಸ್ತನ್ನು ಪಾಲಿಸಿದರು. ಈ ವೇದಿಕೆಯಿಂದ ‘ಯೋಗ 2.0’ಯ ನೂತನ ಅಭಿಯಾನಕ್ಕೆ ಚಾಲನೆ ನೀಡಿದರು. “ಇಂದಿನ ಜಗತ್ತಿನಲ್ಲಿ ವಿವಿಧ ಪ್ರಾಂತ್ಯಗಳಲ್ಲಿ ಅಸ್ಥಿರತೆ, ಸಂಘರ್ಷಗಳು ಮತ್ತು ಅಶಾಂತಿ ಏರಿಕೆಯಾಗುತ್ತಿರುವ ಸಮಯದಲ್ಲಿ ಯೋಗವೇ ನಮಗೆ ಆಂತರಿಕ ಶಾಂತಿಗೆ ದಾರಿ ತೋರಿಸುತ್ತಿದೆ. ಇದು ವಿಶ್ವದ ಆತ್ಮ ಶು...
ವಿವಾದಗಳ ನಡುವೆ ಅಂತಿಮ ಘೋಷಣೆ: ‘ಹರಿ ಹರ ವೀರ ಮಲ್ಲು’ ಜುಲೈ 24ಕ್ಕೆ ರಿಲೀಸ್

ವಿವಾದಗಳ ನಡುವೆ ಅಂತಿಮ ಘೋಷಣೆ: ‘ಹರಿ ಹರ ವೀರ ಮಲ್ಲು’ ಜುಲೈ 24ಕ್ಕೆ ರಿಲೀಸ್

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ, ಸಿನಿಮಾ
ಚೆನ್ನೈ: ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ಹರಿ ಹರ ವೀರ ಮಲ್ಲು’ ಈ ವರ್ಷ ಜುಲೈ 24 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಶನಿವಾರ ಅಧಿಕೃತವಾಗಿ ಘೋಷಿಸಿದೆ. "ಒಬ್ಬರು ಅಧಿಕಾರಕ್ಕಾಗಿ ಹೋರಾಟ. ಒಬ್ಬರು ಧರ್ಮಕ್ಕಾಗಿ ಹೋರಾಟ. ಪರಂಪರೆಯ ಘರ್ಷಣೆ ಆರಂಭವಾಗಲಿದೆ" ಎಂಬ ಘೋಷಣೆಯೊಂದಿಗೆ ಚಿತ್ರದ ಅಧಿಕೃತ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಲ್ಲಿ ಪ್ರಕಟಣೆ ಹೊರಡಿಸಲಾಗಿದೆ. https://www.youtube.com/watch?v=6XSlZ88MuWY&list=RD6XSlZ88MuWY&start_radio=1 ಈ ಚಿತ್ರವು ಐದೂವರೆ ವರ್ಷಗಳ ಕಾಲ ಶೂಟಿಂಗ್‌ನಲ್ಲಿದ್ದು, ಮೊದಲಿನಿಂದಲೇ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ. ಆರಂಭದಲ್ಲಿ ಜೂನ್ 12 ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ತಾಂತ್ರಿಕ ಮತ್ತು ನಿರ್ಮಾಣ ಸಂಬಂಧಿತ ಕಾರಣಗಳಿಂದಾಗಿ ಬಿಡುಗಡೆ ಮುಂದೂಡಲಾಗಿತ್ತು. ಚಿತ್ರತಂಡ ಈ ಹಿಂದೆ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ, “ಮುಂದಿನ ದೊಡ್ಡ ಹೆಜ್ಜೆಗಳಿಗಾಗಿ ಒಂದು ಹೆಜ್ಜೆ ಹಿಂದಕ...
ಇಸ್ರೇಲಿ ದಾಳಿಯಿಂದ ಇರಾನ್ ಪರಮಾಣು ಸೌಲಭ್ಯಗಳಿಗೆ ಅಪಾಯ: IAEA ಮುಖ್ಯಸ್ಥರ ಎಚ್ಚರಿಕೆ

ಇಸ್ರೇಲಿ ದಾಳಿಯಿಂದ ಇರಾನ್ ಪರಮಾಣು ಸೌಲಭ್ಯಗಳಿಗೆ ಅಪಾಯ: IAEA ಮುಖ್ಯಸ್ಥರ ಎಚ್ಚರಿಕೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ವಿಶ್ವಸಂಸ್ಥೆ: ಇರಾನ್‌ನ ಪರಮಾಣು ತಾಣಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯು ಭವಿಷ್ಯದಲ್ಲಿ ಗಂಭೀರ ಪರಮಾಣು ಅಪಾಯಕ್ಕೆ ಕಾರಣವಾಗಬಹುದು ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ಮಹಾನಿರ್ದೇಶಕ ರಾಫೆಲ್ ಗ್ರೋಸಿ ಎಚ್ಚರಿಸಿದ್ದಾರೆ. ಬುಧವಾರ ನಡೆದ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ದಾಳಿಯಿಂದಾಗಿ ನಟಾಂಜ್ ಹಾಗೂ ಎಸ್ಫಹಾನ್ ತಾಣಗಳಲ್ಲಿ ರಾಸಾಯನಿಕ ಮಾಲಿನ್ಯದ ಆತಂಕವಿದೆ ಎಂದರು. “ಈಗಾಗಲೇ ಸಾರ್ವಜನಿಕರಿಗೆ ಹಾನಿಯಾಗಿಲ್ಲವಾದರೂ, ಮುಂದೆ ಅಂಥ ಅಪಾಯ ಸಂಭವಿಸಬಹುದಾಗಿದೆ,” ಎಂದು ಗ್ರೋಸಿ ಎಚ್ಚರಿಸಿದರು. "ಬುಶೆಹರ್ ಮೇಲೆ ದಾಳಿ ಉಗ್ರ ಪರಿಣಾಮಕಾರಿಯಾಗಿದೆ" ಬುಶೆಹರ್‌ನ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ದಾಳಿ ಸಂಭವಿಸಿದರೆ, ಪರಿಸರಕ್ಕೆ ಅತ್ಯಧಿಕ ವಿಕಿರಣಶೀಲತೆಯ ಹರಡುವಿಕೆಯಾಗಬಹುದು ಎಂದು ಅವರು ಎಚ್ಚರಿಸಿದರು. “ಸುತ್ತಲಿನ ಪ್ರದೇಶಗಳನ್ನು ಖಾಲಿ ಮಾಡಬೇಕು, ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಆಹಾರ ಪೂರೈಕೆಯನ್ನೂ ನಿಯಂತ್ರಿಸಬೇಕಾದ ಪರಿಸ್ಥಿತಿ ಉಂಟಾಗಬಹುದು,” ಎಂದು ಗ್ರೋಸಿ ಹೇಳಿದರು. ಫೋರ್ಡೋ ತಾಣದಲ್ಲಿ ಯಾವುದೇ ಹಾನಿಯ ಮಾಹಿತ...
11ನೇ ಅಂತರರಾಷ್ಟ್ರೀಯ ಯೋಗ ದಿನ; ಕುರುಕ್ಷೇತ್ರದಲ್ಲಿ ದಾಖಲೆ

11ನೇ ಅಂತರರಾಷ್ಟ್ರೀಯ ಯೋಗ ದಿನ; ಕುರುಕ್ಷೇತ್ರದಲ್ಲಿ ದಾಖಲೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ನವದೆಹಲಿ: ಹರಿಯಾಣದ ಪವಿತ್ರ ಧರ್ಮಕ್ಷೇತ್ರ ಕುರುಕ್ಷೇತ್ರದ ಬ್ರಹ್ಮಸರೋವರದ ದಡದಲ್ಲಿ ಶುಕ್ರವಾರ ನಡೆದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ, ಭವ್ಯತೆ, ಶಿಸ್ತು ಮತ್ತು ಸಾಮೂಹಿಕ ಶಕ್ತಿಯ ಪ್ರಾತ್ಯಕ್ಷಿಕೆಯಾಗಿದ್ದು, ಐತಿಹಾಸಿಕ ಯೋಗ ಅಧಿವೇಶನಕ್ಕೆ ಸಾಕ್ಷಿಯಾಯಿತು. ಸುಮಾರು ಒಂದು ಲಕ್ಷಕ್ಕೂ ಅಧಿಕ ಯೋಗಾಭ್ಯಾಸಿಗಳು, ಅವರಲ್ಲಿ 40 ಸಾವಿರ ಶಾಲಾ ಮಕ್ಕಳು, ಏಕಕಾಲದಲ್ಲಿ ಯೋಗಾಭ್ಯಾಸದಲ್ಲಿ ತೊಡಗಿದ ಕಾರ್ಯಕ್ರಮವು ವಿಶ್ವದೃಷ್ಟಿಯನ್ನು ಸೆಳೆದಿದೆ. #WATCH | Kurukshetra: Haryana CM Nayab Singh Saini, Governor Bandaru Dattatreya, and other attendees perform yoga during the celebrations of the 11th International Day of Yoga under the guidance of Yoga Guru Swami Ramdev.Source: Aastha TV pic.twitter.com/rsm6oo58Zm— ANI (@ANI) June 20, 2025 ಕಾರ್ಯಕ್ರಮಕ್ಕೆ ಯೋಗಗುರು ಸ್ವಾಮಿ ರಾಮದೇವ್ ನೇತೃತ್ವ ವಹಿಸಿದ್ದು, ಹರಿಯಾಣದ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ, ರಾಜ್ಯಪಾಲ ಬಂಡಾರು ದತ್ತಾತ್ರೇಯ, ಸಂಸದ ನವೀನ್ ಜಿಂದಾಲ...
ಅಮಿತ್ ಶಾ ಬೆಂಗಳೂರು ಪ್ರವೇಶ; ರಾಜ್ಯ ಬಿಜೆಪಿ ನಾಯಕರಿಂದ ಆತ್ಮೀಯ ಸ್ವಾಗತ

ಅಮಿತ್ ಶಾ ಬೆಂಗಳೂರು ಪ್ರವೇಶ; ರಾಜ್ಯ ಬಿಜೆಪಿ ನಾಯಕರಿಂದ ಆತ್ಮೀಯ ಸ್ವಾಗತ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದಾರೆ. ಗುರುವಾರ ರಾತ್ರಿ ಆಗಮಿಸಿದ ಅವರನ್ನು ರಾಜ್ಯ ಬಿಜೆಪಿ ನಾಯಕರು ಸ್ವಾಗತಿಸಿದರು. #WATCH | Karnataka | Union Home Minister Amit Shah arrives in Bengaluru.He will inaugurate the Bengaluru Campus of Adichunchanagiri University in Karnataka tomorrow. pic.twitter.com/m7XkWMlI9E— ANI (@ANI) June 19, 2025 ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಸಿಟಿ ರವಿ, ಸಂಸದ ಡಾ. ಮಂಜುನಾಥ್ ಮತ್ತಿತರ ಬಿಜೆಪಿ ನಾಯಕರು ಹೂ ಗುಚ್ಚ ನೀಡಿ ಸ್ವಾಗತಿಸಿದರು. ಶುಕ್ರವಾರ ನೆಲಮಂಗಲ ಸಮೀಪ ಬಿಜಿಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ....
ಇರಾನ್ ಮೇಲೆ ಇಸ್ರೇಲ್ ದಾಳಿ: 224 ನಾಗರಿಕರು ಬಲಿ

ಇರಾನ್ ಮೇಲೆ ಇಸ್ರೇಲ್ ದಾಳಿ: 224 ನಾಗರಿಕರು ಬಲಿ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ನವದೆಹಲಿ: ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‌ ನಡುವೆ ಶುರುವಾದ ಹಿಂಸಾತ್ಮಕ ಸಂಘರ್ಷ ಇದೀಗ ಇತರೆ ರಾಷ್ಟ್ರಗಳಿಗೂ ವಿಸ್ತಾರವಾಗಿದ್ದು, ಇಸ್ರೇಲ್ ಇದೀಗ ಇರಾನ್ ವಿರುದ್ಧ ಮಿಲಿಟರಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಕನಿಷ್ಠ 224 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 1,257 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಮೂಲಗಳು ತಿಳಿಸಿವೆ. 💔🇮🇷 Israel bombed Iran’s top news station HQ yesterday.🚀🇮🇱 Iran responded by bombing the script-writing HQ of all Western mainstream media outlets: Mossad HQ & IDF Unit 8200.#IranIsrael #IranJustDoIt #Israel #IsraelIranConflict #IsraelTerroristState pic.twitter.com/56VzeXNrYi— Rebel_Warriors (@Rebel_Warriors) June 17, 2025 ಈ ಘಟನೆಗೆ ಸಂಬಂಧಿಸಿ ಭಾರತದಲ್ಲಿನ ಇರಾನ್ ರಾಯಭಾರ ಕಚೇರಿ ಸ್ಪಂದನೆ ನೀಡಿದ್ದು, ಇಸ್ರೇಲ್ ಈ ದಾಳಿಯ ಮೂಲಕ ಇರಾನ್‌ನ ಪ್ರಾದೇಶಿಕ ಅಖಂಡತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವವನ್ನು ಗಂಭೀರವಾಗಿ ಉಲ್ಲಂಘಿಸಿದ...
ಸಾಲುಸಾಲು ದುರ್ಘಟನೆಗಳು ನಡೆದಾಗ ಬಿಜೆಪಿ ನಾಯಕರು ರಾಜೀನಾಮೆ ನೀಡಿದ್ದಾರ? ಸಿದ್ದು ಪ್ರಶ್ನೆ

ಸಾಲುಸಾಲು ದುರ್ಘಟನೆಗಳು ನಡೆದಾಗ ಬಿಜೆಪಿ ನಾಯಕರು ರಾಜೀನಾಮೆ ನೀಡಿದ್ದಾರ? ಸಿದ್ದು ಪ್ರಶ್ನೆ

Focus, Update Videos, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಸಾಲುಸಾಲು ದುರ್ಘಟನೆಗಳು ನಡೆದಾಗ ಬಿಜೆಪಿ ನಾಯಕರು ರಾಜೀನಾಮೆ ನೀಡಿದ್ದಾರಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬೆಂಗಳೂರು ಕಾಲ್ತುಳಿತ ಘಟನೆ ಹಿನ್ನೆಲೆಯಲ್ಲಿ ತಮ್ಮ ರಾಜೀನಾಮೆ ಕೇಳುತ್ತಿರುವ ಬಿಜೆಪಿ ನಾಯಕರನ್ನು ತಮ್ಮದೇ ಶೈಲಿಯಲ್ಲಿ ಸಿಎಂ ಪ್ರಶ್ನೆ ಮಾಡಿದ್ದಾರೆ. ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಗೋದ್ರಾದಲ್ಲಿ ಹತ್ಯಾಕಾಂಡ ನಡೆದು, ಸಾವಿರಾರು ಅಮಾಯಕರು ಬಲಿಯಾಗಿದ್ದಾರೆ, ವಿಮಾನ ಅಪಘಾತ, ರೈಲ್ವೇ ದುರಂತಗಳು ಸಾಲು ಸಾಲು ನಡೆದು ಎಷ್ಟೋ ಜನ ಬಲಿಯಾಗಿದ್ದಾರೆ, ಮಣಿಪುರ ಕಳೆದ ಕೆಲವು ವರ್ಷಗಳಿಂದ ಹೊತ್ತಿ ಉರಿಯುತ್ತಿದೆ, ಅಲ್ಲಿ ನಿತ್ಯವೂ ಜನ ಸಾಯುತ್ತಿದ್ದರೆ, ಬಿಜೆಪಿ ಆಡಳಿತವಿರುವ… pic.twitter.com/nDI8QIipFZ— Siddaramaiah (@siddaramaiah) June 17, 2025 ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಗೋದ್ರಾದಲ್ಲಿ ಹತ್ಯಾಕಾಂಡ ನಡೆದು, ಸಾವಿರಾರು ಅಮಾಯಕರು ಬಲಿಯಾಗಿದ್ದಾರೆ, ವಿಮಾನ ಅಪಘಾತ, ರೈಲ್ವೇ ದುರಂತಗಳು ಸಾಲು ಸಾಲು ನಡೆದು ಎಷ್ಟೋ ಜನ ಬಲಿಯಾಗಿದ್ದಾರೆ, ಮಣಿಪುರ ಕಳೆದ ಕೆಲವು ವರ್ಷಗಳಿಂದ ಹ...