
‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ : ತುಳಸಿ ವಿರಾನಿ ಮತ್ತೆ ಬೆಳ್ಳಿತೆರೆ ಮೇಲೆ
ಮುಂಬೈ: ಭಾರತೀಯ ಟಿವಿ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಬರೆಯಿತು ಎಂಬ ಹೆಗ್ಗಳಿಕೆಗೆ ಪಾತ್ರವಾದ "ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ" ಧಾರಾವಾಹಿಯ ಪುನಾರಾವೃತ್ತಿ ಇದೀಗ ಮತ್ತೊಮ್ಮೆ ಸ್ಮೃತಿಯನ್ನು ಕೆದಕಿದೆ.ಸ್ಟಾರ್ ಪ್ಲಸ್ ಚಾನೆಲ್ ಇದೀಗ ಈ ಧಾರಾವಾಹಿಯ ಹೊಸ ಪ್ರೋಮೋವೊಂದನ್ನು ಬಿಡುಗಡೆ ಮಾಡಿದ್ದು, ಅಭಿಮಾನಿಗಳ ಕಾತರತೆಗೆ ಇನ್ನು ತೀವ್ರತೆ ನೀಡಿದೆ. ಮಾಜಿ ನಟಿ ಹಾಗೂ ಪ್ರಸ್ತುತ ಕೇಂದ್ರ ಸಚಿವೆಯಾದ ಸ್ಮೃತಿ ಇರಾನಿ ಈ ಪ್ರೋಮೋದಲ್ಲಿ ‘ತುಳಸಿ ವಿರಾನಿ’ ಪಾತ್ರಕ್ಕೆ ಜೀವ ತುಂಬಿರುವ ದೃಶ್ಯಗಳು ನೋಡಬಹುದು.ಪ್ರೋಮೋ ಆರಂಭದಲ್ಲಿ ‘ಶಾಂತಿ ನಿಕೇತನ’ ವಾತಾವರಣದಲ್ಲಿ ತುಳಸಿ ನೆನೆಪಿನ ಸುಳಿವಿನಲ್ಲಿ ಹೆಜ್ಜೆ ಹಾಕುತ್ತಾಳೆ. ಮಿಹಿರ್ ಮತ್ತು ತುಳಸಿಯ ಮದುವೆ ಕಾರ್ಡ್, ಹಳೆಯ ಫೋಟೋಗಳು, ಗೊಮ್ಜಿಯವರ ಜಾಕೆಟ್ ಸೇರಿದಂತೆ ಹಲವು ಸ್ಮರಣೀಯ ಕ್ಷಣಗಳು ಮತ್ತೆ ಜೀವಂತವಾಗುತ್ತವೆ. ತಾಯಿ, ಹೆಂಡತಿ ಮತ್ತು ಸೊಸೆಯಾಗಿ ತುಳಸಿಯ ಅನುಭವಗಳು ಪ್ರೇಕ್ಷಕರ ಮನಸ್ಸನ್ನು ತಲುಪುತ್ತವೆ.ಬಾ ಅವರ ಛಾಯಾಚಿತ್ರದ ಮುಂದೆ ದೀಪ ಬೆಳಗಿಸುವ ದೃಶ್ಯ, ಸಂಸ್ಕೃತಿಯ ಪ್ರತೀಕವಾಗಿ ಮೂಡಿಬರುತ್ತದೆ. “ಬದಲ್ತೆ ವಕ್ತ್ ಮೇ ಏಕ್...








