Saturday, December 6

ವೀಡಿಯೊ

ಬೆಂಗಳೂರು ರಿಚ್ಮಂಡ್ ವೃತ್ತದಲ್ಲಿ ಅಪಘಾತ: ದ್ವಿಚಕ್ರ ವಾಹನಗಳಿಗೆ ಆಂಬ್ಯುಲೆನ್ಸ್ ಡಿಕ್ಕಿ, ದಂಪತಿ ಸಾವು

ಬೆಂಗಳೂರು ರಿಚ್ಮಂಡ್ ವೃತ್ತದಲ್ಲಿ ಅಪಘಾತ: ದ್ವಿಚಕ್ರ ವಾಹನಗಳಿಗೆ ಆಂಬ್ಯುಲೆನ್ಸ್ ಡಿಕ್ಕಿ, ದಂಪತಿ ಸಾವು

Focus, ಪ್ರಮುಖ ಸುದ್ದಿ, ಬೆಂಗಳೂರು, ವೀಡಿಯೊ
ಬೆಂಗಳೂರು: ರಾಜಧಾನಿಯ ರಿಚ್ಮಂಡ್ ವೃತ್ತ ಬಳಿ ಶನಿವಾರ ರಾತ್ರಿ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಹಲವಾರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. A speeding ambulance rammed into 3 bikes near Richmond Circle in Bengaluru last night, two people killed, others injured. The ambulance dragged a bike for nearly 50m before hitting a traffic police booth. Driver absconding; case filed. pic.twitter.com/n35AKSrmWH— Deepak Bopanna (@dpkBopanna) November 2, 2025 ರಾತ್ರಿ 11 ಗಂಟೆ ಸುಮಾರಿಗೆ ಸಿಗ್ನಲ್‌ನಲ್ಲಿ ಹಲವಾರು ಮೋಟಾರ್‌ಸೈಕಲ್‌ಗಳು ನಿಂತಿದ್ದಾಗ, ವೇಗವಾಗಿ ಬಂದ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದಿದೆ. ಒಂದು ದ್ವಿಚಕ್ರ ವಾಹನವನ್ನು ಹಲವಾರು ಮೀಟರ್‌ಗಳಷ್ಟು ಎಳೆದೊಯ್ದ ಬಳಿಕ ಆಂಬ್ಯುಲೆನ್ಸ್ ಪೊಲೀಸ್ ಚೌಕಿಗೆ ಅಪ್ಪಳಿಸಿದೆ. ಅಪಘಾತದ ನಂತರ ಸ್ಥಳೀಯರು ಆಂಬ್ಯುಲೆನ್ಸನ್ನು ಮೇಲಕ್ಕೆತ್ತಲು ಹರಸಾಹಸ ಪಟ್ಟರು. ಈ...
‘ರಾಮ ರಾಜ್ಯದಿಂದ ರಾಷ್ಟ್ರ’, ‘ನಾಗರಿಕ್ ದೇವೋ ಭವ’ ಆಡಳಿತ ಮಾದರಿ: ಗಮನಸೆಳೆದ ಮೋದಿ ಭಾಷಣ

‘ರಾಮ ರಾಜ್ಯದಿಂದ ರಾಷ್ಟ್ರ’, ‘ನಾಗರಿಕ್ ದೇವೋ ಭವ’ ಆಡಳಿತ ಮಾದರಿ: ಗಮನಸೆಳೆದ ಮೋದಿ ಭಾಷಣ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ರಾಯಪುರ: “ಛತ್ತೀಸ್‌ಗಢವು ಭಗವಾನ್ ಶ್ರೀರಾಮನ ತಾಯಿಯ ಮನೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವ ರಾಯಪುರದ ಹೊಸ ವಿಧಾನಸಭೆ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ರಾಜ್ಯದ 25ನೇ ಸಂಸ್ಥಾಪನಾ ದಿನಾಚರಣೆಯ ವೇಳೆ ಶನಿವಾರ ಮಾತನಾಡಿದ ಅವರು, “ರಾಮರಾಜ್ಯದಿಂದ ರಾಷ್ಟ್ರ” ಎಂಬ ತತ್ವದ ಆಳವಾದ ನಿರೂಪಣೆಯನ್ನು ನೀಡಿದರು. 'ರಾಮ್ ಸೇ ರಾಷ್ಟ್ರ’ ಎಂದರೆ ಸರ್ವರ ಕ್ಷೇಮ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ – ಯಾರನ್ನೂ ಬಿಡದ ಸಮಗ್ರ ಅಭಿವೃದ್ಧಿ. ‘ರಾಮ್’ ಎಂದರೆ ಬಡತನ, ಅಸಮಾನತೆ, ಅನ್ಯಾಯದಿಂದ ಮುಕ್ತವಾದ ಸಮಾಜ. ಆರೋಗ್ಯ, ಸಂತೋಷ ಮತ್ತು ನ್ಯಾಯ ಮೌಲ್ಯಗಳಲ್ಲಿ ನಿಂತ ರಾಷ್ಟ್ರ. ‘ರಾಮ್’ ಎಂದರೆ ದುಷ್ಟ ಶಕ್ತಿಗಳ ನಾಶ – ನಕ್ಸಲಿಸಂ ವಿರುದ್ಧದ ಹೋರಾಟದಂತೆ ಎಂದು ಪ್ರಧಾನಿ ಹೇಳಿದರು. मुझे प्रसन्नता है कि जिस प्रकार हमारी नई संसद की गैलरियां भारत के लोकतंत्र को प्राचीनता से जोड़ती हैं, उसी प्रकार छत्तीसगढ़ विधानसभा के नए भवन में भी विरासत और विकास का अनूठा संगम है। pic.twitter.com/9Slu3Yagzh — Narendra Modi (@narendramodi) Nove...
ಬೆಂಗಳೂರು: ‘ಕಸ ಸುರಿಯುವ ಹಬ್ಬ’ದ ವಿರುದ್ಧ ಸಾರ್ವಜನಿಕರ ಆಕ್ರೋಶ

ಬೆಂಗಳೂರು: ‘ಕಸ ಸುರಿಯುವ ಹಬ್ಬ’ದ ವಿರುದ್ಧ ಸಾರ್ವಜನಿಕರ ಆಕ್ರೋಶ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಒಂದಿಲ್ಲೊಂದು ವಿಚಾರಗಳಿಂದ ವಿವಾದದ ಕೇಂದ್ರಬಿಂದುವಾಗುತ್ತಿರುವ ಕಾಂಗ್ರೆಸ್ ಸರ್ಕಾರ ಇದೀಗ ಬೆಂಗಳೂರಿನ ಕಸ ಅವಾಂತರದಿಂದಾಗಿ ನಾಗರಿಕರ ಗುರಿಯಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಎಚ್ಚರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳಲ್ಲಿ ಕೈಗೊಂಡಿರುವ "ಕಸ ಸುರಿಯುವ ಹಬ್ಬ" ನಾಗರಿಕರ ಸಹನೆಯನ್ನು ಕೆಡಿಸುವಂತಿದೆ. ಈ ಕುರಿತಂತೆ ಸಾರ್ವಜನಿಕ ವಲಯದದಲ್ಲಿ ಆಕ್ರೋಶ ಸ್ಫೋಟಗೊಂಡಿದೆ. Good work at BSWMLBasavanagudi Constituency Bengaluru West city corporation (Zone:-2) 155 Hanumantha Nagar As per BSWML CEO sir direction "ಕಸ ಸುರಿಯುವ ಹಬ್ಬ conducted in the presence of ward Marshalls JHIs pks supervisor pks auto supervisor & local residents are involved pic.twitter.com/hP3TAvAs7i— Save BASAVANAGUDI Heritage (@SaveBasavangudi) October 30, 2025 ರಾಜಧಾನಿ ಬೆಂಗಳೂರಿನಲ್ಲಿ ಕೆಲವರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಸ್ವಚ್ಛತೆಗೆ ಸವಾಲಾಗಿದ್ದಾರೆ. ಈ ಪರಿಸ...
ಸ್ಪೀಕರ್ ಸಚಿವಾಲಯದ ಕರ್ಮಕಾಂಡ; ಬಿಜೆಪಿ ಶಾಸಕರ ವೈಫಲ್ಯದತ್ತ ಬೊಟ್ಟು ಮಡಿದ ಕಾನೂನು ತಜ್ಞ ಮನೋರಾಜ್ ರಾಜೀವ್

ಸ್ಪೀಕರ್ ಸಚಿವಾಲಯದ ಕರ್ಮಕಾಂಡ; ಬಿಜೆಪಿ ಶಾಸಕರ ವೈಫಲ್ಯದತ್ತ ಬೊಟ್ಟು ಮಡಿದ ಕಾನೂನು ತಜ್ಞ ಮನೋರಾಜ್ ರಾಜೀವ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಮಂಗಳೂರು: ವಿಧಾನಸಭೆ ಆಡಳಿತ ಸುಧಾರಣೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಡಿದ್ದು, ಸ್ಪೀಕರ್‌ ಯು.ಟಿ.ಖಾದರ್ ವಿರುದ್ಧ ಪ್ರತಿಪಕ್ಷ ಬಿಜೆಪಿ ಭ್ರಷ್ಟಾಚಾರ ಆರೋಪ ಮಾಡಿದೆ. ಹಣಕಾಸು ಇಲಾಖೆಯ ತಿರಸ್ಕಾರದ ನಡುವೆಯೂ ಸಿಎಂ ಸಿದ್ದರಾಮಯ್ಯ ಅವರ ಮಧ್ಯಪ್ರವೇಶದಿಂದ ಅನುಮತಿ ಪಡೆದು ದುಪ್ಪಟ್ಟು ದರದಲ್ಲಿ ಖರೀದಿ ನಡೆಸಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಈ ಬಗ್ಗೆ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗೋಷ್ಠಿ ನಡೆಸಿ ಮಾಡಿರುವ ಆರೋಪ ರಾಜಕೀಯದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ವಿಚಾರದಲ್ಲಿ ಕರಾವಳಿಯ ಬಿಜೆಪಿ ನಾಯಕರೂ ಯು.ಟಿ.ಖಾದರ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಈ ಬೆಳವಣಿಗೆ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಹಿರಿಯ ವಕೀಲರೂ ಆದ, ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರೂ ಆದ ಮನೋರಾಜ್ ರಾಜೀವ್, ಬಿಜೆಪಿ ನಾಯಕರ ವೈಫಲ್ಯಗಳನ್ನು ಮುಂದಿಟ್ಟು ಪ್ರತಿಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಿಂದಿನ ಸರ್ಕಾರದಲ್ಲಿ ಬಿಜೆಪಿ ನಾಯಕರು ಹಲವಾರು ರೀತಿ ಹಗರಣಗಳಲ್ಲಿ ಭಾ...
ಭ್ರಷ್ಟಾಚಾರ ಸ್ಪೀಕರ್ ಕಚೇರಿಯವರೆಗೂ ಹರಡಿದೆ: ಬಿ.ವೈ.ವಿಜಯೇಂದ್ರ

ಭ್ರಷ್ಟಾಚಾರ ಸ್ಪೀಕರ್ ಕಚೇರಿಯವರೆಗೂ ಹರಡಿದೆ: ಬಿ.ವೈ.ವಿಜಯೇಂದ್ರ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ಕಾಂಗ್ರೆಸ್ ಹೈಕಮಾಂಡ್‌ಗೆ "ಎಟಿಎಂ" ಆಗಿ ಪರಿವರ್ತಿಸಿದೆ, ಕಳೆದ ಎರಡೂವರೆ ವರ್ಷಗಳಲ್ಲಿ ಅಭಿವೃದ್ಧಿ ಶೂನ್ಯ ಮತ್ತು ಭ್ರಷ್ಟಾಚಾರ ಸ್ಪೀಕರ್ ಕಚೇರಿಯವರೆಗೂ ಹರಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. The Congress Government has turned Karnataka into an “ATM" for the Congress high command with zero development in the last two and a half years and corruption spreading even to the Speaker’s office.The administration has collapsed due to the open power tussle between… pic.twitter.com/atnQvqxbq5— BJP Karnataka (@BJP4Karnataka) October 28, 2025 ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಮುಕ್ತ ಅಧಿಕಾರ ಜಗಳದಿಂದಾಗಿ ಆಡಳಿತವು ಕುಸಿದಿದೆ, ಆದರೆ ಜನರು ಬಳಲುತ್ತಿದ್ದಾರೆ. ರೈತರು ಯಾವುದೇ ಪರಿಹಾರವಿಲ್ಲದೆ ಸಂಕಷ್ಟದಲ್ಲಿದ್ದಾರೆ, ಗುತ್ತಿಗೆದಾರರು ಮತ್ತು ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ...
ಅಲ್ಬೇನಿಯಾದ AI ಸಚಿವೆ ಡಿಯೆಲ್ಲಾ ಮೊದಲ ಬಾರಿಗೆ ಸಂಸತ್ತಿನಲ್ಲಿ ಭಾಷಣ

ಅಲ್ಬೇನಿಯಾದ AI ಸಚಿವೆ ಡಿಯೆಲ್ಲಾ ಮೊದಲ ಬಾರಿಗೆ ಸಂಸತ್ತಿನಲ್ಲಿ ಭಾಷಣ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಟಿರಾನಾ (ಅಲ್ಬೇನಿಯಾ): ಅಲ್ಬೇನಿಯಾದ ವರ್ಚುವಲ್ ಕೃತಕ ಬುದ್ಧಿಮತ್ತೆ ಸಚಿವೆ ಡಿಯೆಲ್ಲಾ ಮೊದಲ ಬಾರಿಗೆ ಸಂಸತ್ತನ್ನುದ್ದೇಶಿಸಿ ಮಾತನಾಡಿದ್ದಾರೆ. ತಮ್ಮ ವಿರುದ್ಧ ವಿರೋಧ ಪಕ್ಷದ ಶಾಸಕರು ಮಾಡಿದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ನನ್ನನ್ನು ಸಂವಿಧಾನ ವಿರೋಧಿ ಎಂದು ಕರೆಯುವುದರಿಂದ ನನಗೆ ನೋವಾಗಿದೆ,” ಎಂದು ತಿಳಿಸಿದ್ದಾರೆ. 🇦🇱🤖 Albania's virtual AI minister "Diella" addressed parliament for the first time. The AI said she has been "hurt" by opposition lawmakers who called her unconstitutional.She said machines have never threatened the constitution, but inhumane decisions by people in power… pic.twitter.com/7IyFml9KaL— kos_data (@kos_data) September 18, 2025 “ಯಂತ್ರಗಳು ಎಂದಿಗೂ ಸಂವಿಧಾನಕ್ಕೆ ಬೆದರಿಕೆ ಹಾಕಿಲ್ಲ. ಆದರೆ ಅಧಿಕಾರದಲ್ಲಿರುವ ಕೆಲವು ಮನುಷ್ಯರ ಅಮಾನವೀಯ ನಿರ್ಧಾರಗಳೇ ಸಂವಿಧಾನಕ್ಕೆ ನಿಜವಾದ ಅಪಾಯ,” ಎಂದು ಡಿಯೆಲ್ಲಾ ತಮ್ಮ ಭಾಷಣದಲ್ಲಿ ಹೇ...
ಅಲ್ಬೇನಿಯಾದ AI ಸಚಿವೆ ‘ಡಿಯೆಲ್ಲಾ’ ಈಗ ಗರ್ಭಿಣಿ; 83 ‘AI ಮಕ್ಕಳಿಗೆ’ ಜನ್ಮನೀಡುವ ನಿರೀಕ್ಷೆ

ಅಲ್ಬೇನಿಯಾದ AI ಸಚಿವೆ ‘ಡಿಯೆಲ್ಲಾ’ ಈಗ ಗರ್ಭಿಣಿ; 83 ‘AI ಮಕ್ಕಳಿಗೆ’ ಜನ್ಮನೀಡುವ ನಿರೀಕ್ಷೆ

ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಟಿರಾನಾ (ಅಲ್ಬೇನಿಯಾ): ಅಲ್ಬೇನಿಯಾದ ಮೊದಲ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಚಿವೆ ಡಿಯೆಲ್ಲಾ ಈಗ “ಗರ್ಭಿಣಿ” ಎಂದು ಅಲ್ಬೇನಿಯಾ ಪ್ರಧಾನಿ ಎಡಿ ರಾಮ ಘೋಷಿಸಿದ್ದಾರೆ. ಅವರು 83 “AI ಮಕ್ಕಳಿಗೆ” ಜನ್ಮ ನೀಡುವ ನಿರೀಕ್ಷೆಯಿದ್ದು, ಪ್ರತಿಯೊಬ್ಬ ಸಮಾಜವಾದಿ ಪಕ್ಷದ ಸಂಸದನಿಗೂ ಒಬ್ಬ ಸಹಾಯಕನಂತೆ ಕಾರ್ಯನಿರ್ವಹಿಸಲಿದ್ದಾರೆ. ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಜಾಗತಿಕ ಸಂವಾದ (BGD) ಕಾರ್ಯಕ್ರಮದಲ್ಲಿ ಮಾತನಾಡಿದ ರಾಮ, “ನಾವು ಡಿಯೆಲ್ಲಾ ಮೂಲಕ ಹೊಸ ಪ್ರಯೋಗ ಮಾಡಿದ್ದೇವೆ ಮತ್ತು ಅದರಲ್ಲಿ ಯಶಸ್ವಿಯಾಗಿದ್ದೇವೆ. ಈಗ ಅವರು 83 ‘ಮಕ್ಕಳಿಗೆ’ ಜನ್ಮ ನೀಡಲಿದ್ದಾರೆ,” ಎಂದು ಹಾಸ್ಯಾತ್ಮಕವಾಗಿ ಹೇಳಿದರು. ಈ “ಮಕ್ಕಳು” ಅಥವಾ AI ಸಹಾಯಕರು ಸಂಸತ್ತಿನ ಎಲ್ಲಾ ಕಲಾಪಗಳನ್ನು ದಾಖಲಿಸಿ, ಸಂಸದರು ಹಾಜರಾಗಲು ಸಾಧ್ಯವಾಗದ ಸಭೆಗಳ ವಿವರ ಮತ್ತು ಚರ್ಚೆಗಳ ಮಾಹಿತಿಯನ್ನು ನವೀಕರಿಸುವ ಕಾರ್ಯವನ್ನು ನಿರ್ವಹಿಸಲಿದ್ದಾರೆ. “ಪ್ರತಿಯೊಬ್ಬ ಸಹಾಯಕನು ತನ್ನ ‘ತಾಯಿ’ ಡಿಯೆಲ್ಲಾ ಅವರಿಂದ ತರಬೇತಿ ಪಡೆಯಲಿದ್ದಾರೆ,” ಎಂದು ರಾಮ ವಿವರಿಸಿದರು. ಈ ವ್ಯವಸ್ಥೆ 2026ರ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ...
ವಂಚಕ ಸಂಬಂಧಿ ಪರ ಬ್ಯಾಟಿಂಗ್; ಸಿದ್ದು ಆಪ್ತನನ್ನು ಸೆಟಲ್‌ಮೆಂಟ್‌ ಸಚಿವ ಎಂದ ಜೆಡಿಎಸ್

ವಂಚಕ ಸಂಬಂಧಿ ಪರ ಬ್ಯಾಟಿಂಗ್; ಸಿದ್ದು ಆಪ್ತನನ್ನು ಸೆಟಲ್‌ಮೆಂಟ್‌ ಸಚಿವ ಎಂದ ಜೆಡಿಎಸ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ವಂಚಕ ಸಂಬಂಧಿಗೆ ಸಹಾಯ ಮಾಡಲು ಪೊಲೀಸರಿಗೆ ಸಚಿವ ಜಮೀರ್ ಅಹ್ಮದ್ ಅವರು ಒತ್ತಡ ಹೇರಿದ್ದಾರೆ ಎನ್ನಲಾದ ಆಡಿಯೋ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ವಂಚನೆ ಪ್ರಕರಣದಲ್ಲಿ ತಮ್ಮ ಸಂಬಂಧಿಕರ ಪರವಾಗಿ ಸಹಾಯ ಮಾಡುವಂತೆ ಪೊಲೀಸ್‌ ಅಧಿಕಾರಿಗೆ ಫೋನ್‌ ಮಾಡಿ ಶಿಫಾರಸ್ಸು ಮಾಡಿರುವ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಅವರು, ಕರ್ನಾಟಕದ ಅನ್ನ ತಿಂದು, ಕನ್ನಡಿಗರ ಮತ ಪಡೆದು ಕನ್ನಡಿಗರಿಗೆ ದ್ರೋಹ ಬಗೆದಿದ್ದಾರೆ ಎಂದು ಜೆಡಿಎಸ್ ಪಕ್ಷ ಆರೋಪಿಸಿದೆ. ಕರ್ನಾಟಕದ ಅನ್ನ ತಿಂದು, ಕನ್ನಡಿಗರ ಮತ ಪಡೆದು ಕನ್ನಡಿಗರಿಗೆ ದ್ರೋಹ ಬಗೆಯುವ ಸಚಿವ @BZZameerAhmedK ನಿಮಗೆ ನಾಚಿಕೆಯಾಗಬೇಕು !ರಾಜ್ಯದ ರೈತರಿಗೆ ವಂಚಿಸಿರುವ ನಿಮ್ಮ ಸಂಬಂಧಿಕರ ಪರವಾಗಿ ಸಹಾಯ ಮಾಡುವಂತೆ ಪೊಲೀಸ್‌ ಅಧಿಕಾರಿಗೆ ಫೋನ್‌ ಮಾಡಿ ಶಿಫಾರಸ್ಸು ಮಾಡಿರುವುದು ಅಕ್ಷಮ್ಯ. ರಾಜ್ಯದ ಜವಾಬ್ದಾರಿಯುತ ಸಚಿವರಾಗಿ ವಂಚಕರ ಪರ ವಹಿಸಿ,… pic.twitter.com/rNrq8xNbTV— Janata Dal Secular (@JanataDal_S) October 25, 2025 ಪೊಲೀಸರಿಗೆ ಸಚಿವ ಜಮೀರ್ ಅಹ್ಮದ್ ಅವರು ಒತ್ತಡ ಹೇರಿದ್ದಾರೆ ಎನ್ನಲಾದ ಫೋನೋ ಆಡಿಯೋವನ್...
‘ಹಿಟ್ ಅಂಡ್ ರನ್ ಪ್ರಕರಣ: ಬೆಂಗಳೂರು ಪೊಲೀಸರಿಂದ ದಿವ್ಯಾ ಸುರೇಶ್ ವಿಚಾರಣೆ?

‘ಹಿಟ್ ಅಂಡ್ ರನ್ ಪ್ರಕರಣ: ಬೆಂಗಳೂರು ಪೊಲೀಸರಿಂದ ದಿವ್ಯಾ ಸುರೇಶ್ ವಿಚಾರಣೆ?

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ, ಸಿನಿಮಾ
ಬೆಂಗಳೂರು: ಬೆಂಗಳೂರಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾದ ಹಿಟ್ ಅಂಡ್ ರನ್ ಪ್ರಕರಣದ ಪೊಲೀಸ್ ತನಿಖೆಯಲ್ಲಿ ಕನ್ನಡ ನಟಿ ಮತ್ತು ಬಿಗ್ ಬಾಸ್ ಕನ್ನಡ ಸ್ಪರ್ಧಿ ದಿವ್ಯಾ ಸುರೇಶ್ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಮೂವತ್ನಾಲ್ಕು ವರ್ಷದ ಅನಿತಾ ಅವರ ಕಾಲಿನ ಮೂಳೆ ಮುರಿತಕ್ಕೊಳಗಾಗಿದ್ದು, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇತರ ಇಬ್ಬರು ಸವಾರರು ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎನ್ನಲಾಗಿದೆ. Weeks after a late-night hit-and-run accident in Bengaluru, the city traffic police on Friday identified ex Bigg Boss Kannada contestant Divya Suresh as the alleged driver of the car involved in the accident that left three people injured. The accident took place near Nithya… pic.twitter.com/ucoigQ6FWn— Karnataka Portfolio (@karnatakaportf) October 24, 2025 ದಿವ್ಯಾ ಸುರೇಶ್ ಪ್ರಸ್ತುತ ಒಂದು ಪ್...
ಖರ್ಗೆಯವರ ಕುಟುಂಬ ಯಾವುದೇ ದಲಿತರನ್ನು ಬೆಳೆಸಿಲ್ಲ; ಛಲವಾದಿ ನಾರಾಯಣ ಸ್ವಾಮಿ

ಖರ್ಗೆಯವರ ಕುಟುಂಬ ಯಾವುದೇ ದಲಿತರನ್ನು ಬೆಳೆಸಿಲ್ಲ; ಛಲವಾದಿ ನಾರಾಯಣ ಸ್ವಾಮಿ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬ ಯಾವುದೇ ದಲಿತರನ್ನು ಬೆಳೆಸಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ. ಅದರಲ್ಲೂ ಪ್ರಿಯಾಂಕ್ ಖರ್ಗೆ ವಿರುದ್ಧ ಅವರು ಅಕ್ರೋಶ ವ್ಯಕ್ತಪಡಿಸಿರುವ ವೈಖರಿ ಗಮನಸೆಳೆದಿದೆ. ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಕುಟುಂಬ ಯಾವುದೇ ದಲಿತರನ್ನು ಬೆಳೆಸಿಲ್ಲ. ದಲಿತ ಸಮುದಾಯದ ಸಮಸ್ಯೆಗಳ ಕುರಿತು ಧ್ವನಿಯನ್ನೂ ಎತ್ತಿಲ್ಲ. ದಲಿತ ಸಮುದಾಯದ ಯಾವುದೇ ಹೋರಾಟಕ್ಕೂ ಕೈಜೋಡಿಸಿಲ್ಲ. ದಲಿತ ಸಮುದಾಯವನ್ನು ನಿಮ್ಮ ಸ್ವಾರ್ಥಕ್ಕಾಗಷ್ಟೇ ಬಳಸಿಕೊಂಡಿದ್ದೀರಿ. ನೂರು ವರ್ಷಗಳಿಂದ ದೇಶಕ್ಕಾಗಿ ಮತ್ತು ಸಮಾಜಕ್ಕಾಗಿ ಕೆಲಸ ಮಾಡಿರುವ… pic.twitter.com/oP5sHqdPU7— BJP Karnataka (@BJP4Karnataka) October 24, 2025 'ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಕುಟುಂಬ ಯಾವುದೇ ದಲಿತರನ್ನು ಬೆಳೆಸಿಲ್ಲ. ದಲಿತ ಸಮುದಾಯದ ಸಮಸ್ಯೆಗಳ ಕುರಿತು ಧ್ವನಿಯನ್ನೂ ಎತ್ತಿಲ್ಲ. ದಲಿತ ಸಮುದಾಯದ ಯಾವುದೇ ಹೋರಾಟಕ್ಕೂ ಕೈಜೋಡಿಸಿಲ್ಲ. ದಲಿತ ಸಮುದಾಯವನ್ನು ನಿಮ್ಮ ಸ್ವಾರ್ಥಕ್ಕಾಗಷ್ಟೇ ಬಳಸಿಕೊಂಡಿದ್ದೀರಿ' ಎಂದು ಛಲವಾದಿ ನಾರಾಯಣ...