Wednesday, June 25

‘ಮಹಾ ಕುಂಭಮೇಳ’ದಲ್ಲಿ ಸನಾತನ ಬಗ್ಗೆ ಕೆಣಕಿದ ಯೂಟ್ಯೂಬರ್’ಗೆ ನಾಗಾಸಾಧು ಧರ್ಮದೇಟು

ಪ್ರಯಾಗರಾಜ್: ಉತ್ತರಪ್ರದೇಶದ ಪ್ರಯಾಗರಾಜ್’ನಲ್ಲಿ ನಡೆಯುತ್ತಿರುವ ಶತಮಾನದ ವೈಭವದ ಮಹಾಕುಂಭಮೇಳ ಜಗತ್ತಿನ ಗಮನಸೆಳೆದಿದೆ. ಹಿಂದೂ ಧರ್ಮದ ಅತ್ಯಂತ ದೊಡ್ಡ ಹಾಗೂ ಅತ್ಯಂತ ಪವಿತ್ರ ಉತ್ಸವಗಳಲ್ಲಿ ಈ ಮಹಾ ಕುಂಭಮೇಳ ಒಂದಾಗಿದೆ. ಕೋಟ್ಯಂತರ ಆಸ್ತಿಕರ ಸಮಾಗಮಕ್ಕೆ ಸಾಕ್ಷಿಯಾಗುತ್ತಿರುವ ಈ ಮಹಾಕುಂಭ ಮೇಳದಲ್ಲಿ ಲಕ್ಷಾಂತರ ನಾಗ ಸಾಧುಗಳು, ಸಾಧು ಸಂತರುಗಳು ಜಮಾಯಿಸಿದ್ದಾರೆ.

 ಈ ನಡುವೆ ಯೂಟ್ಯೂಬರ್ ಒಬ್ಬ ಧ್ಯಾನಾಸಕ್ತ ಸಾಧುಸಂತರನ್ನು ಕೆಣಕಲು ಹೋಗಿ ಧರ್ಮದೇಟು ತಿಂದಿದ್ದಾನೆ. ಮಹಾಕುಂಭದಲ್ಲಿ ಭಾಗಿಯಾಗಿದ್ದ ನಾಗಾ ಸಾಧುವೊಬ್ಬರ ಸಂದರ್ಶನ ನಡೆಸಿದ ಯೂಟ್ಯೂಬರ್ ಸನಾತನ ಸಂಪ್ರದಾಯದ ಬಗ್ಗೆ ಅಸಂಬದ್ಧ ಪ್ರಶ್ನೆ ಕೇಳಿದ್ದಾನೆ. ಇದರಿಂದ ಕುಪಿತರಾದ ನಾಗಾಸಾಧು ಆ ಯೂಟ್ಯೂಬರನ್ನು ಹೊಡೆದು ಸಿಟ್ಟು ತೋರಿಸಿಕೊಂಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.