
ಮಂಗಳೂರು: ಯೆನೆಪೋಯ ದಂತ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ.ಸಂದೀಪ್ ಶೆಟ್ಟಿ ಅವರ ಮಹಾ ಪ್ರಬಂಧಕ್ಕೆ ಪಿಹೆಚ್ಡಿ ಪದವಿ ಲಭಿಸಿದೆ.
ಡಾ.ಸಂದೀಪ್ ಶೆಟ್ಟಿ ಅವರು ಮಂಗಳೂರಿನ ಯೆನೆಪೋಯ ದಂತ ಮಹಾ ವಿದ್ಯಾಲಯದ ವಕ್ರದಂಥ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ಅವರು ಮಂಡಿಸಿದ ‘ಡೆವಲಪ್ಮೆಂಟ್ ಆಫ್ ಸೇವ್, ನಾವೆಲ್ ಅಪ್ಪಲಿಯೇನ್ಸ ಅಂಡ್ ಇಟ್ಸ್ ಫೈನೈಟ್ ಎಲಿಮೆಂಟ್ ಎವಲ್ಯೂಯೇಷನ್ ಫಾರ್ ಕರೆಕ್ಟಿನ್ಗ್ ಡೆಫಿಷಿಯೆಂಟ್ ಮ್ಯಾಕ್ಸಿಲ್ಲ” ಎಂಬ ಪ್ರಭಂದಕ್ಕೆ ಯೆನೆಪೋಯ ಪರಿಗಣಿತ ವಿಶ್ವ ವಿದ್ಯಾಲಯವು ಪಿ.ಎಚ್.ಡಿ ನೀಡಿ ಪುರಸ್ಕರಿಸಿದೆ. ಯೆನೆಪೋಯ ದಂತ ವಿದ್ಯಾಲಯದ ಪ್ರಾದ್ಯಾಪಕರಾದ ಡಾ. ಬಿ.ಟಿ ನಂದೀಶ್ ರವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ಮಂಡಿಸಲಾಗಿದೆ.