‘ಸಿಎಂ ವಿರುದ್ದದ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ರೀತಿ ಸರಿಯಿಲ್ಲ’; ಮಾಜಿ ಪ್ರಾಸಿಕ್ಯೂಟರ್ ಹೇಳೋದು ಹೀಗೆ..!
ಬೆಂಗಳೂರು: ಮುಡಾ ಅಕ್ರಮ ಆರೋಪ ಕುರಿತಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ಕ್ರಮಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ವಿರುದ್ದ ಟಿ.ಜೆ.ಅಬ್ರಾಹಿಂ ಎನ್ನುವ ವ್ಯಕ್ತಿ ಲೋಕಾಯುಕ್ತದಲ್ಲಿ ದೂರನ್ನು ದಾಖಲಿಸುತ್ತಾರೆ. ಅದರ ಪ್ರಕಾರ ಪೊಲೀಸರು ಇದರಲ್ಲಿ ಅನುಮತಿ ಪಡೆಯಬೇಕೆ ಹೊರತು ಬೇರೆಯವರು ಪಡೆಯುವಂತಿಲ್ಲ ಎಂದು ಮಾಜಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಚಂದ್ರಮೌಳಿ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಮೌಳಿ, ದೂರುದಾರ ಟಿ.ಜೆ.ಅಬ್ರಾಹಿಂ ಎನ್ನುವ ವ್ಯಕ್ತಿ ಲೋಕಾಯುಕ್ತದಲ್ಲಿ ದೂರನ್ನು ದಾಖಲಿಸುತ್ತಾರೆ. ಅದರ ಪ್ರಕಾರ ಪೊಲೀಸರು ಇದರಲ್ಲಿ ಅನುಮತಿ ಪಡೆಯಬೇಕೆ ಹೊರತು ಬೇರೆಯವರು ಪಡೆಯುವಂತಿಲ್ಲ. ಎಲ್ಲಿಯೂ ದೂರನ್ನು ದಾಖಲಿಸದೆ ಸೀದಾ ರಾಜ್ಯಪಾಲರ ಭವನದ ಕದ ತಟ್ಟುತ್ತಾರೆ. ರಾಜ್ಯಪಾಲರ ಬಳಿ ದೂರನ್ನು ದಾಖಲಿಸುವ ಮೊದಲು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಬೇಕು. ಹಾಗೂ ಪೊಲೀಸರ ಬಳಿ ನನಗೆ ನ್ಯಾಯ ದೊರಕುತ್ತಿಲ್ಲ ನನ್ನ ಬಳಿ ಅಗತ್ಯ ದಾಖಲೆಗಳಿವೆ. ನಾನು ಈ ಪ್ರಕರಣವನ್ನು ಸಾಬೀತುಪಡಿಸುತ...








