Tuesday, June 24

ವೀಡಿಯೊ

ರಜನಿಕಾಂತ್ ಮತ್ತೊಂದು ಇನ್ನಿಂಗ್ಸ್.. ‘ಜೈಲರ್ 2’ ಟೀಸರ್ ಅನಾವರಣ

ರಜನಿಕಾಂತ್ ಮತ್ತೊಂದು ಇನ್ನಿಂಗ್ಸ್.. ‘ಜೈಲರ್ 2’ ಟೀಸರ್ ಅನಾವರಣ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ, ಸಿನಿಮಾ
ಚೆನ್ನೈ: ನಿರ್ದೇಶಕ ನೆಲ್ಸನ್ ಅವರು ಸೂಪರ್‌ಸ್ಟಾರ್ ರಜನಿಕಾಂತ್ ನಾಯಕನಾಗಿರುವ ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೈನರ್ 'ಜೈಲರ್ 2' ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಮೆಗಾ ಬಜೆಟ್'ನ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಚಿತ್ರವನ್ನು ನಿರ್ಮಿಸುತ್ತಿರುವ ಸನ್ ಪಿಕ್ಚರ್ಸ್, ಪೊಂಗಲ್ ಹಬ್ಬದ ಶುಭ ದಿನದಂದು ಟೀಸರ್ ಅನ್ನು ಬಿಡುಗಡೆ ಮಾಡಿದೆ. ಟೀಸರ್ ಹಂಚಿಕೊಂಡಿರುವ "ಸನ್ ಪಿಕ್ಚರ್ಸ್' 'ಜೈಲರ್ 2' ಸಿನಿಮಾದಲ್ಲಿ ಸೂಪರ್‌ಸ್ಟಾರ್ ಪಾತ್ರದ ಸುಳಿವನ್ನು ನೀಡಿದೆ. ಭಾಗ 1 ರಂತೆಯೇ, 'ಜೈಲರ್ 2'ರಲ್ಲಿ ಅನಿರುದ್ಧ್ ಸಂಗೀತ ಸಂಯೋಜಿಸಲಿದ್ದಾರೆ ಮತ್ತು ನೆಲ್ಸನ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಸಂಗೀತ ನಿರ್ದೇಶಕ ಅನಿರುದ್ಧ್ ಮತ್ತು ನಿರ್ದೇಶಕ ನೆಲ್ಸನ್ ಗೋವಾದಲ್ಲಿ ತಮಾಷೆಯ ಸಂಭಾಷಣೆ ನಡೆಸುತ್ತಿರುವಾಗ, ರೇಡಿಯೊದಲ್ಲಿ ಚಂಡಮಾರುತವು ಕರಾವಳಿಗೆ ಬರುತ್ತಿದೆ ಎಂಬ ಘೋಷಣೆಯೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ, ಅಲ್ಲಿ ಅವರು ನೆಲ್ಸನ್ ಹೇಳುವ ಕಥೆಯ ಚರ್ಚೆಯ ಮೂಲಕ ಬಂದಿದ್ದಾರೆ. https://www.youtube.com/watch?v=sl7gy2uxhjY ಸಂಗೀತ ನಿರ್ದೇಶಕ ಮತ್ತು ನಿರ್ದೇಶಕ ಇಬ್ಬರೂ ರಕ್ಷಣೆಗ...
‘ಮಹಾ ಕುಂಭಮೇಳ’ದಲ್ಲಿ ಸನಾತನ ಬಗ್ಗೆ ಕೆಣಕಿದ ಯೂಟ್ಯೂಬರ್’ಗೆ ನಾಗಾಸಾಧು ಧರ್ಮದೇಟು

‘ಮಹಾ ಕುಂಭಮೇಳ’ದಲ್ಲಿ ಸನಾತನ ಬಗ್ಗೆ ಕೆಣಕಿದ ಯೂಟ್ಯೂಬರ್’ಗೆ ನಾಗಾಸಾಧು ಧರ್ಮದೇಟು

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಪ್ರಯಾಗರಾಜ್: ಉತ್ತರಪ್ರದೇಶದ ಪ್ರಯಾಗರಾಜ್'ನಲ್ಲಿ ನಡೆಯುತ್ತಿರುವ ಶತಮಾನದ ವೈಭವದ ಮಹಾಕುಂಭಮೇಳ ಜಗತ್ತಿನ ಗಮನಸೆಳೆದಿದೆ. ಹಿಂದೂ ಧರ್ಮದ ಅತ್ಯಂತ ದೊಡ್ಡ ಹಾಗೂ ಅತ್ಯಂತ ಪವಿತ್ರ ಉತ್ಸವಗಳಲ್ಲಿ ಈ ಮಹಾ ಕುಂಭಮೇಳ ಒಂದಾಗಿದೆ. ಕೋಟ್ಯಂತರ ಆಸ್ತಿಕರ ಸಮಾಗಮಕ್ಕೆ ಸಾಕ್ಷಿಯಾಗುತ್ತಿರುವ ಈ ಮಹಾಕುಂಭ ಮೇಳದಲ್ಲಿ ಲಕ್ಷಾಂತರ ನಾಗ ಸಾಧುಗಳು, ಸಾಧು ಸಂತರುಗಳು ಜಮಾಯಿಸಿದ್ದಾರೆ. महाकुंभ में कवरेज करने आये युट्यूबरो को मुश्किलें ज्यादा होगी! अपने चैनल के रीच को बढ़ाने के चक्कर मे फालतू सवाल पूछेगे बाबा जी लोग चिमटे से ठोक पीट कर सही कर देंगे।🤣 pic.twitter.com/vk4WsJMRcB — Suresh Singh (@sureshsinghj) January 12, 2025  ಈ ನಡುವೆ ಯೂಟ್ಯೂಬರ್ ಒಬ್ಬ ಧ್ಯಾನಾಸಕ್ತ ಸಾಧುಸಂತರನ್ನು ಕೆಣಕಲು ಹೋಗಿ ಧರ್ಮದೇಟು ತಿಂದಿದ್ದಾನೆ. ಮಹಾಕುಂಭದಲ್ಲಿ ಭಾಗಿಯಾಗಿದ್ದ ನಾಗಾ ಸಾಧುವೊಬ್ಬರ ಸಂದರ್ಶನ ನಡೆಸಿದ ಯೂಟ್ಯೂಬರ್ ಸನಾತನ ಸಂಪ್ರದಾಯದ ಬಗ್ಗೆ ಅಸಂಬದ್ಧ ಪ್ರಶ್ನೆ ಕೇಳಿದ್ದಾನೆ. ಇದರಿಂದ ಕುಪಿತರಾದ ನಾಗಾಸಾಧು ಆ ಯೂಟ್ಯೂಬರನ್ನು ಹೊಡೆದು ಸಿಟ್ಟು ತೋರಿಸಿಕೊ...
ಡಾಲಿ ಧನಂಜಯ್, ನಾಗಭೂಷಣ್ ಕಾಂಬಿನೇಷನ್​ನ ‘ವಿದ್ಯಾಪತಿ’ ಬಿಡುಗಡೆಗೆ ಡೇಟ್ ಫಿಕ್ಸ್

ಡಾಲಿ ಧನಂಜಯ್, ನಾಗಭೂಷಣ್ ಕಾಂಬಿನೇಷನ್​ನ ‘ವಿದ್ಯಾಪತಿ’ ಬಿಡುಗಡೆಗೆ ಡೇಟ್ ಫಿಕ್ಸ್

Focus, Update Videos, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ, ಸಿನಿಮಾ
ಡಾಲಿ ಧನಂಜಯ್ ಮತ್ತು ನಾಗಭೂಷಣ್ ಕಾಂಬಿನೇಷನ್​ನ ಸಿನಿಮಾ ‘ವಿದ್ಯಾಪತಿ’ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಡಾಲಿ ಧನಂಜಯ್ ನಿರ್ಮಾಣ ಮಾಡಿರುವ, ನಾಗಭೂಷಣ್ ನಟಿಸಿರುವ ‘ವಿದ್ಯಾಪತಿ’ ಮುಂಬರುವ ಏಪ್ರಿಲ್ ೧೦ರಂದು ಬಿಡುಗಡೆಯಾಗಲಿದೆ. ಈ ಕುರಿತಂತೆ ಡಾಲಿ ಪಿಕ್ಚರ್ಸ್ ತಂಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.   View this post on Instagram   A post shared by Daali Pictures (@daalipictures)...
ಶ್ರೀನಗರ: 6.5 ಕಿ.ಮೀ ಉದ್ದದ ʼಝಡ್-ಮೋರ್ಹ್ ಸುರಂಗ ಮಾರ್ಗ ಪ್ರಧಾನಿ ಲೋಕಾರ್ಪಣೆ

ಶ್ರೀನಗರ: 6.5 ಕಿ.ಮೀ ಉದ್ದದ ʼಝಡ್-ಮೋರ್ಹ್ ಸುರಂಗ ಮಾರ್ಗ ಪ್ರಧಾನಿ ಲೋಕಾರ್ಪಣೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಸೋನಾಮಾರ್ಗ್‌ನಲ್ಲಿ 6.5 ಕಿ.ಮೀ ಉದ್ದದ ʼಝಡ್-ಮೋರ್ಹ್ ಸುರಂಗ ಮಾರ್ಗʼವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದರು. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಜಿತೇಂದ್ರ ಸಿಂಗ್, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಸಮ್ಮುಖದಲ್ಲಿ ಪ್ರಧಾನಿ ಮೋದಿ ಇಂದು ಉದ್ಘಾಟಿಸಿದರು. #WATCH | Jammu & Kashmir: Prime Minister Narendra Modi inaugurates the Z-Morh tunnel in Sonamarg today. CM Omar Abdullah and LG Manoj Sinha, Union Minister Nitin Gadkari are also present. (Source: DD/ANI)#KashmirOnTheRise pic.twitter.com/GF7rwZaVn1 — ANI (@ANI) January 13, 2025 ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯಲ್ಲಿ ಈ ಸುರಂಗ ಮಾರ್ಗವು ಹಿಮಕುಸಿತ, ಭೂಕುಸಿತದಂತಹ ಎಲ್ಲ ರೀತಿಯ ಹವಾಮಾನ ವೈಪರೀತ್ಯದ ಸಂದರ್ಭದಲ್ಲಿಯೂ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ....
ಆಘಾತಕಾರಿ ಮಿದುಳು ಹಾನಿಯಿಂದ ಮಹಿಳೆಯರಿಗಿಂತ ಮೂರು ಪಟ್ಟು ಪುರುಷರ ಸಾವು

ಆಘಾತಕಾರಿ ಮಿದುಳು ಹಾನಿಯಿಂದ ಮಹಿಳೆಯರಿಗಿಂತ ಮೂರು ಪಟ್ಟು ಪುರುಷರ ಸಾವು

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ, ವೈವಿಧ್ಯ
ನವದೆಹಲಿ: ಆಘಾತಕಾರಿ ಮಿದುಳಿನ ಗಾಯದಿಂದ (TBI) ಪುರುಷರು ಮಹಿಳೆಯರಿಗಿಂತ ಮೂರು ಪಟ್ಟು ಹೆಚ್ಚು ಸಾಯುತ್ತಾರೆ ಎಂಬ ಕಹಿ ಸತ್ಯವೊಂದು ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ. 2021 ರಲ್ಲಿ US ಮರಣ ದತ್ತಾಂಶವನ್ನು ಆಧರಿಸಿದ ಅಧ್ಯಯನವು ವಯಸ್ಸಾದ ವಯಸ್ಕರು, ಪುರುಷರು ಮತ್ತು ಕೆಲವು ಜನಾಂಗೀಯ ಮತ್ತು ಜನಾಂಗೀಯ ಗುಂಪುಗಳ ಮೇಲೆ ಆಘಾತಕಾರಿ ಮಿದುಳಿನ ಗಾಯಗಳ (TBI) ಅಸಮಾನ ಪರಿಣಾಮವನ್ನು ಬಹಿರಂಗಪಡಿಸಿದೆ. ಪೀರ್-ರಿವ್ಯೂಡ್ ಜರ್ನಲ್ ಬ್ರೈನ್ ಇಂಜುರಿಯಲ್ಲಿ ಪ್ರಕಟವಾದ ಸಂಶೋಧನೆಗಳು, ಆತ್ಮಹತ್ಯೆಗಳು ಟಿಬಿಐ-ಸಂಬಂಧಿತ ಸಾವುಗಳಿಗೆ ಸಾಮಾನ್ಯ ಕಾರಣವಾಗಿ ಉಳಿದಿವೆ ಎಂದು ಸೂಚಿಸುತ್ತವೆ. ಇದರ ನಂತರ ಉದ್ದೇಶಪೂರ್ವಕವಲ್ಲದ ಬೀಳುವಿಕೆಗಳು ಸಂಭವಿಸಿದವು ಮತ್ತು ನಿರ್ದಿಷ್ಟ ಗುಂಪುಗಳು ಈ ದುರಂತಗಳಿಂದ ಅಸಮಾನವಾಗಿ ಪರಿಣಾಮ ಬೀರುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಪುರುಷರು ಟಿಬಿಐನಿಂದ ಸಾಯುವ ಸಾಧ್ಯತೆ ಹೆಚ್ಚು ಎಂದು ಕಂಡುಬಂದಿದೆ - ಮಹಿಳೆಯರ ದರಕ್ಕಿಂತ ಮೂರು ಪಟ್ಟು ಹೆಚ್ಚು (30.5 vs 9.4). ಪುರುಷರ ಜೊತೆಗೆ, ವಯಸ್ಸಾದ ವಯಸ್ಕರು ವಿಶೇಷವಾಗಿ ಅಪಾಯದಲ್ಲಿದ್ದಾರೆ, ಉದ್ದೇಶಪೂರ್ವಕವಲ್ಲದ ಬೀಳುವಿಕೆಗ...
ದೇವಸ್ಥಾನಗಳಲ್ಲಿ ವಿಐಪಿ ‘ದರ್ಶನ’ದ ಕಲ್ಪನೆ ತ್ಯಜಿಸಬೇಕು; ಉಪರಾಷ್ಟ್ರಪತಿ

ದೇವಸ್ಥಾನಗಳಲ್ಲಿ ವಿಐಪಿ ‘ದರ್ಶನ’ದ ಕಲ್ಪನೆ ತ್ಯಜಿಸಬೇಕು; ಉಪರಾಷ್ಟ್ರಪತಿ

Focus, ಆಧ್ಯಾತ್ಮ, ದೇಗುಲ ದರ್ಶನ, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಮಂಗಳೂರು: ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲೂ ತಿರುಪತಿ ಮಾದರಿಯಲ್ಲಿ ಕ್ಯೂ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ಸಂಬಂಧ ನಿರ್ಮಿಸಲಾಗಿರುವ ನೂತನ ಸಂಕೀರ್ಣವನ್ನು ಉಪರಾಷ್ಟ್ರಪತಿ ಜಗದೀಪ್ ಧನ್‌ಕ‌ರ್ ಅವರು ಮಂಗಳವಾರ ಉದ್ಘಾಟಿಸಿದರು. ಸರತಿ ಸಾಲಿನ ವ್ಯವಸ್ಥೆ ಸಂಕೀರ್ಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ಜಗದೀಪ್ ಧನಕರ್, ನಮ್ಮ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದ ಮೂಲಸೌಕರ್ಯ ಬೆಳವಣಿಗೆಯಾಗಿರುವುದು ಸಮಾಧಾನಕರ ಬೆಳವಣಿಗೆ ಎಂದ್ರು. ಧಾರ್ಮಿಕ ಕೇಂದ್ರಗಳು ನಮ್ಮ ನಾಗರಿಕ ಮೌಲ್ಯಗಳ ಕೇಂದ್ರಗಳಾಗಿವೆ. ಯಾವುದೇ ವ್ಯಕ್ತಿ ಇಲ್ಲದ ಕಾರಣ ಸಮಾನತೆಯ ಸಂಕೇತವಾದ ಧಾರ್ಮಿಕ ಸಂಸ್ಥೆಗಳು ಸರ್ವಶಕ್ತ ದೇವರ ಮುಂದೆ ಶ್ರೇಷ್ಠವಾಗಿವೆ ಎಂದರು. VIDEO | Vice President Jagdeep Dhankhar speaking at the inauguration ceremony of a queue system complex at Shri Kshethra Dharmasthala says, "A soothing change in recent years in our country has been infrastructural growth that is germane to ou...
HMPV ಬಗ್ಗೆ ಆತಂಕ ಬೇಡ, ಮುನ್ನೆಚ್ಚರಿಕೆ ಇರಲಿ; ಅರೋಗ್ಯ ಸಚಿವರ ಸಲಹೆ

HMPV ಬಗ್ಗೆ ಆತಂಕ ಬೇಡ, ಮುನ್ನೆಚ್ಚರಿಕೆ ಇರಲಿ; ಅರೋಗ್ಯ ಸಚಿವರ ಸಲಹೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಚೀನಾದಲ್ಲಿ ಭೀತಿಯ ಅಲೆ ಎಬ್ಬಿಸಿರುವ HMPV ಹೊಸ ವೈರಸ್ ಅಲ್ಲ, ಅನೇಕ ವರ್ಷಗಳ ಹಿಂದಿನಿಂದಲೂ ಈ ವೈರಸ್ ಹಾವಳಿ ಇದೆ. ಹಾಗಾಗಿ ಈ ಸೋಂಕಿನ ಬಗ್ಗೆ ಆಂತಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. VIDEO | Here's what Karnataka Health Minister Dinesh Gundu Rao (@dineshgrao) said on an 8-month-old baby suspected to be infected with HMPV in Bengaluru. "I don't think we should be pressing the panic button, because HMPV is not a new virus, it's an existing virus. The reports… pic.twitter.com/43xS94LUzT — Press Trust of India (@PTI_News) January 6, 2025 ಬೆಂಗಳೂರಿನಲ್ಲಿ ಮಕ್ಕಳಲ್ಲಿ HMPV ಸೋಂಕು ದೃಢಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ದೇಶದಲ್ಲಿ ಇದು ಮೊದಲ ಪ್ರಕರಣ ಎಂಬುದು ನಿಜವಲ್ಲ. HMPV ಅಸ್ತಿತ್ವದಲ್ಲಿರುವ ವೈರಸ್. ಈ ವೈರಸ್ ನಿಂದ ಉಸಿರಾಟದ ತೊಂದರೆ ಸಮಸ್ಯೆ ಸಾಧ್ಯತೆ ಇದೆ. ಈ ವೈರಸ್​ ಕಡಿಮೆ ಇಮ್ಯೂನಿಟಿ ಹೊಂದಿರುವವರಿಗೆ ಬರುತ್ತದೆ ಎಂದರ...
ಪ್ರಧಾನಿ ಮೋದಿ ಕಳುಹಿಸಿದ ಚಾದರ್ ಅಜ್ಮೀರ್ ದರ್ಗಾಕ್ಕೆ ಸಮರ್ಪಣೆ

ಪ್ರಧಾನಿ ಮೋದಿ ಕಳುಹಿಸಿದ ಚಾದರ್ ಅಜ್ಮೀರ್ ದರ್ಗಾಕ್ಕೆ ಸಮರ್ಪಣೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ನವದೆಹಲಿ : ಪ್ರಸಿದ್ಧ ಅಜ್ಮೀರ್ ದರ್ಗಾಕ್ಕೆ ಪ್ರಧಾನಿ ನರೇಂದ್ರ ಮೋದಿ ಕಳುಹಿಸಿರುವ ಚಾದರ್ ಅನ್ನು ಭಕ್ತಿ ಪೂರ್ವಕವಾಗಿ ಸಮರ್ಪಿಸಲಾಗಿದೆ. On the very auspicious occasion of the 813th Urs of Khwaja Moinuddin Chishti, I had the privilege of visiting the revered Dargah Ajmer Sharif. On behalf of Hon'ble PM Shri @narendramodi ji, I offered the sacred chadar, a timeless gesture of faith, unity & peace that inspires… pic.twitter.com/pWOOQw93yh — Kiren Rijiju (@KirenRijiju) January 4, 2025 ಸೂಫಿ ಸಂತ ಖಾಜಾ ಮೊಹಿನುದ್ದೀನ್ ಚಿಶ್ತಿ ಅವರ ಉರುಸ್ ಅಂಗವಾಗಿ ಅಜ್ಮೀರ್ ದರ್ಗಾಕ್ಕೆ ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ 'ಚಾದರ್' ಅನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಶನಿವಾರ ಅಜ್ಮೀರ್ ದರ್ಗಾಕ್ಕೆ ಸಮರ್ಪಿಸಿದರು. ಇಂಗ್ಲಿಷ್'ನಲ್ಲೂ ಉದಯ ನ್ಯೂಸ್ ಲಭ್ಯ.. Read More.. WE AIM TO FOSTER HARMONY, SAYS RIJIJU AFTER PRESENTING PM MODI'S 'CHADAR' AT AJ...
ಬಸ್‌ ಟಿಕೆಟ್‌ ದರ ಏರಿಕೆ ಖಂಡಿಸಿ ಪ್ರತಿಭಟನೆ, ಬಸ್‌ ಪ್ರಯಾಣಿಕರ ಕೈಗೆ ಹೂ ನೀಡಿದ ಬಿಜೆಪಿ ನಾಯಕರು

ಬಸ್‌ ಟಿಕೆಟ್‌ ದರ ಏರಿಕೆ ಖಂಡಿಸಿ ಪ್ರತಿಭಟನೆ, ಬಸ್‌ ಪ್ರಯಾಣಿಕರ ಕೈಗೆ ಹೂ ನೀಡಿದ ಬಿಜೆಪಿ ನಾಯಕರು

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಮಾಡಿರುವ ಬಸ್‌ ಟಿಕೆಟ್‌ ದರ ಏರಿಕೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ವಿಭಿನ್ನವಾಗಿ ಪ್ರತಿಭಟಿಸಿದರು. ಬಸ್‌ ಪ್ರಯಾಣಿಕರ ಕೈಗೆ ಹೂ ನೀಡಿ, ಸಿಎಂ ಸಿದ್ದರಾಮಯ್ಯನವರ ಪರವಾಗಿ ಕ್ಷಮೆ ಯಾಚಿಸಿದ ಸನ್ನಿವೇಶ ಗಮನಸೆಳೆಯಿತು. ಬಸ್‌ನಲ್ಲಿ ಕುಳಿತಿದ್ದ ಪ್ರಯಾಣಿಕರ ಬಳಿ ಹೋದ ಪ್ರತಿಪಕ್ಷ ನಾಯಕರಾದ ಆರ್‌.ಅಶೋಕ ಹಾಗೂ ಛಲವಾದಿ ನಾರಾಯಣಸ್ವಾಮಿ, 'ಕಾಂಗ್ರೆಸ್‌ ಸರ್ಕಾರ ಬೆಲೆ ಏರಿಕೆ ಮಾಡುವುದಿಲ್ಲವೆಂದು ನೀವು ಮತ ನೀಡಿದ್ದೀರಿ. ಆದರೆ ಮಾತಿಗೆ ತಪ್ಪಿದ ಸರ್ಕಾರ ಹೊಸ ವರ್ಷದಂದೇ ಟಿಕೆಟ್‌ ದರ ಏರಿಕೆ ಮಾಡಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯನವರ ಪರವಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ' ಎಂದರು. ಬಸ್‌ ದರ ಏರಿಕೆಯ ಮೂಲಕ ಪ್ರಯಾಣಿಕರ ಕಿವಿಗೆ ಹೂವು ಇಡುತ್ತಿರುವ @INCKarnataka ಸರ್ಕಾರದ ವಿರುದ್ಧ ಬಿಜೆಪಿ ಸಮರ ಸಾರಿದೆ. ಗ್ಯಾರಂಟಿಯಿಂದಾಗಿರುವ ನಷ್ಟವನ್ನು ಬೆಲೆ ಏರಿಕೆಯ ಮೂಲಕ ಸರಿದೂಗಿಸುವ ತಂತ್ರ ಅವೈಜ್ಞಾನಿಕ. ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿ, ಇಬ್ಬರು ಪ್ರಯಾಣಿಕರ ದರವನ್ನು ಪುರುಷರಿಂದಲೇ ವಸೂಲು ಮಾಡುವ ನೀತಿಯೇ… ...