
ರಾಜ್ಯ ಬಿಜೆಪಿಯಲ್ಲಿ ಈಗ ‘ಜಗನ್ನಾಥ ಭವನ Vs ಬಾಲಭವನ’; ಏನಿದು ಕಾಂಗ್ರೆಸ್ ವ್ಯಾಖ್ಯಾನ?
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಈಗ 'ಜಗನ್ನಾಥ ಭವನ Vs ಬಾಲಭವನ' ಎಂಬ ಎರಡು ಗುಂಪುಗಳಿವೆ ಎಂದು ಪ್ರದೇಶ ಕಾಂಗ್ರೆಸ್ ವ್ಯಾಖ್ಯಾನಿಸಿದೆ.
ಕರ್ನಾಟಕದ ಭಾರತೀಯ ಜನತಾ ಪಕ್ಷ ಗುಂಪುಗಾರಿಕೆಯಿಂದ ಬಸವಳಿದಿದ್ದು, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರವರು ಕರ್ನಾಟಕ ಬಿಜೆಪಿಯನ್ನು ಒಣಗಿದ ಮರಕ್ಕೆ ಹೋಲಿಸಿಕೊಂಡು ಭಿನ್ನಮತೀಯರನ್ನು ಕಾಗೆಗಳಿಗೆ ಹೋಲಿಕೆ ಮಾಡಿ, ಅಪಶಕುನದ ಕಾಗೆಗಳನ್ನು ಗುಂಡಿಟ್ಟು ಓಡಿಸಬೇಕೆಂದು ಪತ್ರಿಕಾ ಸಂದರ್ಶನದಲ್ಲಿ ಹೇಳುವುದರ ಮೂಲಕ ಭೌದ್ದಿಕವಾಗಿ ದಿವಾಳಿಯಾಗಿರುವ, ಗುಂಪುಗಾರಿಕೆಯಿಂದ ತತ್ತರಿಸಿ ಸ್ವಜನ ಪಕ್ಷಪಾತದಿಂದ ತುಳುಕಿರುವ ರಾಜ್ಯ ಬಿಜೆಪಿ ನಾಯಕರ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ್ದಾರೆ ಎಂದು ಪ್ರದೇಶ ಕಾಂಗ್ರೆಸ್ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.
ಸದಾನಂದ ಗೌಡರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುಚ ರಮೇಶ್ ಬಾಬು, ಹಿಂದೂ ಸಂಪ್ರದಾಯದಲ್ಲಿ ಕಾಗೆಯನ್ನು ವಿವಿಧ ಆಯಾಮಗಳಲ್ಲಿ ನೋಡಲಾಗುತ್ತದೆ. ಸದಾನಂದ ಗೌಡರು ಕಾಗೆಯನ್ನು ಅಪಶಕುನವೆಂದು ಭಾವಿಸಿ, ರಾಜ್ಯ ಬಿಜೆಪಿಯ ಭಿನ್ನಮತೀಯರನ್ನು ಅಪಶಕುನದ ಕಾಗೆಗಳೆಂದು ಚಿತ್ರಿಸಿರುವುದು ಅವರ ಪಕ್ಷದ ವ್ಯ...