
ಕಾಂಗ್ರೆಸ್ ‘X’ ಖಾತೆಯಲ್ಲಿ ಅಶೋಕ್ ಬಗ್ಗೆ ಆಕ್ಷೇಪಾರ್ಹ ವೀಡಿಯೋ? ಪೊಲೀಸರಿಗೆ ದೂರು..!
ಬೆಂಗಳೂರು: ಕಾಂಗ್ರೆಸ್ ಪಕ್ಷವು ತಮ್ಮ ಬಗ್ಗೆ ನಕಲಿ ವೀಡಿಯೊ ವೈರಲ್ ಮಾಡಿ ತಮ್ಮ ತೇಜೋವಧೆಗೆ ಯತ್ನಿಸಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಈ ಸಂಬಂಧ ಅವರು ಬೆಂಗಳೂರಿನ ಸಿ.ಇ.ಏನ್.ಪೂರ್ವ ವಿಭಾಗದ ಉಪಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದು, ತಮ್ಮ ಬಗ್ಗೆ ಮಾರ್ಫ್ ವೀಡಿಯೊ ವೈರಲ್ ಮಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದಾರೆ.
ದೂರಿನಲ್ಲಿ ಏನಿದೆ?
ಜನವರಿ 03, 2025 ರಂದು ಬೆಳಿಗ್ಗೆ 11:30 ರ ಸುಮಾರಿಗೆ ಅಶೋಕ್ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿದ್ದಾಗ, ವಿರೋಧ ಪಕ್ಷದ ನಾಯಕನಾಗಿ ನಾನು ಮತ್ತು ಇತರ ಬಿಜೆಪಿ ನಾಯಕರು ಬೆಂಗಳೂರು ನಗರದ ನಿವಾಸಿಗಳು, ಕೆಎಸ್ಆರ್ಟಿಸಿ ಪ್ರಯಾಣಿಕರು ಮತ್ತು ಸಾರ್ವಜನಿಕರನ್ನು ಭೇಟಿಯಾಗಿ ಶುಭಾಶಯ ಕೋರುತ್ತಿದ್ದೆವು. ಕರ್ನಾಟಕ ಸರ್ಕಾರವು ಕೆಎಸ್ಆರ್ಟಿಸಿ ಬಸ್ ದರವನ್ನು ಹೆಚ್ಚಿಸಿದ್ದು, ಸರ್ಕಾರವು ಸಾರ್ವಜನಿಕರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಿಲ್ಲ ಎಂದು ಜನರಿಗೆ ತಿಳಿಸುತ್ತಿದ್ದೆವು. ಹೀಗಿರುವಾಗ, ಕೆಲವು ಪೊಲೀಸ್ ಅಧಿಕಾರಿಗಳು ನಾವು ಸಾರ್ವಜನಿಕರನ್ನು ಭೇಟಿಯಾಗದಂತೆ ತಡೆಯಲು...