
ಪ್ರಯಾಗ್ರಾಜ್ ‘ಮಹಾಕುಂಭ 2025’: ಸಂಗಮ ತ್ರಿವೇಣಿಯಲ್ಲಿ ಭಕ್ತಸಾಗರ
ನವದೆಹಲಿ: ಪ್ರಯಾಗ್ರಾಜ್ನಲ್ಲಿ ಸೋಮವಾರ ಮಹಾಕುಂಭ 2025 ಗಮನಸೆಳೆದಿದೆ. ಪೌಷ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಭಕ್ತಕೋಟಿಯನ್ನು ಭವ್ಯ ಆಧ್ಯಾತ್ಮಿಕ ಕೈಂಕರ್ಯಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದೆ. ಭಕ್ತರು, ಸಂತರು ಮತ್ತು ಕಲ್ಪವಾಸಿಗಳನ್ನು ಭವ್ಯ ಆಧ್ಯಾತ್ಮಿಕ ಸಭೆಗೆ ಸ್ವಾಗತಿಸುತ್ತಿರುವ ಸನ್ನಿವೇಶ ಗಮನಸೆಳೆದಿದೆ. ಮಹಾಕುಂಭವು ನಂಬಿಕೆ ಮತ್ತು ಆಧುನಿಕತೆಯ ಸಂಗಮ ಎಂದು ಸಾಧು ಸಂತರು ಸಂತಸ ವ್ಯಕ್ತಪಡಿಸಿದ್ದಾರೆ
ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭೆ ಇದಾಗಿದ್ದು, ಈ ‘ಮಹಾಕುಂಭ’ ಪವಿತ್ರ ನಗರವಾದ ಪ್ರಯಾಗ್ರಾಜ್ನಲ್ಲಿ ಪ್ರಾರಂಭವಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಅನುಭವಿಸಲು, ಧ್ಯಾನ ಮಾಡಲು ಮತ್ತು ನಂಬಿಕೆ ಮತ್ತು ಆಧುನಿಕತೆಯ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಬಂದಿರುವ ಸಂತರು, ಕಲ್ಪವಾಸಿಗಳು ಮತ್ತು ಭಕ್ತರ ಕೈಂಕರ್ಯ ಗಮನಸೆಳೆದಿದೆ. ಇದು 'ಸನಾತನ ಹೆಮ್ಮೆ-ಮಹಾ ಕುಂಭ ಉತ್ಸವ" ಎಂಬ ವಿಶ್ಲೇಷಣೆ ವ್ಯಕ್ತವಾಗಿದೆ.
ಸಂಗಮ ತ್ರಿವೇಣಿಯಲ್ಲಿ ಪವಿತ್ರ ಸ್ನಾನ:
ಮೊದಲ ಸ್ನಾನೋತ್ಸವವಾದ ಪೌಷ ಪೂರ್ಣಿಮೆಗೆ ಮುಂಚಿತವಾಗಿ ಭಾನುವಾರ ಸಂಗಮ ತ್ರಿವೇಣಿಯಲ್ಲಿ 50 ಲಕ್ಷಕ್ಕೂ ಹೆಚ್...