Tuesday, January 27

ಸಿನಿಮಾ

‘ಜನ ನಾಯಗನ್’ ಸೆನ್ಸಾರ್ ವಿವಾದ: ತಕ್ಷಣದ ಪ್ರಮಾಣೀಕರಣ ಆದೇಶ ರದ್ದು

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಸಿನಿಮಾ
ಚೆನ್ನೈ: ನಟ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರದ ನಿರ್ಮಾಪಕರಿಗೆ ಹಿನ್ನಡೆಯಾಗಿದ್ದು, ಚಿತ್ರಕ್ಕೆ ತಕ್ಷಣವೇ ಸೆನ್ಸಾರ್ ಪ್ರಮಾಣಪತ್ರ ನೀಡುವಂತೆ ಏಕಸದಸ್ಯ ನ್ಯಾಯಮೂರ್ತಿ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠ ರದ್ದುಗೊಳಿಸಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠ ಮಂಗಳವಾರ ಅಂಗೀಕರಿಸಿದೆ. ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಹಾಗೂ ನ್ಯಾಯಮೂರ್ತಿ ಅರುಲ್ ಮುರುಗನ್ ಅವರನ್ನೊಳಗೊಂಡ ಪೀಠ, ಮಧ್ಯಂತರ ಹಂತದಲ್ಲೇ ಚಿತ್ರದ ವಿಷಯದ ಕುರಿತ ದೂರುಗಳ ಅರ್ಹತೆಯನ್ನು ಪರಿಶೀಲಿಸುವುದು ಕಾನೂನುಬದ್ಧವಲ್ಲ ಎಂದು ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಏಕಸದಸ್ಯ ನ್ಯಾಯಮೂರ್ತಿ ಅನುಸರಿಸಿದ್ದ ವಿಧಾನ ದೋಷಪೂರಿತವಾಗಿದೆ ಎಂದು ಹೇಳಿ ಆದೇಶವನ್ನು ರದ್ದುಗೊಳಿಸಿ, ವಿಷಯವನ್ನು ಹೊಸದಾಗಿ ಪರಿಗಣಿಸಲು ಹಿಂತಿರುಗಿಸಲಾಗಿದೆ. ಅರ್ಜಿಯನ್ನು ತಿದ್ದುಪಡಿ ಮಾಡಲು ನಿರ್ಮಾಪಕರಿಗೆ ನ್ಯಾಯಾಲಯ ಸ್ವಾತಂತ್ರ್ಯ ನೀಡಿದ್ದು, ಇದರ ಪರಿಣಾಮವಾಗಿ ಚಿತ್ರದ ಥಿಯೇಟರ್ ಬಿಡುಗಡೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಕೇಂದ್ರ...
ಬಂದೂಕು ಸ್ವಚ್ಛಗೊಳಿಸುವಾಗ ಸಿಡಿದ ಎರಡು ಸುತ್ತು ಗುಂಡು: ಪೊಲೀಸರ ಎದುರು ನಟ ಕಮಲ್ ರಶೀದ್ ಹೇಳಿಕೆ

ಬಂದೂಕು ಸ್ವಚ್ಛಗೊಳಿಸುವಾಗ ಸಿಡಿದ ಎರಡು ಸುತ್ತು ಗುಂಡು: ಪೊಲೀಸರ ಎದುರು ನಟ ಕಮಲ್ ರಶೀದ್ ಹೇಳಿಕೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಸಿನಿಮಾ
ಮುಂಬೈ: ಮುಂಬೈನ ಓಶಿವಾರಾ ಪ್ರದೇಶದಲ್ಲಿ ವಸತಿ ಕಟ್ಟಡಕ್ಕೆ ಎರಡು ಗುಂಡುಗಳು ತಗುಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಕಮಲ್ ರಶೀದ್ ಖಾನ್ (ಕೆಆರ್‌ಕೆ) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮನೆದಲ್ಲಿ ತನ್ನ ಪರವಾನಗಿ ಪಡೆದ ಬಂದೂಕನ್ನು ಸ್ವಚ್ಛಗೊಳಿಸುವ ವೇಳೆ, ಆಯುಧ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರೀಕ್ಷಿಸಲು ಎರಡು ಸುತ್ತು ಗುಂಡು ಹಾರಿಸಿದ್ದಾಗಿ ಅವರು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಕೆಆರ್‌ಕೆ 2005ರಲ್ಲಿ ಉತ್ತರ ಪ್ರದೇಶದಿಂದ ಬಂದೂಕು ಪರವಾನಗಿ ಪಡೆದಿದ್ದರು. ಬಳಿಕ ಅದೇ ಬಂದೂಕನ್ನು ಮುಂಬೈಗೆ ತಂದು ತಮ್ಮ ನಿವಾಸದಲ್ಲಿ ಇಟ್ಟುಕೊಂಡಿದ್ದರು. ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಜಾರಿಯಾದ ಸಂದರ್ಭದಲ್ಲಿ ಆಯುಧವನ್ನು ವರ್ಸೋವಾ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡಲಾಗಿತ್ತು. ನೀತಿ ಸಂಹಿತೆ ಹಿಂತೆಗೆದ ನಂತರ, ಅವರು ಬಂದೂಕನ್ನು ಮರಳಿ ಪಡೆದುಕೊಂಡಿದ್ದರು. ಬಂದೂಕನ್ನು ವಾಪಸು ಪಡೆದ ನಾಲ್ಕೈದು ದಿನಗಳ ನಂತರ, ಲೋಖಂಡ್ವಾಲಾ ಬ್ಯಾಕ್ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಸ್ವಚ್ಛಗೊಳ...
‘ಕೋಮುವಾದಿ’ ಹೇಳಿಕೆ ವಿವಾದಕ್ಕೆ ಎ.ಆರ್. ರೆಹಮಾನ್ ಸ್ಪಷ್ಟನೆ

‘ಕೋಮುವಾದಿ’ ಹೇಳಿಕೆ ವಿವಾದಕ್ಕೆ ಎ.ಆರ್. ರೆಹಮಾನ್ ಸ್ಪಷ್ಟನೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ, ಸಿನಿಮಾ
ಮುಂಬೈ: ಹಿಂದಿ ಚಿತ್ರರಂಗದಲ್ಲಿ ‘ಕೋಮುವಾದಿ’ ಪಕ್ಷಪಾತವಿದೆ ಎಂಬ ತಮ್ಮ ಹೇಳಿಕೆಗೆ ಸಂಬಂಧಿಸಿ ಉದ್ಭವಿಸಿದ ವಿವಾದದ ಬಗ್ಗೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಸ್ಪಷ್ಟನೆ ನೀಡಿದ್ದಾರೆ. ಯಾರ ಭಾವನೆಗಳನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಂನಲ್ಲಿ ವೀಡಿಯೊ ಹಂಚಿಕೊಂಡಿರುವ ರೆಹಮಾನ್, ಭಾರತ ತಮ್ಮ ಮನೆ ಮಾತ್ರವಲ್ಲ, ತಮ್ಮ ಸ್ಫೂರ್ತಿ ಮತ್ತು ಗುರು ಕೂಡ ಆಗಿದೆ ಎಂದು ಹೇಳಿದ್ದಾರೆ. “ಸಂಗೀತವು ಯಾವಾಗಲೂ ಸಂಸ್ಕೃತಿಗಳನ್ನು ಸಂಪರ್ಕಿಸುವ, ಆಚರಿಸುವ ಮತ್ತು ಗೌರವಿಸುವ ನನ್ನ ಮಾರ್ಗ. ನನ್ನ ಉದ್ದೇಶಗಳನ್ನು ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಆದರೆ ಸಂಗೀತದ ಮೂಲಕ ಗೌರವ ಸಲ್ಲಿಸುವುದೇ ನನ್ನ ಆಶಯ. ನಾನು ಎಂದಿಗೂ ನೋವುಂಟು ಮಾಡಲು ಬಯಸಿಲ್ಲ,” ಎಂದು ತಿಳಿಸಿದ್ದಾರೆ. ಭಾರತೀಯನಾಗಿರುವುದಕ್ಕೆ ತಾವು ಹೆಮ್ಮೆಪಡುತ್ತೇನೆ ಎಂದಿರುವ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಬಹುಸಾಂಸ್ಕೃತಿಕ ಧ್ವನಿಗಳಿಗೆ ಅವಕಾಶ ನೀಡುವ ವಾತಾವರಣವೇ ತಮ್ಮ ಸೃಜನಶೀಲತೆಯ ಬಲವಾಗಿದೆ ಎಂದು ಹೇಳಿದರು. ವೇವ್ ಶೃಂಗಸಭೆ,...
ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ಎಂ.ಜಿ ರಾಮಮೂರ್ತಿ ಆಯ್ಕೆ

ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ಎಂ.ಜಿ ರಾಮಮೂರ್ತಿ ಆಯ್ಕೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾಪಕರಾದ 2026-28ನೇ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಜಿ.ರಾಮಮೂರ್ತಿರವರು ಆಯ್ಕೆಯಾಗಿದ್ದಾರೆ. ಮುಖ್ಯ ಚುನಾವಣೆ ಅಧಿಕಾರಿಗಳು ಸಂಜೀವ್ ಸಹಾಯಕ ಚುನಾವಣೆ ಅಧಿಕಾರಿ ಶ್ರೀನಿವಾಸ್ ರವರು ಪ್ರಮಾಣಪತ್ರ ನೀಡಿದರು. ಅಧ್ಯಕ್ಷರಾದ ಎಂ.ಜಿ.ರಾಮಮೂರ್ತಿ. ನಂದಿಯಾಳ್ ಎಸ್ ಜೆ. ಬಾಮ ಗಿರೀಶ್. ಆರ್ ಎಸ್ ಗೌಡ್ರು. ರಮೇಶ್ ಯಾದವ್ ರವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎಂ.ಜಿ.ರಾಮಮೂರ್ತಿರವರು ಮಾತನಾಡಿ ಕನ್ನಡ ಚಲನಚಿತ್ರ ಮೇರುನಟ ಡಾ||ರಾಜ್ ಕುಮಾರ್ ರವರು ನಿರ್ಮಾಪಕರನ್ನ ಅನ್ನದಾತರು ಎಂದು ಕರೆಯುತ್ತಿದ್ದಾರೆ. ನಿರ್ಮಾಪಕ ಉಳಿದರೆ ಕನ್ನಡ ಚಿತ್ರರಂಗ ಉಳಿಯುತ್ತದೆ. ನಿರ್ಮಾಪಕ ಹಾಕಿದ ಹಣ ವಾಪಸ್ಸು ಬರಬೇಕು. ಕೆಲವು ನಿರ್ಮಾಪಕರು ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದಾರೆ ಅವರನ್ನ ಗುರುತಿಸಿ ನಿರ್ಮಾಪಕರ ಸಂಘದಿಂದ ಆರ್ಥಿಕವಾಗಿ ಸಹಾಯ ಮಾಡಬೇಕು ಎಂಬ ಉದ್ದೇಶವಿದೆ ಎಂದರು. ಕನ್ನಡ ಚಲನಚಿತ್ರ ಅನ್ಯ ಭಾಷೆಗಳ ನಡುವೆ ಪೈಪೋಟಿ ಇದೆ, ಕನ್ನಡ ಚಿತ್ರಗಳಿಗೆ ಜನರು ಚಿತ್ರಮಂದಿರಕ್ಕೆ ಬಂದು ನೋಡಿ, ನಿರ್ಮಾಪಕ, ನಿರ್ದೇಶಕ ಮತ್ತು ನಟ, ನಟಿ ಕಲಾವಿದರಿಗೆ ಪ್ರ...
“ಮದರ್. ಪ್ರೊಟೆಕ್ಟರ್. ಪೈರೇಟ್. ಮೀಟ್ ಬ್ಲಡಿ ಮೇರಿ”; ‘ದಿ ಬ್ಲಫ್’ ಮೂಲಕ ಪ್ರಿಯಾಂಕಾ ಹೊಸ ರೀತಿಯ ಪಾತ್ರ

“ಮದರ್. ಪ್ರೊಟೆಕ್ಟರ್. ಪೈರೇಟ್. ಮೀಟ್ ಬ್ಲಡಿ ಮೇರಿ”; ‘ದಿ ಬ್ಲಫ್’ ಮೂಲಕ ಪ್ರಿಯಾಂಕಾ ಹೊಸ ರೀತಿಯ ಪಾತ್ರ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಸಿನಿಮಾ
ಮುಂಬೈ: ಜಾಗತಿಕ ಖ್ಯಾತಿಯ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಮುಂಬರುವ ಸ್ವಾಶ್‌ಬಕ್ಲರ್ ಆಕ್ಷನ್ ಥ್ರಿಲ್ಲರ್ ಚಿತ್ರ ‘ದಿ ಬ್ಲಫ್’ ಮೂಲಕ ಹೊಸ ರೀತಿಯ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ‘ಬ್ಲಡಿ ಮೇರಿ’ ಎಂದೇ ಖ್ಯಾತಳಾದ ಉಗ್ರ ಕಡಲ್ಗಳ್ಳೆ ಎರ್ಸೆಲ್ ಬೊಡ್ಡನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಫೆಬ್ರವರಿ 25ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ತಮ್ಮ ಪಾತ್ರದ ಕೆಲವು ಝಲಕ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸ್ಟಿಲ್‌ಗಳನ್ನು ಹಂಚಿಕೊಂಡ ಅವರು, “ಮದರ್. ಪ್ರೊಟೆಕ್ಟರ್. ಪೈರೇಟ್. ಮೀಟ್ ಬ್ಲಡಿ ಮೇರಿ” ಎಂದು ಬರೆದು ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ. ಹಂಚಿಕೊಂಡ ಚಿತ್ರಗಳಲ್ಲಿ ರಕ್ತಸಿಕ್ತ ಹಾಗೂ ಉಗ್ರ ಅವತಾರದಲ್ಲಿ ಯುದ್ಧಕ್ಕೆ ಸಿದ್ಧಳಾಗಿ ಕಾಣಿಸಿಕೊಂಡಿರುವ ಪ್ರಿಯಾಂಕಾ, ಭಯಾನಕ ಕಡಲ್ಗಳ್ಳೆಯಾಗಿ ಮಿಂಚಿದ್ದಾರೆ. ಆದರೆ ಇದೇ ಪಾತ್ರದಲ್ಲಿ ತಾಯಿತನದ ಮೃದು ಭಾವವೂ ಅಡಗಿದ್ದು, ಪಾತ್ರಕ್ಕೆ ವಿಭಿನ್ನ ಆಯಾಮವನ್ನು ನ...
ಕತ್ರಿನಾ–ವಿಕಿ ದಂಪತಿಯ ಮಗುವಿಗೆ ‘ವಿಹಾನ್’ ಹೆಸರು

ಕತ್ರಿನಾ–ವಿಕಿ ದಂಪತಿಯ ಮಗುವಿಗೆ ‘ವಿಹಾನ್’ ಹೆಸರು

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಸಿನಿಮಾ
ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕಿ ಕೌಶಲ್ ತಮ್ಮ ಪುತ್ರನಿಗೆ ವಿಹಾನ್ ಕೌಶಲ್ ಎಂದು ನಾಮಕರಣ ಮಾಡಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡಿದ ಎರಡು ತಿಂಗಳ ಬಳಿಕ ದಂಪತಿ ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಹೆಸರು ಬಹಿರಂಗಗೊಂಡ ತಕ್ಷಣವೇ ಚಿತ್ರರಂಗದ ಹಲವಾರು ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ನಟಿ ಪರಿಣಿತಿ ಚೋಪ್ರಾ “ಲಿಟಲ್ ಬಡ್ಡಿ!” ಎಂದು ಕಾಮೆಂಟ್ ಮಾಡಿದ್ದಾರೆ. ನಿರ್ದೇಶಕ ಕರಣ್ ಜೋಹರ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್‌ನ್ನು ಮರುಹಂಚಿಕೊಂಡು, ವಿಹಾನ್‌ಗೆ ಪ್ರೀತಿ ಮತ್ತು ಆಶೀರ್ವಾದಗಳನ್ನು ಕಳುಹಿಸಿದ್ದಾರೆ. ದಿಯಾ ಮಿರ್ಜಾ, ಭೂಮಿ ಪೆಡ್ನೇಕರ್, ಇಸಾಬೆಲ್ಲೆ ಕೈಫ್ ಸೇರಿದಂತೆ ಅನೇಕರು ಹೃದಯದ ಎಮೋಜಿಗಳ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ವಿಕಿ ಕೌಶಲ್ ಅವರ ಸಹೋದರ ಸನ್ನಿ ಕೌಶಲ್, ವಿಹಾನ್ ಹೆಸರಿನ ಅರ್ಥವನ್ನು ವಿವರಿಸಿ, “ವಿಹಾನ್ – ಬೆಳಕಿನ ಮೊದಲ ಕಿರಣ” ಎಂದು ಬರೆದಿದ್ದಾರೆ. 2019ರ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರದಲ್ಲಿ ವಿಕಿ ಅಭಿನಯಿಸಿದ್ದ ಪಾತ್ರದ ಹೆಸರು ಕೂಡ ವಿಹಾನ್ ಆಗಿದ್ದದ್ದು ...
ನಟ ಯಶ್ ತಾಯಿ ಮನೆ ಮುಂದೆ ಜೆಸಿಬಿ ಘರ್ಜನೆ, ಕಾಂಪೌಂಡ್ ತೆರವು

ನಟ ಯಶ್ ತಾಯಿ ಮನೆ ಮುಂದೆ ಜೆಸಿಬಿ ಘರ್ಜನೆ, ಕಾಂಪೌಂಡ್ ತೆರವು

Focus, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ, ಸಿನಿಮಾ
ಹಾಸನ: ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರ ಸುದ್ದಿಯಲ್ಲಿರುವ ನಡುವೆಯೇ, ಅವರ ತಾಯಿ ಪುಷ್ಪಾ ವಿರುದ್ಧ ಭೂ ವಿವಾದಕ್ಕೆ ಸಂಬಂಧಿಸಿದ ಬೆಳವಣಿಗೆ ಸುದ್ದಿಯ ಕೇಂದ್ರಬಿಂದುವಾಗಿದೆ. ಹಾಸನದ ವಿದ್ಯಾನಗರದಲ್ಲಿ ಭಾನುವಾರ ಬೆಳಗಿನ ಜಾವ ಜೆಸಿಬಿ ಬಳಸಿ ಕಾಂಪೌಂಡ್ ತೆರವುಗೊಳಿಸಲಾಗಿದೆ. ವಿದ್ಯಾನಗರದಲ್ಲಿರುವ ಲಕ್ಷ್ಮಮ್ಮ ಎಂಬುವರಿಗೆ ಸೇರಿದ್ದ ಜಾಗಕ್ಕೆ ಯಶ್ ಅವರ ತಾಯಿ ಪುಷ್ಪಾ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಲಕ್ಷ್ಮಮ್ಮ ಅವರ ಸಂಬಂಧಿ ದೇವರಾಜ್ ಈ ವಿಚಾರವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣದಲ್ಲಿ ನ್ಯಾಯಾಲಯವು ದೇವರಾಜ್ ಪರವಾಗಿ ಆದೇಶ ನೀಡಿದೆ ಎನ್ನಲಾಗಿದೆ. ಭಾನುವಾರ ಬೆಳಗ್ಗೆ ಜೆಸಿಬಿ ಮೂಲಕ ಕಾಂಪೌಂಡ್ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನಟ Yash ತಾಯಿ ವಿರುದ್ಧ ಭೂಒತ್ತುವರಿ ಆರೋಪ.. ಯಶ್ ತಾಯಿ ವಿರುದ್ಧ ಜಿಪಿಎ ಹೋಲ್ಡರ್ ದೇವರಾಜು ಕಿಡಿ | #TV9D #TV9Kannada #Yashmother #Yash #Yashmotherpushpa #Hassan #Mysuru #Rockingstaryash #Landencroachment #H...
‘ಡಕೋಯಿಟ್’ ಚಿತ್ರ 2026ರ ಮಾರ್ಚ್ 19ರಂದು ತೆರೆ

‘ಡಕೋಯಿಟ್’ ಚಿತ್ರ 2026ರ ಮಾರ್ಚ್ 19ರಂದು ತೆರೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಸಿನಿಮಾ
ಮುಂಬೈ: ಅದಿವಿ ಶೇಷ್ ಹಾಗೂ ಅನುರಾಗ್ ಕಶ್ಯಪ್ ಅವರೊಂದಿಗೆ ನಟಿಸಿರುವ ಮುಂಬರುವ ಚಿತ್ರ ‘ಡಕೋಯಿಟ್’ ತನ್ನ ವೃತ್ತಿಜೀವನದಲ್ಲಿ ಎರಡು ಭಾಷೆಗಳಲ್ಲಿ ಚಿತ್ರೀಕರಣ ಮಾಡಿದ ಮೊದಲ ಚಿತ್ರ ಎಂದು ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಹೇಳಿದ್ದಾರೆ. ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮೃಣಾಲ್, ಮರಾಠಿಯಲ್ಲಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದರು. ಸಹನಟರಾದ ಅದಿವಿ ಶೇಷ್, ಅನುರಾಗ್ ಕಶ್ಯಪ್ ಹಾಗೂ ನಿರ್ದೇಶಕ ಶನಿಲ್ ಡಿಯೋ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಅವರು ಹಂಚಿಕೊಂಡರು. ಈ ಚಿತ್ರವು ತಮ್ಮ ‘ಲವ್ ಸೋನಿಯಾ’ ಚಿತ್ರದ ಅನುಭವವನ್ನು ನೆನಪಿಸುವ ಛಾಯೆಯನ್ನು ನೀಡಿದೆ ಎಂದರು. “ಡಕೋಯಿಟ್ ಸಂಪೂರ್ಣವಾಗಿ ವಿಭಿನ್ನವಾದ ಚಿತ್ರ. ಇದು ನಾನು ಹಿಂದಿ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಚಿತ್ರೀಕರಿಸಿದ ಮೊದಲ ಸಿನಿಮಾ. ಅದಿವಿ ಶೇಷ್ ಅವರೊಂದಿಗೆ ಕೆಲಸ ಮಾಡುವುದು ಅದ್ಭುತ ಅನುಭವ. ಹರಿಯನ್ನು ಈ ಹೊಸ ಅವತಾರದಲ್ಲಿ ನೋಡುವುದು ನಿಜಕ್ಕೂ ಮನಸ್ಸಿಗೆ ತಾಕುತ್ತದೆ. ಅನುರಾಗ್ ಸರ್ ಅವರೊಂದಿಗೆ ಕೆಲಸ ಮಾಡುವುದು ಬಹಳ ಸಂತೋಷ ನೀಡಿತು. ನನ್ನ ದೃಶ್ಯಗಳು ಕಡಿಮೆ ಇದ್ದರೂ, ನಾನು ಮಾಡಿದ ಪ್ರತಿಯೊಂದೂ...
ಥ್ರಿಲ್ಲರ್ ‘ಸಾಲಿ ಮೊಹಬ್ಬತ್’ ಚಿತ್ರದಲ್ಲಿ ರಾಧಿಕಾ ಆಪ್ಟೆ

ಥ್ರಿಲ್ಲರ್ ‘ಸಾಲಿ ಮೊಹಬ್ಬತ್’ ಚಿತ್ರದಲ್ಲಿ ರಾಧಿಕಾ ಆಪ್ಟೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಸಿನಿಮಾ
ಮುಂಬೈ:  ನಟಿ ರಾಧಿಕಾ ಆಪ್ಟೆ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಥ್ರಿಲ್ಲರ್ ಸಾಲಿ ಮೊಹಬ್ಬತ್ ಚಿತ್ರದಲ್ಲಿ ನಟಿಸಿದ್ದಾರೆ. ತಮ್ಮ ಪಾತ್ರದ ಕುರಿತು ಅವರು ಹೇಳುವುದೇನಂದರೆ: “ನಾನು ಸ್ಮಿತಾ ಎಂಬ ಗೃಹಿಣಿಯ ಪಾತ್ರದಲ್ಲಿ ನಟಿಸಿದ್ದೇನೆ. ತೋಟಗಾರಿಕೆ ಪ್ರೀತಿಸುವ, ತುಂಬಾ ಶಾಂತ ಜೀವನ ನಡೆಸುವ ಮಹಿಳೆ ಅವಳು. ಗಂಡ, ಮನೆ, ತೋಟ—ಇವೆಲ್ಲದರಲ್ಲೂ ತೃಪ್ತಿಯಾಗಿರುವ ಅವಳ ಜೀವನದಲ್ಲಿ ಒಂದು ಘಟನೆ ಸಂಭವಿಸಿದಾಗ ಕಥೆ ಸಂಪೂರ್ಣ ತಿರುವು ಪಡೆಯುತ್ತದೆ. ಅದರ ನಂತರ ಪ್ರೇಕ್ಷಕರು ಒಂದು ವಿಭಿನ್ನ, ರೋಮಾಂಚಕ ಪ್ರಯಾಣಕ್ಕೆ ಇಳಿಯುತ್ತಾರೆ.” ಈ ಚಿತ್ರವು ಮೂಲತಃ ಒಂದು ಸಿಂಪಲ್, ಅಂತರ್ಮುಖಿ, ಸಸ್ಯ ಪ್ರೇಮಿ ಗೃಹಿಣಿಯ ಬದುಕಿನ ಸುತ್ತ ಸಾಗಿ ಬರುತ್ತದೆ ಎಂದು ಅವರು ವಿವರಿಸಿದ್ದಾರೆ. ತಮ್ಮನ್ನು ಈ ಪಾತ್ರಕ್ಕೆ ಆಕರ್ಷಿಸಿದ ಕಾರಣದ ಬಗ್ಗೆ ರಾಧಿಕಾ ಮಾತನಾಡುತ್ತಾ, “ಈ ಚಿತ್ರ ಸಾಮಾನ್ಯ ಕ್ರೈಮ್–ಥ್ರಿಲ್ಲರ್ ಅಲ್ಲ. ಇತ್ತೀಚಿನ ಭಾರತೀಯ ಸಿನಿಮಾಗಳಲ್ಲಿ ಕಾಣುವ ವೇಗ, ಆಕ್ಷನ್, ಅತಿರೇಕ—ಇವುಗಳೊಂದೂ ಇಲ್ಲ. ಬದಲಾಗಿ ಇಲ್ಲಿ ಮೌನದ ಉದ್ವಿಗ್ನತೆ, ಸೂಕ್ಷ್ಮ ಭಾವನೆಗಳು, ವಾತಾವರಣದ ತೀವ್ರತೆ ಇವೆ. ಈ ಎಲ್ಲವೂ ತುಂಬಾ ಶಾ...
ಸಮಂತಾ ಜೊತೆ ಕೆಲಸ ಮಾಡುವ ಕಾಂತಾರ ನಟನ ಕನಸು ನನಸು!

ಸಮಂತಾ ಜೊತೆ ಕೆಲಸ ಮಾಡುವ ಕಾಂತಾರ ನಟನ ಕನಸು ನನಸು!

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ, ಸಿನಿಮಾ
ಮುಂಬೈ: ಕನ್ನಡದ ಕಾಂತಾರ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿ, ಬಳಿಕ ಆರ್.ಮಾಧವನ್ ಜೊತೆ ತಮಿಳು ವೆಬ್‌ಸೀರಿಸ್ ಲೆಗಸಿಗೆ ಸಜ್ಜಾಗಿರುವ ನಟ ಗುಲ್ಶನ್ ದೇವಯ್ಯ ಈಗ ತೆಲುಗು ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ. ಸಮಂತಾ ರುತ್‌ ಪ್ರಭು ಅಭಿನಯದ ಮಾ ಇಂತಿ ಬಂಗಾರಂ ಅವರ ಮೊದಲ ತೆಲುಗು ಚಿತ್ರ. ತ್ರಲಾಲಾ ಮೂವಿಂಗ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಪಾತ್ರವಹಿಸಿರುವುದಕ್ಕೆ ದೇವಯ್ಯ ಆನಂದ ವ್ಯಕ್ತಪಡಿಸಿದ್ದಾರೆ. “ಸಮಂತಾ ಜೊತೆ ಕೆಲಸ ಮಾಡುವ ಆಸೆ ನನಗಿನ್ನೂ ಹಲವು ವರ್ಷಗಳಿಂದಿತ್ತು. ಇದರೀಗ ಸರಿಯಾದ ಸಮಯದಲ್ಲಿ ನನಗೆ ಒದಗಿದೆ,” ಎಂದು ಅವರು ಮಾಧ್ಯಮ ಸಂದರ್ಶನದಲ್ಲಿ ಹೇಳಿದರು. ಚಿತ್ರದ ಮುಹೂರ್ತ ವಿಧಿ ಇತ್ತೀಚೆಗೆ ನೆರವೇರಿತು. ಗುಲ್ಶನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಮುಹೂರ್ತ ಹಾಗೂ ಘೋಷಣೆ ವಿಡಿಯೊ ಹಂಚಿಕೊಂಡಿದ್ದು, ತೆಲುಗು ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ. “MIBಯಲ್ಲಿನ ನನ್ನ ಪಾತ್ರಕ್ಕಾಗಿ ತೀವ್ರವಾಗಿ ತಯಾರಿ ನಡೆಸುತ್ತಿದ್ದೇನೆ. ಈಗಲೇ ಹೆಚ್ಚಿನ ವಿವರ ಹಂಚಿಕೊಳ್ಳಲು ಸಾಧ್ಯವಿಲ್ಲ. ಆದರೆ ಪಾತ್ರವು ಸವಾಲಿನದು. ಅದನ್ನು ಸಮರ...