Tuesday, August 4

ಸಿನಿಮಾ

‘ರಾಮಾಯಣ’ದಿಂದ ಹಿಂದಿ ಕಲಿಯುವ ಅವಕಾಶ ಸಿಕ್ಕಿತು: ನಟ ಯಶ್

‘ರಾಮಾಯಣ’ದಿಂದ ಹಿಂದಿ ಕಲಿಯುವ ಅವಕಾಶ ಸಿಕ್ಕಿತು: ನಟ ಯಶ್

ಪ್ರಮುಖ ಸುದ್ದಿ, ಸಿನಿಮಾ
ನವದೆಹಲಿ: ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಭಾಗವಾಗಿರುವುದು ತಮ್ಮ ವೃತ್ತಿಜೀವನದ ವಿಶೇಷ ಅನುಭವವಾಗಿದ್ದು, ಈ ಚಿತ್ರದಿಂದ ಹಿಂದಿ ಭಾಷೆ ಕಲಿಯುವ ಅವಕಾಶವೂ ದೊರೆಯಿತು ಎಂದು ನಟ ಯಶ್ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಚಿತ್ರದ ಭವ್ಯ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ಕೃತಜ್ಞತೆ ಸಲ್ಲಿಸಿ, ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ಹೇಳಿದರು. ಕಾರ್ಯಕ್ರಮದಲ್ಲಿ ಹಿಂದಿಯಲ್ಲೇ ಮಾತನಾಡಲು ಪ್ರಯತ್ನಿಸಿದ ಯಶ್, “ಇಲ್ಲಿ ಎಲ್ಲರೂ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ. ನಾನು ಕೂಡ ಪ್ರಯತ್ನಿಸುತ್ತೇನೆ. ಈ ಪಾತ್ರದ ಮೂಲಕ ನನಗೆ ಹಿಂದಿ ಕಲಿಯುವ ಅವಕಾಶವೂ ಸಿಕ್ಕಿತು” ಎಂದು ಹೇಳಿದರು.‘ರಾಮಾಯಣ’ ಕೇವಲ ಒಂದು ಸಿನಿಮಾ ಅಲ್ಲ, ಇದು ಭಾರತದ ಕನಸಿನ ಯೋಜನೆ ಎಂದು ಬಣ್ಣಿಸಿದ ಯಶ್, “ಪ್ರಭು ಶ್ರೀರಾಮನ ಕಥೆಯನ್ನು ಜಾಗತಿಕ ಮಟ್ಟದಲ್ಲಿ ತಲುಪಿಸುವ ಒಂದೇ ಉದ್ದೇಶದಿಂದ ನಾವೆಲ್ಲರೂ ಒಂದಾಗಿದ್ದೇವೆ. ಈ ಕನಸಿಗೆ ರೂಪ ನೀಡಿದ ನಮಿತ್ ಮಲ್ಹೋತ್ರಾ ಹಾಗೂ ನಿರ್ದೇಶಕ ನಿತೇಶ್ ತಿವಾರಿ ಅವರಿಗೆ ಧನ್ಯವಾದಗಳು” ಎಂದರು. ಟ್ರೇಲರ್ ಬಿಡು...
ಏಳು ತಿಂಗಳ ಹೋರಾಟದ ಬಳಿಕ, ಜುಲೈ 23ಕ್ಕೆ ‘ಜನ ನಾಯಗನ್’ ರಿಲೀಸ್

ಏಳು ತಿಂಗಳ ಹೋರಾಟದ ಬಳಿಕ, ಜುಲೈ 23ಕ್ಕೆ ‘ಜನ ನಾಯಗನ್’ ರಿಲೀಸ್

ಪ್ರಮುಖ ಸುದ್ದಿ, ಸಿನಿಮಾ
ಚೆನ್ನೈ: ಕಾಲಿವುಡ್ ಸ್ಟಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ ಜುಲೈ 23ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಬಹುನಿರೀಕ್ಷಿತ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಕಳೆದ ಏಳು ತಿಂಗಳಿಂದ ಸೆನ್ಸಾರ್ ಹಾಗೂ ಕಾನೂನು ಪ್ರಕ್ರಿಯೆಗಳಿಂದ ವಿಳಂಬವಾಗಿದ್ದ ಚಿತ್ರಕ್ಕೆ ಇದೀಗ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದ್ದು, ಇತ್ತೀಚೆಗೆ ಸೆನ್ಸಾರ್ ಮಂಡಳಿಯಿಂದ 'ಎ' ಪ್ರಮಾಣಪತ್ರ ದೊರೆತಿದೆ.ನಟ ವಿಜಯ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡು ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ. ನಿರ್ಮಾಣ ಸಂಸ್ಥೆಯೂ "ಹೋರಾಟ ಎಷ್ಟು ಕಠಿಣವೋ, ಗೆಲುವು ಅಷ್ಟೇ ಭರ್ಜರಿ" ಎಂದು ಪೋಸ್ಟ್ ಮಾಡಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.Tested by fire. Forged by time. Built for history. The tougher the battle, The louder the victory.#JanaNayaganFromJuly23#JanaNayakuduFromJuly23#JanNetaFromJuly23 The Hon'ble Chief Mini...
2017ರ ನಟಿ ಮೇಲಿನ ದೌರ್ಜನ್ಯ ಪ್ರಕರಣ: ಪಲ್ಸರ್ ಸುನಿ ಶಿಕ್ಷೆ ಅಮಾನತಿಗೆ ಹೈಕೋರ್ಟ್ ನಕಾರ

2017ರ ನಟಿ ಮೇಲಿನ ದೌರ್ಜನ್ಯ ಪ್ರಕರಣ: ಪಲ್ಸರ್ ಸುನಿ ಶಿಕ್ಷೆ ಅಮಾನತಿಗೆ ಹೈಕೋರ್ಟ್ ನಕಾರ

ಪ್ರಮುಖ ಸುದ್ದಿ, ಸಿನಿಮಾ
ಕೊಚ್ಚಿ: 2017ರಲ್ಲಿ ನಟಿಯ ಮೇಲಿನ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಸಲ್ಲಿಸಿದ್ದ ಶಿಕ್ಷೆ ಅಮಾನತು ಅರ್ಜಿಯನ್ನು ಕೇರಳ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಇಂತಹ ಅರ್ಜಿಗಳನ್ನು ಪರಿಗಣಿಸುವ ವೇಳೆ ಸಂತ್ರಸ್ತೆಯ ಘನತೆ ಮತ್ತು ಹಕ್ಕುಗಳನ್ನೂ ಗಮನದಲ್ಲಿಡಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದ್ದ ವಿಚಾರಣಾ ನ್ಯಾಯಾಲಯ ಪಲ್ಸರ್ ಸುನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಹೈಕೋರ್ಟ್‌ನಲ್ಲಿ ಬಾಕಿಯಿದ್ದು, ಅಂತಿಮ ತೀರ್ಪು ಬರುವವರೆಗೆ ಶಿಕ್ಷೆ ಅಮಾನತುಗೊಳಿಸುವಂತೆ ಅವರು ಮನವಿ ಮಾಡಿದ್ದರು.ಸಂತ್ರಸ್ತೆಯ ಪರ ವಕೀಲರು, ಇದು ಅತ್ಯಂತ ಗಂಭೀರ ಅಪರಾಧವಾಗಿದ್ದು, ಶಿಕ್ಷೆ ಅಮಾನತುಗೊಳಿಸಿದರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂದು ವಾದಿಸಿದರು. ಪ್ರಾಸಿಕ್ಯೂಷನ್ ಕೂಡ ಅರ್ಜಿಯನ್ನು ತೀವ್ರವಾಗಿ ವಿರೋಧಿಸಿ, ಆರೋಪಿಯ ವಿರುದ್ಧ ಶಿಕ್ಷೆ ಹೆಚ್ಚಿಸುವ ಮನವಿಯೂ ಬಾಕಿಯಿದೆ ಎಂದು ತಿಳಿಸಿತು. ರಾಜ್ಯ ಸರ್ಕಾರ, ಪಲ್ಸರ್ ಸುನಿ ಪುನರಾವರ್ತಿ...
‘ಮಾ ಇಂಟಿ ಬಂಗಾರಂ’; ಮಹಿಳಾ ಪ್ರಧಾನ ಚಿತ್ರಗಳನ್ನು ಯಾರು ನೋಡುತ್ತಾರೆ? ಎಂಬ ಪ್ರಶ್ನೆಗೆ ಸಿಕ್ತು ‘100 ಕೋಟಿ’ಯ ಉತ್ತರ

‘ಮಾ ಇಂಟಿ ಬಂಗಾರಂ’; ಮಹಿಳಾ ಪ್ರಧಾನ ಚಿತ್ರಗಳನ್ನು ಯಾರು ನೋಡುತ್ತಾರೆ? ಎಂಬ ಪ್ರಶ್ನೆಗೆ ಸಿಕ್ತು ‘100 ಕೋಟಿ’ಯ ಉತ್ತರ

ಪ್ರಮುಖ ಸುದ್ದಿ, ಸಿನಿಮಾ
ಹೈದರಾಬಾದ್: ನಟಿ ಸಮಂತಾ ರುತ್ ಪ್ರಭು ಅಭಿನಯದ ‘ಮಾ ಇಂಟಿ ಬಂಗಾರಂ’ ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಕೆ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಬಿ.ವಿ. ನಂದಿನಿ ರೆಡ್ಡಿ ನಿರ್ದೇಶಿಸಿರುವ ಈ ತೆಲುಗು ಆ್ಯಕ್ಷನ್–ಕಾಮಿಡಿ ಚಿತ್ರದಲ್ಲಿ ಗುಲ್ಶನ್ ದೇವಯ್ಯ ಹಾಗೂ ದಿಗಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಮಂತಾ, ರಾಜ್ ನಿಡಿಮೋರು ಮತ್ತು ಹಿಮಾಂಕ್ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ. 100 ಕೋಟಿ ಗಳಿಕೆಯ ಸಂಭ್ರಮವನ್ನು ಸಮಂತಾ ತಮ್ಮ ಮನೆಯಲ್ಲಿ ಆಚರಿಸಿದ್ದು, ಅದರ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ರಾಜ್ ನಿಡಿಮೋರು ಚಿತ್ರದ ಗಳಿಕೆ ಕುರಿತು ತಿಳಿಸುತ್ತಿದ್ದಂತೆ ಸಮಂತಾ ಸಂತಸ ವ್ಯಕ್ತಪಡಿಸಿ, ಪ್ರೇಕ್ಷಕರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಚಿತ್ರದ ಯಶಸ್ಸಿನ ಕುರಿತು ಪ್ರತಿಕ್ರಿಯಿಸಿರುವ ಸಮಂತಾ, ಬಿಡುಗಡೆಗೂ ಮುನ್ನ ಮಹಿಳಾ ಪ್ರಧಾನ ಸಿನಿಮಾಗಳ ಬಗ್ಗೆ ಚಿತ್ರಮಂದಿರ ಮಾಲೀಕರು ಸೇರಿದಂತೆ ಹಲವರಿಗೆ ಅನುಮಾನವಿತ್ತು ಎಂದು ಹೇಳಿದ್ದಾರೆ. "ಮಹಿಳಾ ಪ್ರಧಾನ ಚಿತ್ರಗಳನ್ನು ಯಾರು ನೋಡುತ್ತಾರೆ?" ಎ...
ಹಿರಿಯ ಗಾಯಕಿ ಎಸ್. ಜಾನಕಿ ನಿಧನ; ಬಡವಾದ ಸಂಗೀತ ಲೋಕ

ಹಿರಿಯ ಗಾಯಕಿ ಎಸ್. ಜಾನಕಿ ನಿಧನ; ಬಡವಾದ ಸಂಗೀತ ಲೋಕ

ಪ್ರಮುಖ ಸುದ್ದಿ, ಸಿನಿಮಾ
ಮೈಸೂರು: ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ (88) ಅವರು ಹೃದಯಾಘಾತದಿಂದ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. 1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಿಸಿದ ಜಾನಕಿ ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದರು. ಕನ್ನಡದಲ್ಲಿ ಅವರ ಸ್ಪಷ್ಟ ಉಚ್ಚಾರಣೆ ಮತ್ತು ಭಾವಪೂರ್ಣ ಗಾಯನ ಅಪಾರ ಜನಪ್ರಿಯತೆ ಪಡೆದಿತ್ತು. ಡಾ. ರಾಜ್‌ಕುಮಾರ್, ಎಸ್.ಪಿ. ಬಾಲಸುಬ್ರಹ್ಮಣ್ಯಂ ಸೇರಿದಂತೆ ಅನೇಕ ದಿಗ್ಗಜರೊಂದಿಗೆ ಹಾಡಿದ ಅವರ ಗೀತೆಗಳು ಇಂದಿಗೂ ಜನಮನದಲ್ಲಿ ಅಚ್ಚೊತ್ತಿವೆ. ಧ್ವನಿಯನ್ನು ವಿವಿಧ ಪಾತ್ರಗಳಿಗೆ ತಕ್ಕಂತೆ ಬದಲಾಯಿಸುವ ಅಪರೂಪದ ಸಾಮರ್ಥ್ಯ ಅವರ ಗಾಯನದ ವಿಶೇಷವಾಗಿತ್ತು.ಎಸ್. ಜಾನಕಿ ಅವರಿಗೆ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 33 ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ತಮಿಳುನಾಡಿನ ಕಲೈಮಾಮಣಿ ಪ್...
ಭಾರತೀಯ ಸಂಗೀತ ಲೋಕ ಅದ್ಭುತ ಪ್ರತಿಭೆ.. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದ ಎಸ್. ಜಾನಕಿ

ಭಾರತೀಯ ಸಂಗೀತ ಲೋಕ ಅದ್ಭುತ ಪ್ರತಿಭೆ.. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದ ಎಸ್. ಜಾನಕಿ

ಪ್ರಮುಖ ಸುದ್ದಿ, ಸಿನಿಮಾ
ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನದಿಂದ ಭಾರತೀಯ ಸಂಗೀತ ಲೋಕ ಅಪಾರ ಪ್ರತಿಭೆಯನ್ನು ಕಳೆದುಕೊಂಡಿದೆ. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದ ಅವರು, ತಮ್ಮ ವಿಶಿಷ್ಟ ಧ್ವನಿ ಮತ್ತು ಭಾವಪೂರ್ಣ ಗಾಯನದ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದರು. ಈ ವರ್ಷದ ಜನವರಿಯಲ್ಲಿ ಪುತ್ರ ಮುರಳಿ ಕೃಷ್ಣ ನಿಧನ ಹೊಂದಿದ ಬಳಿಕ ಜಾನಕಿ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಇದೀಗ ಅವರ ಅಗಲಿಕೆಗೆ ಚಿತ್ರರಂಗ ಮತ್ತು ಸಂಗೀತ ಕ್ಷೇತ್ರದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. 1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಿಸಿದ ಎಸ್. ಜಾನಕಿ, ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದರು. ಅವರ ಸ್ಪಷ್ಟ ಕನ್ನಡ ಉಚ್ಚಾರಣೆ ಮತ್ತು ಭಾವಪೂರ್ಣ ಗಾಯನ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದೆ.70 ಮತ್ತು 80ರ ದಶಕದಲ್ಲಿ ಡಾ. ರಾಜ್‌ಕುಮಾರ್ ಹಾಗೂ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಹಾಡಿದ ಅನೇಕ ಗೀತೆಗಳು ಇಂದಿಗೂ ಸದಾಬಹಾರವಾಗಿವೆ. ಪಾತ್ರಕ್ಕ...
ಕಿಶನ್ ದಾಸ್–ಸಂಜನಾ ಅಭಿನಯದ ‘ಸೀ ಯು’ ಫಸ್ಟ್ ಲುಕ್ ಬಿಡುಗಡೆ

ಕಿಶನ್ ದಾಸ್–ಸಂಜನಾ ಅಭಿನಯದ ‘ಸೀ ಯು’ ಫಸ್ಟ್ ಲುಕ್ ಬಿಡುಗಡೆ

ಪ್ರಮುಖ ಸುದ್ದಿ, ಸಿನಿಮಾ
ಚೆನ್ನೈ: ನಿರ್ದೇಶಕ ಸಂತೋಷ್ ಶ್ರೀವತ್ಸನ್ ನಿರ್ದೇಶನದ ಬಹುನಿರೀಕ್ಷಿತ ತಮಿಳು ಚಿತ್ರ ‘ಸೀ ಯು’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ನಟ ಆರ್ಯ ಬಿಡುಗಡೆ ಮಾಡಿದ್ದಾರೆ. ಕಿಶನ್ ದಾಸ್ ಮತ್ತು ಸಂಜನಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಂಚಿಕೊಂಡ ಆರ್ಯ, ಪ್ರೀತಿ, ಭಾವನೆಗಳು ಮತ್ತು ನೆನಪುಗಳಿಂದ ಕೂಡಿದ ಈ ಚಿತ್ರ ಪ್ರೇಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಿಶನ್ ದಾಸ್ ಹಾಗೂ ಸಂಜನಾ ಜೋಡಿಯ ಅಭಿನಯವೂ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದು ಅವರು ಶುಭ ಹಾರೈಸಿದ್ದಾರೆ. ವಿಜಯ್, ಅಜ್ಮಲ್ ಖಾನ್ ಮತ್ತು ರೇಯಾ ನಿರ್ಮಿಸಿರುವ ಚಿತ್ರಕ್ಕೆ ಸಂದೀಪ್ ಕೆ. ವಿಜಯ್ ಛಾಯಾಗ್ರಹಣ, ಜೆನೆಮ್ ಸಂಗೀತ, ಎನ್.ಬಿ. ಶ್ರೀಕಾಂತ್ ಸಂಕಲನ ನೀಡಿದ್ದಾರೆ. ಸ್ಟನ್ನರ್ ಸ್ಯಾಮ್ ಸಾಹಸ ಸಂಯೋಜನೆ ಮಾಡಿದ್ದು, ವೇಷಭೂಷಣ ವಿನ್ಯಾಸವನ್ನು ಕಿರುತಿಖಾ ಶೇಖರ್ ನಿರ್ವಹಿಸಿದ್ದಾರೆ. ಇದೇ ವೇಳೆ ನಟ ಕಿಶನ್ ದಾಸ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೊಸ ಯೋಜನೆಗಳ ಕುರಿತು ಸ್ಪಷ್...
‘See U’ First Look Unveiled; Arya Launches Poster of Kishan Das-Sanjana Starrer

‘See U’ First Look Unveiled; Arya Launches Poster of Kishan Das-Sanjana Starrer

ಪ್ರಮುಖ ಸುದ್ದಿ, ಸಿನಿಮಾ
Chennai: The first look poster of the upcoming Tamil romantic drama 'See U', starring Kishan Das and Sanjana in the lead roles, has been unveiled by actor Arya, generating excitement among cinema lovers. Sharing the poster on social media, Arya described the film as a heartwarming story filled with love, emotions and cherished memories, expressing confidence that it would leave a lasting impression on audiences. He also wished the film's team, including lead actors Kishan Das and Sanjana, great success.#SeeU ❤️ Happy to share the First Look of #SeeU with all of you. Produced by #AjmalKhan @reyaahari & DirectorVijay Directed by @santhoshsrivtsn A beautiful journey filled with love, emotions, and memories that will stay with us forever. Hope this pair @kishendas & @isanjkayy… pic....
ಹೆಣ್ಣೊಬ್ಬಳ ವಿಚಿತ್ರ ಕಥೆ; ‘ಓ ಸುಕುಮಾರಿ!’ ಟ್ರೇಲರ್ ಬಿಡುಗಡೆ

ಹೆಣ್ಣೊಬ್ಬಳ ವಿಚಿತ್ರ ಕಥೆ; ‘ಓ ಸುಕುಮಾರಿ!’ ಟ್ರೇಲರ್ ಬಿಡುಗಡೆ

ಪ್ರಮುಖ ಸುದ್ದಿ, ಸಿನಿಮಾ
ಹೈದರಾಬಾದ್: ನಿರ್ದೇಶಕ ಭರತ್ ದರ್ಶನ್ ಅವರ ಬಹುನಿರೀಕ್ಷಿತ ತೆಲುಗು ಚಿತ್ರ ‘ಓ ಸುಕುಮಾರಿ!’ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖ್ಯಾತ ನಿರ್ದೇಶಕ ಅನಿಲ್ ರವಿಪುಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಟ್ರೇಲರ್‌ನಲ್ಲಿ ದಾಮಿನಿ ಎಂಬ ಯುವತಿಯ ವಿಚಿತ್ರ ಕಥೆಯನ್ನು ಪರಿಚಯಿಸಲಾಗಿದೆ. ಅವಳನ್ನು ಮುಟ್ಟಿದವರಿಗೆ ವಿದ್ಯುತ್ ಶಾಕ್ ಆಗುತ್ತದೆ ಎಂಬ ನಂಬಿಕೆಯಿಂದ ಇಡೀ ಗ್ರಾಮವೇ ಭಯಪಡುತ್ತದೆ. ಈ ರಹಸ್ಯವನ್ನು ಮುಚ್ಚಿಟ್ಟು ನಾಯಕನೊಂದಿಗೆ ಅವಳ ಮದುವೆ ಮಾಡಲಾಗುತ್ತದೆ. ಬಳಿಕ ಈ ಅಸಾಮಾನ್ಯ ಸಮಸ್ಯೆಯಿಂದ ನವದಂಪತಿ ಎದುರಿಸುವ ಹಾಸ್ಯಮಯ ಹಾಗೂ ಅನಿರೀಕ್ಷಿತ ಘಟನೆಗಳು ಚಿತ್ರದ ಪ್ರಮುಖ ಕಥಾಹಂದರವಾಗಿದೆ.ಅಸಾಮಾನ್ಯ ಕಥಾವಸ್ತುವಿನ ಜೊತೆಗೆ ಭಾವನೆ ಮತ್ತು ಹಾಸ್ಯವನ್ನು ಸಮತೋಲನದಿಂದ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕ ಭರತ್ ದರ್ಶನ್ ಮಾಡಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. https://youtu.be/TL0-kMdqt_s?si=fDZWRjgDvThUm7AX ಚಿತ್ರದಲ್ಲಿ ಐಶು ದಿಲ್ ಮತ್ತು ತಿರುವೀರ್ ಪ್ರಮುಖ ...
‘ಕರಾವಳಿ’ ಟ್ರೇಲರ್ ಬಿಡುಗಡೆ; ಕಂಬಳದ ಕಥೆ ತೆರೆ ಮೇಲೆ

‘ಕರಾವಳಿ’ ಟ್ರೇಲರ್ ಬಿಡುಗಡೆ; ಕಂಬಳದ ಕಥೆ ತೆರೆ ಮೇಲೆ

ಪ್ರಮುಖ ಸುದ್ದಿ, ಸಿನಿಮಾ
ಬೆಂಗಳೂರು: ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ ಹಾಗೂ ರಮೇಶ್ ಇಂದಿರ ನಟನೆಯ ಬಹುನಿರೀಕ್ಷಿತ ‘ಕರಾವಳಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಆರಂಭದಿಂದಲೇ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಚಿತ್ರದ ಟ್ರೇಲರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರವು ಜುಲೈ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಗುರುದತ್ ಗಾಣಿಗ ನಿರ್ದೇಶಿಸಿರುವ ಈ ಚಿತ್ರದ ಟ್ರೇಲರ್‌ನಲ್ಲಿ ಕರಾವಳಿ ಸಂಸ್ಕೃತಿ, ಸಂಪ್ರದಾಯ ಹಾಗೂ ಕಂಬಳ ಕ್ರೀಡೆಯ ವೈಭವವನ್ನು ಪ್ರಮುಖವಾಗಿ ಅನಾವರಣಗೊಳಿಸಲಾಗಿದೆ. ಕರಾವಳಿಯ ಜೀವನಶೈಲಿ ಮತ್ತು ಜನಪದ ಸಂಸ್ಕೃತಿಯನ್ನು ಅದ್ಧೂರಿಯಾಗಿ ತೆರೆ ಮೇಲೆ ಕಟ್ಟಿಕೊಡುವ ಪ್ರಯತ್ನ ಟ್ರೇಲರ್‌ನಲ್ಲಿ ಗೋಚರಿಸುತ್ತದೆ.ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಗುರುದತ್ ಗಾಣಿಗ, ನಟ ರಾಜ್ ಬಿ. ಶೆಟ್ಟಿ, ನಟಿಯರಾದ ಸಂಪದಾ ಮತ್ತು ಸುಷ್ಮಿತಾ, ನಟರಾದ ಮಿತ್ರ, ಶ್ರೀಧರ್ ಸೇರಿದಂತೆ ಚಿತ್ರತಂಡದ ಸದಸ್ಯರು ಭಾಗವಹಿಸಿದ್ದರು. ಆದರೆ ಚಿತ್ರದ ನಾಯಕ ಪ್ರಜ್ವಲ್ ದೇವರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿಲ್ಲ. ಚಿತ್ರದ ಕುರಿತು ಮತ್ತೊಂದು ವಿಶೇಷವೆಂದರೆ, ಟ್ರೇಲರ್‌ಗೆ ...