Tuesday, August 4

ಸಿನಿಮಾ

ರೇನ್‌ಡಾನ್ಸ್ ಚಿತ್ರೋತ್ಸವದಲ್ಲಿ ಕರ್ನಾಟಕಕ್ಕೆ ಹೆಮ್ಮೆ; ಅನೂಯಾ ಸ್ವಾಮಿ ತಂಡಕ್ಕೆ ಸಿಎಂ ಅಭಿನಂದನೆ

ರೇನ್‌ಡಾನ್ಸ್ ಚಿತ್ರೋತ್ಸವದಲ್ಲಿ ಕರ್ನಾಟಕಕ್ಕೆ ಹೆಮ್ಮೆ; ಅನೂಯಾ ಸ್ವಾಮಿ ತಂಡಕ್ಕೆ ಸಿಎಂ ಅಭಿನಂದನೆ

ಪ್ರಮುಖ ಸುದ್ದಿ, ಸಿನಿಮಾ
ಬೆಂಗಳೂರು: ಲಂಡನ್‌ನಲ್ಲಿ ನಡೆದ 34ನೇ ರೇನ್‌ಡಾನ್ಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ ಪ್ರಶಸ್ತಿ ಗೆದ್ದ ಅನೂಯಾ ಸ್ವಾಮಿ ಹಾಗೂ ಪಂಕಜಾ ಚಿತ್ರದ ತಂಡಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ, "ಕರ್ನಾಟಕವು ಜಾಗತಿಕ ವೇದಿಕೆಯಲ್ಲಿ ಮತ್ತೊಂದು ಹೆಮ್ಮೆಯ ಕ್ಷಣವನ್ನು ಆಚರಿಸುತ್ತಿದೆ" ಎಂದು ಹೇಳಿದ್ದಾರೆ. 34ನೇ ರೇನ್‌ಡಾನ್ಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಅನೂಯಾ ಸ್ವಾಮಿ ಮತ್ತು ಪಂಕಜಾ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.ಈ ಸಾಧನೆಯೊಂದಿಗೆ ಅನೂಯಾ ಸ್ವಾಮಿ, ಈ ವಿಭಾಗದಲ್ಲಿ ರೇನ್‌ಡಾನ್ಸ್ ಚಲನಚಿತ್ರೋತ್ಸವದ ಅತ್ಯುನ್ನತ ಗೌರವ ಪಡೆದ ಮೊದಲ ಭಾರತೀಯ ಚಲನಚಿತ್ರ ನಿರ್ಮಾಪಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಪಂಕಜಾ ಚಿತ್ರ ಅಕಾಡೆಮಿ ಪ್ರಶಸ್ತಿ (ಆಸ್ಕರ್) ಪರಿಗಣನೆಗೂ ಅರ್ಹತೆ ಪಡೆದಿದೆ. "ನಿಮ್ಮ ಈ ಯಶಸ್ಸು ಕರ್ನಾಟಕದ ಕಥೆಗಾರರ ಸೃಜನಶೀಲತೆ, ಪ್ರತಿಭೆ ಮತ್ತು ಅ...
ಚಿತ್ರರಂಗಕ್ಕೆ ಉತ್ತೇಜನ: ಕೇಂದ್ರದಿಂದ ಎರಡು ಮಹತ್ವದ ಸುಧಾರಣೆಗಳು

ಚಿತ್ರರಂಗಕ್ಕೆ ಉತ್ತೇಜನ: ಕೇಂದ್ರದಿಂದ ಎರಡು ಮಹತ್ವದ ಸುಧಾರಣೆಗಳು

ಪ್ರಮುಖ ಸುದ್ದಿ, ಸಿನಿಮಾ
ನವದೆಹಲಿ: ಭಾರತೀಯ ಚಲನಚಿತ್ರೋದ್ಯಮದ ಬೆಳವಣಿಗೆ ಮತ್ತು ದೇಶಾದ್ಯಂತ ಸಿನಿಮಾ ಮೂಲಸೌಕರ್ಯ ವಿಸ್ತರಣೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಎರಡು ಮಹತ್ವದ ಸುಧಾರಣಾ ಕ್ರಮಗಳನ್ನು ಘೋಷಿಸಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಚಿತ್ರರಂಗದ ಅಭಿವೃದ್ಧಿ, ವಿತರಣೆ ಹಾಗೂ ತಾಂತ್ರಿಕ ನವೀನತೆಗಳಿಗೆ ಉತ್ತೇಜನ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೊದಲ ಹೆಜ್ಜೆಯಾಗಿ, Prasoon Joshi ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಅಧ್ಯಯನ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಚಿತ್ರರಂಗದ ಸವಾಲುಗಳು ಮತ್ತು ಅವಕಾಶಗಳನ್ನು ಪರಿಶೀಲಿಸಿ, ಕೃತಕ ಬುದ್ಧಿಮತ್ತೆ, ವರ್ಚುವಲ್ ಪ್ರೊಡಕ್ಷನ್‌ ಸೇರಿದಂತೆ ಹೊಸ ತಂತ್ರಜ್ಞಾನಗಳ ಅಳವಡಿಕೆ, ಹಣಕಾಸು ಸೌಲಭ್ಯಗಳು ಹಾಗೂ ಜಾಗತಿಕ ಸ್ಪರ್ಧಾತ್ಮಕತೆ ಹೆಚ್ಚಿಸುವ ಕುರಿತು ಶಿಫಾರಸುಗಳನ್ನು ನೀಡಲಿದೆ. ಸಮಿತಿ ಮೂರು ತಿಂಗಳಲ್ಲಿ ವರದಿ ಸಲ್ಲಿಸಲಿದೆ.ಎರಡನೇ ಹಂತವಾಗಿ, ಸಿನಿಮಾ ಮಂದಿರಗಳ ಸ್ಥಾಪನೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ‘ಮಾದರಿ ರಾಜ್ಯ ಸಿನಿಮಾ ನಿಯಮ...
‘ಅಯೋಗ್ಯ 2’ ಯಶೋಗಾಥೆಗೆ ‘ಮುದ್ದು ಮುದ್ದು ಪುಟ್ಟಲಕ್ಷ್ಮಿ’ ಮುನ್ನುಡಿ!

‘ಅಯೋಗ್ಯ 2’ ಯಶೋಗಾಥೆಗೆ ‘ಮುದ್ದು ಮುದ್ದು ಪುಟ್ಟಲಕ್ಷ್ಮಿ’ ಮುನ್ನುಡಿ!

ಪ್ರಮುಖ ಸುದ್ದಿ, ಸಿನಿಮಾ
‘ಅಯೋಗ್ಯ 2’ ಆಗಸ್ಟ್ 7ರಂದು ತೆರೆಗೆ ಬರಲು ಸಜ್ಜಾಗಿದೆ. ಭಾರೀ ನಿರೀಕ್ಷೆಹುಟ್ಟಿಸಿರುವ ಈ ಚಿತ್ರದ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಕತ್ ಲೈಕ್ಸ್ ಗಿಟ್ಟಿಸಿಕೊಂಡಿದೆ. ಈ ಚಿತ್ರದಲ್ಲಿ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ನಟಿಸಿದ್ದಾರೆ. ‘ಅಯೋಗ್ಯ’ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ‘ಅಯೋಗ್ಯ 2’ ಕೂಡಾ ಯಶೋಗಾಥೆ ಬರೆಯಲಿದೆ ಎಂದು ಚಿತ್ರ ವಿಸ್ವಾಸದಲ್ಲಿದೆ.ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರದ ‘ಮುದ್ದು ಮುದ್ದು ಪುಟ್ಟಲಕ್ಷ್ಮಿ’ ವಿಡಿಯೋ ಸಾಂಗ್ ನೋಡಿದ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಸಿನಿಮಾವನ್ನು ಮಹೇಶ್ ಅವರು ನಿರ್ದೇಶಿಸಿದ್ದಾರೆ https://youtu.be/zQCM3EtAohM?si=AVyx-mWPhwQCH3Zb  ...
‘ಜನ ನಾಯಗನ್’ ನಿರ್ಮಾಪಕ ಕೆ. ವೆಂಕಟ್ ನಾರಾಯಣ್‌ಗೆ ಸಂಪುಟ ದರ್ಜೆ ಸ್ಥಾನಮಾನ

‘ಜನ ನಾಯಗನ್’ ನಿರ್ಮಾಪಕ ಕೆ. ವೆಂಕಟ್ ನಾರಾಯಣ್‌ಗೆ ಸಂಪುಟ ದರ್ಜೆ ಸ್ಥಾನಮಾನ

ಪ್ರಮುಖ ಸುದ್ದಿ, ಸಿನಿಮಾ
ಚೆನ್ನೈ: ನಟ ಜೋಸೆಫ್ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರದ ನಿರ್ಮಾಪಕ ಕೆ. ವೆಂಕಟ್ ನಾರಾಯಣ್ ಅವರನ್ನು ತಮಿಳುನಾಡು ಸರ್ಕಾರ ನವದೆಹಲಿಯ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಿದೆ. ಈ ಹುದ್ದೆಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ವಿಜಯ್ ಅವರ ಕೊನೆಯ ಚಿತ್ರ ಎನ್ನಲಾಗುತ್ತಿರುವ ‘ಜನ ನಾಯಗನ್’ ಇನ್ನೂ ಬಿಡುಗಡೆಯಾಗಿಲ್ಲ. ಚಿತ್ರಕ್ಕೆ ಬಂಡವಾಳ ಹೂಡಿರುವ ವೆಂಕಟ್ ನಾರಾಯಣ್ ಅವರಿಗೆ ನಷ್ಟದ ಪರಿಸ್ಥಿತಿ ಎದುರಾಗಿದೆ ಎಂಬ ಚರ್ಚೆಯ ನಡುವೆಯೇ ಈ ನೇಮಕ ನಡೆದಿದೆ.ಈ ಬೆಳವಣಿಗೆಗೆ ಸಂಬಂಧಿಸಿ ತಮಿಳು ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದ್ದು, ನೇಮಕಕ್ಕೂ ಸಿನಿಮಾಗೂ ಸಂಬಂಧವಿಲ್ಲ ಎಂದು ತಮಿಳಗ ವೆಟ್ರಿ ಕಳಗಂ ನಾಯಕರು ಸ್ಪಷ್ಟನೆ ನೀಡಿದ್ದಾರೆ. ವಿಜಯ್ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಲು ತೆರಳಿದ್ದ ಸಂದರ್ಭದಲ್ಲೂ ವೆಂಕಟ್ ನಾರಾಯಣ್ ಜೊತೆಗಿದ್ದರು. ಅವರ ಆಡಳಿತಾತ್ಮಕ ಅನುಭವ ಮತ್ತು ನಂಬಿಕೆಯ ಆಧಾರದ ಮೇಲೆ ಈ ಜವಾಬ್ದಾರಿ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ....
‘Jana Nayagan’ producer K. Venkat Narayan appointed Tamil Nadu’s special representative in Delhi

‘Jana Nayagan’ producer K. Venkat Narayan appointed Tamil Nadu’s special representative in Delhi

ಪ್ರಮುಖ ಸುದ್ದಿ, ಸಿನಿಮಾ
Chennai: The Tamil Nadu government has appointed K. Venkat Narayan, producer of actor Vijay’s upcoming film Jana Nayagan, as the state’s special representative in New Delhi. The appointment carries cabinet-level status, according to reports. The move has triggered political discussions in Tamil Nadu, as it comes at a time when speculation is growing over the financial prospects of Jana Nayagan, which is yet to hit theatres. However, leaders of Tamilaga Vettri Kazhagam have clarified that the appointment is unrelated to the film.Venkat Narayan, who has invested in the project, was also present with Vijay during recent political activities, including when Vijay made moves related to his political plans. Party sources said the responsibility was given considering Venkat Narayan’s administra...
ಮಾದಕ ದ್ರವ್ಯ ವಿರುದ್ಧ ಬೀದಿಗಿಳಿದ ಸಿಎಂ ದಳಪತಿ ವಿಜಯ್ : ಚೆನ್ನೈನಲ್ಲಿ 6 ಕಿ.ಮೀ ‘ಸ್ಟಾರ್ಟ್ ರನ್

ಮಾದಕ ದ್ರವ್ಯ ವಿರುದ್ಧ ಬೀದಿಗಿಳಿದ ಸಿಎಂ ದಳಪತಿ ವಿಜಯ್ : ಚೆನ್ನೈನಲ್ಲಿ 6 ಕಿ.ಮೀ ‘ಸ್ಟಾರ್ಟ್ ರನ್

ಪ್ರಮುಖ ಸುದ್ದಿ, ಸಿನಿಮಾ
ಚೆನ್ನೈ: ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಚೆನ್ನೈನಲ್ಲಿ ಆಯೋಜಿಸಿದ್ದ ‘ಸ್ಟಾರ್ಟ್ ರನ್, ಸ್ಟಾಪ್ ಡ್ರಗ್ಸ್’ ಮ್ಯಾರಥಾನ್‌ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ Thalapathy Vijay ಅವರು ಭಾಗವಹಿಸಿ ಸಾರ್ವಜನಿಕರ ಗಮನ ಸೆಳೆದರು. ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ನಡೆದ ಈ ಓಟದಲ್ಲಿ ಸಿಎಂ ವಿಜಯ್ ಅವರು ಬರೋಬ್ಬರಿ 6 ಕಿಲೋಮೀಟರ್ ಓಡಿ ಮಾದರಿಯಾದರು. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿಗಳು ಕೇವಲ ಚಾಲನೆ ನೀಡಿ ನಿರ್ಗಮಿಸುವುದು ರೂಢಿ. ಆದರೆ ಯಾವುದೇ ರಾಜಕೀಯ ಹಮ್ಮು-ಬಿಮ್ಮು ಇಲ್ಲದೆ, ಸಾಮಾನ್ಯ ನಾಗರಿಕನಂತೆ ಜನರೊಂದಿಗೆ ಹೆಜ್ಜೆ ಹಾಕಿದ ದಳಪತಿ ವಿಜಯ್ ಅವರ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಮ್ಯಾರಥಾನ್ ವೇಳೆ ಸಿಎಂ ವಿಜಯ್ ಅವರನ್ನು ಕಂಡ ಯುವಕ-ಯುವತಿಯರು ಸೆಲ್ಫೀಗಾಗಿ ಮುಗಿಬಿದ್ದ ದೃಶ್ಯಗಳು ಗಮನಸೆಳೆದವು. ಎಲ್ಲರೊಂದಿಗೆ ಹೆಜ್ಜೆಗೂಡಿ, ನಂತರ ಸಾರ್ವಜನಿಕರ ಜೊತೆ ಜೊತೆಯಾಗಿಯೇ 6 ಕಿಲೋಮೀಟರ್ ದೂರವನ್ನು ಓಡಿ ಮುಗಿಸಿದ ಅವರು, ಮಾದಕ ದ್ರವ್ಯ ವಿರೋಧಿ ಸಂದೇಶವನ್ನು ಪ್ರಬಲವಾಗಿ ಸಾರಿದರು. ತಮಿಳುನಾ...
‘ತೇರಾ ಯಾರ್ ಹೂ ಮೈ’ ಜುಲೈ 24ಕ್ಕೆ ಬಿಡುಗಡೆ: ಹೀಗಿದೆ ಶೀರ್ಷಿಕೆ ಗೀತೆಯ ಟೀಸರ್

‘ತೇರಾ ಯಾರ್ ಹೂ ಮೈ’ ಜುಲೈ 24ಕ್ಕೆ ಬಿಡುಗಡೆ: ಹೀಗಿದೆ ಶೀರ್ಷಿಕೆ ಗೀತೆಯ ಟೀಸರ್

ಪ್ರಮುಖ ಸುದ್ದಿ, ಸಿನಿಮಾ
ಮುಂಬೈ: ಚಲನಚಿತ್ರ ನಿರ್ದೇಶಕ ಮಿಲಾಪ್ ಮಿಲನ್ ಜವೇರಿ ಅವರ ಮುಂಬರುವ ಪ್ರಣಯ-ಮನರಂಜನಾ ಚಿತ್ರ ತೇರಾ ಯಾರ್ ಹೂ ಮೈ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಚಿತ್ರವು ಜುಲೈ 24, 2026 ರಂದು ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ. ಮೊದಲಿಗೆ ಜುಲೈ 31ಕ್ಕೆ ಬಿಡುಗಡೆ ಮಾಡುವ ಯೋಜನೆ ಇದ್ದು, ಇದೀಗ ಒಂದು ವಾರ ಮುಂಚಿತವಾಗಿ ಪ್ರದರ್ಶನ ಕಾಣಲಿದೆ.ಹಿರಿಯ ನಿರ್ಮಾಪಕ ಇಂದ್ರ ಕುಮಾರ್ ಅವರ ಪುತ್ರ ಅಮನ್ ಇಂದ್ರ ಕುಮಾರ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಾಯಕಿಯಾಗಿ ಆಕಾಂಕ್ಷಾ ಶರ್ಮಾ ನಟಿಸಿದ್ದು, ಹಿರಿಯ ನಟ ಪರೇಶ್ ರಾವಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.A small glimpse. A lot of emotions. 🎶#TeraYaarHoonMain Title Track Teaser out now. Directed by #MilapZaveri. Full song releasing on 24th June.#TeraYaarHoonMain releasing in cinemas on 24th July, 2026#AmanIndraKumar #AkankshaSharma @masszaveri @Indra_kumar_9 @tandon.sachet… pic.twitter.com/GYSpGX3Zlp — Komal Nahta (@KomalN...
ಆರ್. ಮಾಧವನ್‌ಗೆ ಪದ್ಮಶ್ರೀ ಗೌರವ; ಗೌರವಕ್ಕೆ ‘ಧುರಂಧರ್’ ನಟ ಭಾವನಾತ್ಮಕ ಪ್ರತಿಕ್ರಿಯೆ

ಆರ್. ಮಾಧವನ್‌ಗೆ ಪದ್ಮಶ್ರೀ ಗೌರವ; ಗೌರವಕ್ಕೆ ‘ಧುರಂಧರ್’ ನಟ ಭಾವನಾತ್ಮಕ ಪ್ರತಿಕ್ರಿಯೆ

ಪ್ರಮುಖ ಸುದ್ದಿ, ಸಿನಿಮಾ
ನವದೆಹಲಿ: ಭಾರತೀಯ ಚಿತ್ರರಂಗದ ಖ್ಯಾತ ನಟ ಆರ್. ಮಾಧವನ್ ಅವರಿಗೆ ಭಾರತ ಸರ್ಕಾರದ ಪ್ರತಿಷ್ಠಿತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಧವನ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಸರಿತಾ ಹಾಗೂ ಪುತ್ರ ವೇದಾಂತ್ ಉಪಸ್ಥಿತರಿದ್ದು ಸಂಭ್ರಮಿಸಿದರು. ಮಾಧವನ್ ಪ್ರಶಸ್ತಿ ಸ್ವೀಕರಿಸಲು ವೇದಿಕೆಯತ್ತ ತೆರಳುತ್ತಿದ್ದಂತೆ, ಪ್ರೇಕ್ಷಕರ ಸಾಲಿನಲ್ಲಿದ್ದ ಅವರ ಪತ್ನಿ ಮತ್ತು ಪುತ್ರ ಹೆಮ್ಮೆಯಿಂದ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಈ ಭಾವನಾತ್ಮಕ ಕ್ಷಣ ಸಮಾರಂಭದ ಪ್ರಮುಖ ಆಕರ್ಷಣೆಯಾಗಿತ್ತು. ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯದ ಮೂಲಕ ವಿಶೇಷ ಗುರುತಿಸಿಕೊಂಡಿರುವ ಮಾಧವನ್, ಇತ್ತೀಚೆಗೆ ಬಿಡುಗಡೆಯಾದ ಧುರಂಧರ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿದ್ದಾರೆ.ಪದ್ಮಶ್ರೀ ಗೌರವಕ್ಕೆ ಭಾವನಾತ್ಮಕ ಪ್ರತಿಕ್ರಿಯೆ ಪದ್ಮಶ್ರೀ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ X ನಲ್ಲಿ...
‘ಮಾ ಇಂಟಿ ಬಂಗಾರಂ’ಗೆ ಮೆಚ್ಚುಗೆ; . ತಾಯಿ ಆಗಲಿರುವ ಸಮಂತಾಗೆ ವಿಶೇಷ ಉಡುಗೊರೆ ನೀಡಿದ ಮೆಗಾಸ್ಟಾರ್

‘ಮಾ ಇಂಟಿ ಬಂಗಾರಂ’ಗೆ ಮೆಚ್ಚುಗೆ; . ತಾಯಿ ಆಗಲಿರುವ ಸಮಂತಾಗೆ ವಿಶೇಷ ಉಡುಗೊರೆ ನೀಡಿದ ಮೆಗಾಸ್ಟಾರ್

ಪ್ರಮುಖ ಸುದ್ದಿ, ಸಿನಿಮಾ
ಸಮಂತಾ ಋತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾವನ್ನು ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ಅವರು ತಮ್ಮ ಕುಟುಂಬದೊಂದಿಗೆ ಸಮಂತಾ ಅವರನ್ನು ಮನೆಗೆ ಆಹ್ವಾನಿಸಿ ಆತ್ಮೀಯವಾಗಿ ಸತ್ಕರಿಸಿದ್ದಾರೆ. ತಾಯಿ ಆಗಲಿರುವ ಸಮಂತಾ ಅವರಿಗೆ ವಿಶೇಷ ಉಡುಗೊರೆಗಳೊಂದಿಗೆ ಆಶೀರ್ವಾದವೂ ನೀಡಿದ್ದಾರೆ. ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ, ಸಮಂತಾ ಅವರಿಗೆ ಸೀರೆ, ಪವಿತ್ರ ವಸ್ತುಗಳು ಹಾಗೂ ಶಂಖವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಸಂದರ್ಭದ ಚಿತ್ರಗಳನ್ನು ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಮಂತಾಗೆ ಅಭಿನಂದನೆ ಸಲ್ಲಿಸಿದ್ದಾರೆ.ತಮ್ಮ ಪೋಸ್ಟ್‌ನಲ್ಲಿ ಚಿರಂಜೀವಿ, “‘ಮಾ ಇಂಟಿ ಬಂಗಾರಂ’ ಚಿತ್ರ ಅತ್ಯಂತ ಆಸಕ್ತಿದಾಯಕವಾಗಿದೆ. ಅವಿಭಕ್ತ ಕುಟುಂಬದ ಹಿನ್ನೆಲೆಯಲ್ಲಿನ ಆಕ್ಷನ್ ಮತ್ತು ಭಾವನೆಗಳನ್ನು ನಿರ್ದೇಶಕಿ ನಂದಿನಿ ರೆಡ್ಡಿ ತಮ್ಮ ವಿಶಿಷ್ಟ ಶೈಲಿಯಲ್ಲಿ ಸುಂದರವಾಗಿ ಬೆರೆಸಿದ್ದಾರೆ” ಎಂದು ಪ್ರಶಂಸಿಸಿದ್ದಾರೆ. ಸಮಂತಾ ಅವರ ನಟನೆ, ವಿಶೇಷವಾಗಿ ಸೀರೆಯಲ್ಲಿನ ಆಕ್ಷನ್ ದೃಶ್ಯಗಳು ಗಮನ ಸೆಳೆಯುತ್ತವೆ ಎಂದೂ ಹೇಳಿದ್ದಾರೆ. ಮಹಿಳಾ ಪ...
ಮಲಯಾಳಂ ಚಿತ್ರದಲ್ಲಿ ಕಿಚ್ಚ ಸುದೀಪ್? ‘ಉಯಿರ್’ನಲ್ಲಿ ಅತಿಥಿ ಪಾತ್ರ..!

ಮಲಯಾಳಂ ಚಿತ್ರದಲ್ಲಿ ಕಿಚ್ಚ ಸುದೀಪ್? ‘ಉಯಿರ್’ನಲ್ಲಿ ಅತಿಥಿ ಪಾತ್ರ..!

ಪ್ರಮುಖ ಸುದ್ದಿ, ಸಿನಿಮಾ
ಬೆಂಗಳೂರು: ಕನ್ನಡ ಚಿತ್ರರಂಗದ ಸ್ಟಾರ್ ನಟ ಕಿಚ್ಚ ಸುದೀಪ್ ಇದೀಗ ಮಲಯಾಳಂ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದಾರೆ ಎನ್ನುವ ಸುದ್ದಿ ಸಿನಿ ವಲಯದಲ್ಲಿ ಕುತೂಹಲ ಮೂಡಿಸಿದೆ. ಮಲಯಾಳಂ ಮಾಧ್ಯಮಗಳ ವರದಿಯಂತೆ, ಸುದೀಪ್ ಈಗಾಗಲೇ ಉಯಿರ್ ಎಂಬ ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದಾರೆ. ‘ಉಯಿರ್’ ಒಂದು ಮರ್ಡರ್ ಮಿಸ್ಟರಿ ಥ್ರಿಲ್ಲರ್ ಚಿತ್ರವಾಗಿದ್ದು, ಮಲಯಾಳಂನ ಪ್ರತಿಭಾವಂತ ನಟ ರೋಷನ್ ಮ್ಯಾಥೀವ್ ಈ ಸಿನಿಮಾದ ನಾಯಕ. ಸುದೀಪ್ ಅವರು ಕಥೆಗೆ ಮಹತ್ವದ ತಿರುವು ನೀಡುವ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಚಿತ್ರದ ಮೂಲಕವೇ ಸುದೀಪ್ ಮಲಯಾಳಂ ಸಿನಿರಂಗಕ್ಕೆ ಅಧಿಕೃತ ಪ್ರವೇಶ ಪಡೆಯುತ್ತಿದ್ದಾರೆ. ಈ ಸಿನಿಮಾ ಜೂನ್ 26 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ‘ಜೋಸೆಫ್’ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಪದ್ಮಕುಮಾರ್ ಅವರು ‘ಉಯಿರ್’ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಇನ್ನು ಸುದೀಪ್ ಅವರ ಕನ್ನಡ ಸಿನಿಮಾಗಳ ವಿಚಾರಕ್ಕೆ ಬಂದರೆ, ‘ಬಿಲ್ಲಾ ರಂಗ ಭಾಷಾ’ ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿದ್ದು, ಇದರೊಂದಿಗೆ ಇನ್ನೂ ಎರಡು ಸಿನಿಮಾಗಳಿಗೆ ಸುದೀಪ್ ಒಪ್ಪಿಗೆ ನೀಡಿದ್ದ...