
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಸಂಚಿನ ಪ್ರಕರಣದ ಜೊತೆಯಲ್ಲೇ ವೇಳೆ ಶಾಸಕ ರಾಜೇಂದ್ರ ಹತ್ಯೆ ಸಂಚಿನ ಆರೋಪವೂ ತಲ್ಲಣ ಸೃಷ್ಟಿಸಿದೆ.
ತಮ್ಮ ಹತ್ಯೆಗೆ ಸಂಚು ನಡೆದಿದೆ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಪುತ್ರ, ಎಂಎಲ್ಸಿ ರಾಜೇಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಎಫ್ಐಆರ್ ಕೂಡ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿರುವಂತೆಯೇ, ಹತ್ಯೆ ಸಂಚಿನದ್ದೆನ್ನಲಾದ ಆಡಿಯೋ ತುಣುಕೊಂದು ವೈರಲ್ ಆಗಿದೆ.
ಕೊಲೆ ಸಂಚಿಗೆ ಸಂಬಂಧಿಸಿದ ಆಡಿಯೋವನ್ನೂ ಪೊಲೀಸರಿಗೆ ನೀಡಿದ್ದಾಗಿ ರಾಜೇಂದ್ರ ಹೇಳಿದ್ದರು. ಆ ಆಡಿಯೋದ್ದೆನ್ನಲಾದ ತುಣುಕೊಂದು ಬಹಿರಂಗವಾಗಿದೆ. ಮಹಿಳೆಯು ಆ ಆಡಿಯೋದಲ್ಲಿ ಅನೇಕ ರಹಸ್ಯಗಳನ್ನು ಆಡಿಯೋದಲ್ಲಿ ಹೇಳಿಕೊಂಡಂತಿದೆ. ಆದರೆ, ಹತ್ಯೆ ಸಂಚಿನ ಹಿಂದಿನ ಮಹಾನಾಯಕ ಯಾರು ಎಂಬ ಸುಳಿವು ವ್ಯಕ್ತವಾಗಿಲ್ಲ.