
ಪ್ರಾದೇಶಿಕತೆ ಭಯೋತ್ಪಾದನೆಗಿಂತ ಅಪಾಯಕಾರಿ? ವಿವಾದದ ಕಿಡಿ ಹಚ್ಚಿದ ಪವನ್ ಕಲ್ಯಾಣ್ ಹೇಳಿಕೆ
ಹೈದರಾಬಾದ್: ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರ ಹೇಳಿಕೆಗಳು ತೆಲಂಗಾಣದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿವೆ. ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಮತ್ತು ತೆಲಂಗಾಣ ಹೋರಾಟಗಾರರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತೆಲಂಗಾಣ ರಾಜ್ಯ ರಚನಾ ದಿನದ ಅಂಗವಾಗಿ ಹೈದರಾಬಾದ್ನಲ್ಲಿ ಸಾರ್ವಜನಿಕ ಸಭೆ ನಡೆಸಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಪವನ್ ಕಲ್ಯಾಣ್, “ಪ್ರಾದೇಶಿಕತೆ ಭಯೋತ್ಪಾದನೆಗಿಂತ ಅಪಾಯಕಾರಿ” ಎಂಬ ಹೇಳಿಕೆ ನೀಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಹೇಳಿಕೆ ತೆಲಂಗಾಣದ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ವಿರೋಧಿಗಳು ಆರೋಪಿಸಿದ್ದಾರೆ.ವಿವಾದಕ್ಕೆ ಮೂಲ ಕಾರಣ ರಾಜಕೀಯ ವಿಶ್ಲೇಷಕ ಹಾಗೂ ಮಾಜಿ ಎಂಎಲ್ಸಿ ಪ್ರೊ. ಕೆ. ನಾಗೇಶ್ವರ್ ನೀಡಿದ್ದ ಕೆಲವು ಹೇಳಿಕೆಗಳು. ಪವನ್ ಕಲ್ಯಾಣ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಡುವಿನ ಭೇಟಿಗೆ ಸಂಬಂಧಿಸಿದಂತೆ ಅವರು ನೀಡಿದ್ದ ಹೇಳಿಕೆಗಳನ್ನು ನಂತರ ಹಿಂತೆಗೆದುಕೊಂಡರೂ, ಅವರ ವಿರುದ್ಧ ಆಂಧ್ರಪ್ರದೇಶದಲ್ಲಿ ಹಲವು ಪ್ರಕರಣಗಳು ದಾಖಲಾಗಿದ್...









