
‘ದೀರ್ಘ ಸಿನಿ ಪ್ರಯಾಣಕ್ಕೆ ಎಲ್ಲರ ಸಹಕಾರ ಕಾರಣ’; ಕಿಚ್ಚ ಸುದೀಪ್
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಮೂರು ದಶಕಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್, ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರಮಪಟ್ಟು ಕೆಲಸ ಮಾಡುವುದಾಗಿ ಹೇಳಿದ್ದಾರೆ.ಈ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳು, ನಿರ್ದೇಶಕರು, ಬರಹಗಾರರು, ನಿರ್ಮಾಪಕರು ಹಾಗೂ ಕನ್ನಡ ಚಲನಚಿತ್ರೋದ್ಯಮದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ತಮ್ಮ ದೀರ್ಘ ಸಿನಿ ಪ್ರಯಾಣಕ್ಕೆ ಎಲ್ಲರ ಸಹಕಾರ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.“ಮೂರು ದಶಕಗಳ ನಂತರವೂ ಈ ಚಿತ್ರಜಗತ್ತಿನಲ್ಲಿ ನಿಂತಿರುವುದು ಅನಂತ ಕೃತಜ್ಞತೆಯ ವಿಷಯ. ಕನಸುಗಳು, ಅನುಮಾನಗಳು ಮತ್ತು ನಿರೀಕ್ಷೆಗಳೊಂದಿಗೆ ಬಂದ ಒಬ್ಬ ಹುಡುಗನಿಗೆ ಇದು ನಾನು ಊಹಿಸಿದ್ದಕ್ಕಿಂತಲೂ ದೊಡ್ಡ ಅನುಭವವಾಗಿದೆ. ಇದಕ್ಕೆ ಕಾರಣರಾದವರು ಎಲ್ಲರೂ ನೀವು” ಎಂದು ಸುದೀಪ್ ಹೇಳಿದ್ದಾರೆ.ಅಭಿಮಾನಿಗಳನ್ನು ತಮ್ಮ ಶಕ್ತಿ ಮತ್ತು ಪ್ರೇರಣೆಯಾಗಿ ಉಲ್ಲೇಖಿಸಿರುವ ಅವರು, ನಿರ್ದೇಶಕರು ಮತ್ತು ಬರಹಗಾರರು ತಮ್ಮ ಮೇಲೆ ನಂಬಿಕೆ ಇಟ್ಟು ಹೊಸ ಸವಾಲುಗಳಿಗೆ ಪ್ರೇರೇಪಿಸಿದುದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಿರ್ಮಾಪಕರ ಧೈರ್ಯ ಮತ...









