
‘ನಿಮ್ಮನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದು ನಾನೇ. ನೀವು ಯಾವ ವಿದ್ವಾಂಸರು’?: ಸಿದ್ದು ಬಗ್ಗೆ ದೇವೇಗೌಡ ಗರಂ
ಬೆಂಗಳೂರು: “ರಾಷ್ಟ್ರೀಯ ಜನತಾ ದಳ (ಎಸ್) ಪಕ್ಷ ಹಾಗೂ ಎನ್ಡಿಎ ಮೈತ್ರಿ ಅಟಲ್! ಯಾವುದೇ ಸಂದರ್ಭದಲ್ಲೂ ಮೈತ್ರಿಯನ್ನು ಮುರಿಯುವ ಪ್ರಶ್ನೆ ಬರುವುದಿಲ್ಲ” ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಘೋಷಿಸಿದ್ದಾರೆ.ಜೆಡಿಎಸ್ ರಜತ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನಾಯಕತ್ವದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ನಮ್ಮ ಕಾರ್ಯಕರ್ತರು ಇದನ್ನು ಎಂದಿಗೂ ಮರೆಯಬಾರದು' ಎಂದರು.'ಉತ್ತರದಲ್ಲಿ ಜೆಡಿ(ಯು), ದಕ್ಷಿಣದಲ್ಲಿ ಜೆಡಿ(ಎಸ್)' ಎಂದು ಘೋಷಿಸಿದ ದೇವೇಗೌಡ, 'ಅಲ್ಲಿ ನಿತೀಶ್ ಕುಮಾರ್ ಇದ್ದಾರೆ, ಇಲ್ಲಿ ಕುಮಾರಸ್ವಾಮಿ ಇದ್ದಾರೆ' ಎಂದು ಪಕ್ಷದ ಬಲವನ್ನು ಹಿರಿಮೆಗೇರಿಸಿದರು.ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿಸಿದ್ದರಾಮಯ್ಯ ಅವರು “ಜೆಡಿಎಸ್ನಲ್ಲಿ ಇದ್ದಿದ್ದರೆ ನಾನು ಮುಖ್ಯಮಂತ್ರಿಯಾಗಲಿಲ್ಲ” ಎಂಬ ಹೇಳಿಕೆಯನ್ನು ಕಟುವಾಗಿ ತಳ್ಳಿ ಹಾಕಿದ ಗೌಡರು, “ನಾನು ಸ್ವತಃ ಅವರನ್ನು ಮುಖ್ಯಮಂತ್ರಿ ಮಾಡಲು ಸಿದ್ಧನಾಗಿದ್ದೆ. ಸೋನಿಯಾ ಗಾಂಧಿಯ ...







