
‘ವಾಲ್ಮೀಕಿ ರಾಮಾಯಣ’; ಮೊದಲ ಪೋಸ್ಟರ್ ಅನಾವರಣ
ಮುಂಬೈ: ಮುಂಬರುವ ‘ವಾಲ್ಮೀಕಿ ರಾಮಾಯಣ’ ಚಿತ್ರದ ಮೊದಲ ಪೋಸ್ಟರ್ ಗುರುವಾರ ಅನಾವರಣಗೊಂಡಿದ್ದು, ಭಕ್ತಿ, ಶುದ್ಧತೆ ಮತ್ತು ಗೌರವದ ಮೌಲ್ಯಗಳನ್ನು ಪ್ರತಿಬಿಂಬಿಸುವ ದೃಶ್ಯಗಳು ಗಮನ ಸೆಳೆದಿವೆ. ಭಾರತೀಯರ ಪವಿತ್ರ ಮಹಾಕಾವ್ಯವನ್ನು ಆಧರಿಸಿದ ಈ ಚಿತ್ರವನ್ನು ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅನುಭವವಾಗಿ ರೂಪಿಸಲಾಗುತ್ತಿದೆ.ಈ ಚಿತ್ರವನ್ನು ಭಾವನಾ ತಲ್ವಾರ್ ನಿರ್ದೇಶಿಸುತ್ತಿದ್ದು, ಮಹಾಕಾವ್ಯವನ್ನು ಅಧಿಕೃತತೆ ಮತ್ತು ಭಾವನಾತ್ಮಕ ಆಳದೊಂದಿಗೆ ಪ್ರಸ್ತುತಪಡಿಸುವ ಉದ್ದೇಶ ಹೊಂದಿದೆ. ಪ್ರಸಿದ್ಧ ನಿರ್ಮಾಣ ವಿನ್ಯಾಸಕ ಸಾಬು ಸಿರಿಲ್ ದೃಶ್ಯ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ.ಚಿತ್ರಕಥೆಯನ್ನು ಖ್ಯಾತ ಲೇಖಕ ಆನಂದ್ ನೀಲಕಂಠನ್ ಮೂಲ ‘ವಾಲ್ಮೀಕಿ ರಾಮಾಯಣ’ ಆಧರಿಸಿ ರಚಿಸಿದ್ದಾರೆ. ಹಿರಿಯ ಛಾಯಾಗ್ರಾಹಕ ಬಿನೋದ್ ಪ್ರಧಾನ್ ತಮ್ಮ ವಿಶಿಷ್ಟ ದೃಶ್ಯ ಶೈಲಿಯನ್ನು ನೀಡಲಿದ್ದಾರೆ. ಜೊತೆಗೆ, ಆಸ್ಕರ್ ಪ್ರಶಸ್ತಿ ವಿಜೇತ ಧ್ವನಿ ವಿನ್ಯಾಸಕ ರೆಸುಲ್ ಪೂಕುಟ್ಟಿ ಧ್ವನಿ ವಿನ್ಯಾಸವನ್ನು ನೋಡಿಕೊಳ್ಳುತ್ತಿದ್ದಾರೆ.ಚಿತ್ರ ನಿರ್ಮಾಣಕ್ಕೆ ಮತ್ತಷ್ಟು ಬಲ ತುಂಬಲು, ಚಲನಚಿತ್ರ ನಿರ್ಮಾಪಕ ಮತ್ತು ವಿದ್ವಾಂಸ ...








