Sunday, August 9

ದೇಶ

ಹೆಚ್ಚಿನ ಆಲ್ಕೋಹಾಲ್ ಇರುವ ಔಷಧಗಳ ಮಾರಾಟಕ್ಕೆ ಕೇಂದ್ರದ ಅಂಕುಶ

ಹೆಚ್ಚಿನ ಆಲ್ಕೋಹಾಲ್ ಇರುವ ಔಷಧಗಳ ಮಾರಾಟಕ್ಕೆ ಕೇಂದ್ರದ ಅಂಕುಶ

ದೇಶ, ಪ್ರಮುಖ ಸುದ್ದಿ
ನವದೆಹಲಿ: ಹೆಚ್ಚಿನ ಪ್ರಮಾಣದ ಈಥೈಲ್ ಆಲ್ಕೋಹಾಲ್ ಹೊಂದಿರುವ ಔಷಧೀಯ ಸೂತ್ರೀಕರಣಗಳ ದುರುಪಯೋಗ ತಡೆಗಟ್ಟಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 1945ರ ಔಷಧ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಹೊಸ ನಿಯಮದಂತೆ, 30 ಮಿಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ 12% ಅಥವಾ ಅದಕ್ಕಿಂತ ಹೆಚ್ಚು ಈಥೈಲ್ ಆಲ್ಕೋಹಾಲ್ (v/v) ಹೊಂದಿರುವ ಔಷಧೀಯ ಉತ್ಪನ್ನಗಳಿಗೆ ಇನ್ನು ಮುಂದೆ ವೇಳಾಪಟ್ಟಿ-K ಅಡಿಯಲ್ಲಿ ಪರವಾನಗಿ ವಿನಾಯಿತಿ ಇರುವುದಿಲ್ಲ. ಇಂತಹ ಉತ್ಪನ್ನಗಳ ತಯಾರಕರು ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ-1940ರಡಿ ಕಡ್ಡಾಯವಾಗಿ ಪರವಾನಗಿ ಪಡೆಯಬೇಕಾಗುತ್ತದೆ. ಏಲಕ್ಕಿ, ಶುಂಠಿ ಸೇರಿದಂತೆ ಕೆಲವು ಟಿಂಕ್ಚರ್‌ಗಳಲ್ಲಿ 80–90%ರವರೆಗೆ ಆಲ್ಕೋಹಾಲ್ ಇರುವುದರಿಂದ ಅವುಗಳನ್ನು ಮಾದಕ ಉದ್ದೇಶಕ್ಕೆ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರ ತಿಳಿಸಿದೆ. ಹಲವು ರಾಜ್ಯಗಳ ಕಳವಳದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ಈ ಉತ್ಪನ್ನಗಳನ್ನು ಈಗ ವೇಳಾಪಟ್ಟಿ-H1 ಅಡಿಯಲ್ಲಿ ಸೇರಿಸಲಾಗಿದ್ದು, ನೋಂದಾಯಿತ ವೈದ್ಯರ ಪ್ರಿಸ್ಕ್ರಿಪ್ಷನ್ ಇದ್ದರೆ ಮಾತ್ರ ಮಾರಾಟ ಮಾಡಬಹುದು. ಜೊತೆಗೆ ಔಷಧ ಮಳಿಗೆಗ...
ಶಾಲಾ ಶಿಕ್ಷಣ ಕಾರ್ಯಕ್ಷಮತೆ; ರಾಜ್ಯ-ಜಿಲ್ಲೆಗಳ ಶ್ರೇಣೀಕರಣ ಪ್ರಕಟಿಸಿದ ಕೇಂದ್ರ

ಶಾಲಾ ಶಿಕ್ಷಣ ಕಾರ್ಯಕ್ಷಮತೆ; ರಾಜ್ಯ-ಜಿಲ್ಲೆಗಳ ಶ್ರೇಣೀಕರಣ ಪ್ರಕಟಿಸಿದ ಕೇಂದ್ರ

ದೇಶ, ಪ್ರಮುಖ ಸುದ್ದಿ
ನವದೆಹಲಿ: ಕೇಂದ್ರ ಶಿಕ್ಷಣ ಸಚಿವಾಲಯವು 2025–26ನೇ ಶೈಕ್ಷಣಿಕ ವರ್ಷದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯಕ್ಷಮತೆ ಶ್ರೇಣೀಕರಣ ಸೂಚ್ಯಂಕ (PGI-S 2.0) ಹಾಗೂ ಜಿಲ್ಲೆಗಳ ಕಾರ್ಯಕ್ಷಮತೆ ಶ್ರೇಣೀಕರಣ ಸೂಚ್ಯಂಕ (PGI-D) ವರದಿಗಳನ್ನು ಬಿಡುಗಡೆ ಮಾಡಿದೆ. ಈ ವರದಿಗಳು ದೇಶಾದ್ಯಂತ ಶಾಲಾ ಶಿಕ್ಷಣದ ಗುಣಮಟ್ಟ ಮತ್ತು ಆಡಳಿತದ ಸಮಗ್ರ ಮೌಲ್ಯಮಾಪನವನ್ನು ಒದಗಿಸುತ್ತವೆ. ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ 14.67 ಲಕ್ಷಕ್ಕೂ ಅಧಿಕ ಶಾಲೆಗಳು, 1.03 ಕೋಟಿ ಶಿಕ್ಷಕರು ಮತ್ತು ಸುಮಾರು 24.72 ಕೋಟಿ ವಿದ್ಯಾರ್ಥಿಗಳಿದ್ದು, ಇದು ವಿಶ್ವದ ಅತಿದೊಡ್ಡ ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದಾಗಿದೆ ಎಂದು ಸಚಿವಾಲಯ ತಿಳಿಸಿದೆ. PGI-S ಚೌಕಟ್ಟಿನಲ್ಲಿ ಒಟ್ಟು 1,000 ಅಂಕಗಳ ತೂಕ ಹೊಂದಿರುವ 70 ಸೂಚಕಗಳ ಆಧಾರದ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲಾಗಿದೆ. ಕಲಿಕೆಯ ಫಲಿತಾಂಶ, ಶಿಕ್ಷಣದ ಗುಣಮಟ್ಟ, ಪ್ರವೇಶ, ಮೂಲಸೌಕರ್ಯ, ಸಮಾನತೆ, ಆಡಳಿತ ಹಾಗೂ ಶಿಕ್ಷಕರ ಶಿಕ್ಷಣ ಮತ್ತು ತರಬೇತಿ ಸೇರಿದಂತೆ ಆರು ಪ್ರಮುಖ ಕ್ಷೇತ್ರಗಳನ್ನು ಪರಿಗಣಿಸಲಾಗಿದೆ.ಈ ಶ್ರೇ...
ಬೆಂಗಳೂರು ಕ್ವಾರಿ ದುರಂತ: ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ NHRC

ಬೆಂಗಳೂರು ಕ್ವಾರಿ ದುರಂತ: ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ NHRC

ದೇಶ, ಪ್ರಮುಖ ಸುದ್ದಿ
ನವದೆಹಲಿ: ಬೆಂಗಳೂರು ಹೊರವಲಯದಲ್ಲಿ ಜುಲೈ 2ರಂದು ಕ್ವಾರಿಯಲ್ಲಿ ಬೃಹತ್ ಗ್ರಾನೈಟ್ ಬಂಡೆ ಕುಸಿದು ಏಳು ವಲಸೆ ಕಾರ್ಮಿಕರು ಸಾವನ್ನಪ್ಪಿ, ಐವರು ಗಾಯಗೊಂಡ ಪ್ರಕರಣವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಂಡಿದೆ. ಭಾನುವಾರ ಪ್ರಕಟಿಸಿದ ಹೇಳಿಕೆಯಲ್ಲಿ, ಕ್ವಾರಿ ಮಾಲೀಕರ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ ಎಂಬ ವರದಿಗಳು ನಿಜವಾಗಿದ್ದರೆ, ಅದು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಲಿದೆ ಎಂದು ಆಯೋಗ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿರುವ NHRC, ಎರಡು ವಾರಗಳೊಳಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದೆ. ಆಯೋಗದ ಪ್ರಕಾರ, ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬೃಹತ್ ಗ್ರಾನೈಟ್ ಬಂಡೆ ಕಾರ್ಮಿಕರ ಮೇಲೆ ಕುಸಿದು ಏಳು ಮಂದಿ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಅಪಘಾತ ನಡೆದ ಪ್ರದೇಶದಲ್ಲಿ ಎರಡು ಕಲ್ಲು ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿದ್ದವು ಎನ್ನಲಾಗಿದೆ.ರಾಜ್ಯ ಸರ್ಕಾರ ಸಲ್ಲಿಸುವ ವರದಿಯಲ್ಲಿ ಘಟನೆಯ ತನಿಖೆಯ ಪ್ರಗತಿ, ಅಪಘಾತಕ್ಕೆ ಕಾರಣಗಳು ಹಾಗೂ ಜವಾಬ್...
Tamil Nadu CM Vijay Urges PM Modi to Reconsider NFSA Amendment

Tamil Nadu CM Vijay Urges PM Modi to Reconsider NFSA Amendment

ದೇಶ, ಪ್ರಮುಖ ಸುದ್ದಿ
Chennai: Tamil Nadu Chief Minister C. Joseph Vijay has written to Prime Minister Narendra Modi, urging the Centre to withdraw or reconsider the proposed amendments to the National Food Security Act (NFSA), 2013, stating that they could adversely affect lakhs of poor families in the state. In his letter, Vijay expressed concern that the proposed changes would reduce the monthly food grain entitlement of nearly 70 lakh beneficiaries covered under the Antyodaya Anna Yojana (AAY) in Tamil Nadu. Under the existing system, each AAY family receives 35 kg of food grains per month. However, the proposed amendment seeks to provide 7 kg of food grains per person, subject to a maximum of 35 kg per household. Vijay argued that the change would disproportionately affect states like Tamil Nadu, where man...
ಭಾರತದ ಇಂಧನ ಅಂಕಿಅಂಶ ಬಲಪಡಿಸಲು MoSPI ಸಮಿತಿ ಸುಧಾರಣಾ ಶಿಫಾರಸು

ಭಾರತದ ಇಂಧನ ಅಂಕಿಅಂಶ ಬಲಪಡಿಸಲು MoSPI ಸಮಿತಿ ಸುಧಾರಣಾ ಶಿಫಾರಸು

ದೇಶ, ಪ್ರಮುಖ ಸುದ್ದಿ
ನವದೆಹಲಿ: ಭಾರತದ ಇಂಧನ ದತ್ತಾಂಶ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ರಚಿಸಿದ್ದ ತಜ್ಞರ ಸಮಿತಿಯು ತನ್ನ ವರದಿ ಸಲ್ಲಿಸಿದ್ದು, ಇಂಧನ ಅಂಕಿಅಂಶಗಳ ಗುಣಮಟ್ಟ, ಏಕರೂಪತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಹಲವು ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಐಐಟಿ ದೆಹಲಿಯ ನಿರ್ದೇಶಕ ಡಾ. ರಂಗನ್ ಬ್ಯಾನರ್ಜಿ ನೇತೃತ್ವದ ಸಮಿತಿಯು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಇಂಧನ ದತ್ತಾಂಶ ಸಂಗ್ರಹಣೆ ಹಾಗೂ ವರ್ಗೀಕರಣ ವ್ಯವಸ್ಥೆಯನ್ನು ರೂಪಿಸುವಂತೆ ಸಲಹೆ ನೀಡಿದೆ. ಸಚಿವಾಲಯಗಳ ನಡುವೆ ಏಕರೂಪದ ಇಂಧನ ಪರಿವರ್ತನೆ ಮಾನದಂಡಗಳನ್ನು ಅಳವಡಿಸಿಕೊಳ್ಳುವಂತೆಯೂ ಶಿಫಾರಸು ಮಾಡಿದೆ.ಕಲ್ಲಿದ್ದಲು ಬಳಕೆ, ಜೈವಿಕ ಇಂಧನ, ಕ್ಯಾಪ್ಟಿವ್ ಹಾಗೂ ಆಫ್-ಗ್ರಿಡ್ ವಿದ್ಯುತ್ ಉತ್ಪಾದನೆ ಮತ್ತು ವಿದ್ಯುತ್ ವಾಹನಗಳ ವಿದ್ಯುತ್ ಬಳಕೆಯಂತಹ ಕ್ಷೇತ್ರಗಳಲ್ಲಿ ಸಮಗ್ರ ದತ್ತಾಂಶ ಸಂಗ್ರಹಿಸಲು ಹೊಸ ವಿಧಾನಗಳನ್ನು ಅನುಸರಿಸುವಂತೆ ವರದಿ ಸೂಚಿಸಿದೆ. ವಾರ್ಷಿಕ ಕೈಗಾರಿಕಾ ಸಮೀಕ್ಷೆ (ASI) ದತ್ತಾಂಶವನ್ನು ಬಳಸಿ ಉದ್ಯಮವಾರು ವಿದ್ಯುತ್ ಬಳಕೆಯನ್ನು ಅಂದಾಜು ಮಾಡುವ...
ಆಹಾರ ಭದ್ರತಾ ಕಾಯ್ದೆ ತಿದ್ದುಪಡಿಗೆ ತಮಿಳುನಾಡು ಸಿಎಂ ವಿಜಯ್ ಆಗ್ರಹ, ಪ್ರಧಾನಿಗೆ ಪತ್ರ

ಆಹಾರ ಭದ್ರತಾ ಕಾಯ್ದೆ ತಿದ್ದುಪಡಿಗೆ ತಮಿಳುನಾಡು ಸಿಎಂ ವಿಜಯ್ ಆಗ್ರಹ, ಪ್ರಧಾನಿಗೆ ಪತ್ರ

ದೇಶ, ಪ್ರಮುಖ ಸುದ್ದಿ
ಚೆನ್ನೈ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA)-2013ಕ್ಕೆ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಬೇಕು ಅಥವಾ ಮರುಪರಿಶೀಲಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಪ್ರಸ್ತಾವಿತ ತಿದ್ದುಪಡಿಯಿಂದ ರಾಜ್ಯದ ಸುಮಾರು 70 ಲಕ್ಷ ಬಡ ಫಲಾನುಭವಿಗಳ ಆಹಾರ ಧಾನ್ಯ ಹಕ್ಕು ಕಡಿಮೆಯಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಅಂತ್ಯೋದಯ ಅನ್ನ ಯೋಜನೆ (AAY) ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ 35 ಕೆ.ಜಿ. ಆಹಾರ ಧಾನ್ಯ ನೀಡಲಾಗುತ್ತಿದೆ. ಆದರೆ ಹೊಸ ತಿದ್ದುಪಡಿ ಪ್ರಕಾರ ಪ್ರತಿ ವ್ಯಕ್ತಿಗೆ 7 ಕೆ.ಜಿ. ಆಹಾರ ಧಾನ್ಯ ನೀಡಲಾಗುತ್ತಿದ್ದು, ಗರಿಷ್ಠ ಮಿತಿ 35 ಕೆ.ಜಿಯಾಗಿರಲಿದೆ. ಇದರಿಂದ ಸಣ್ಣ ಕುಟುಂಬಗಳನ್ನು ಹೊಂದಿರುವ ತಮಿಳುನಾಡಿನಂತಹ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ವಿಜಯ್ ಹೇಳಿದ್ದಾರೆ.ರಾಜ್ಯದಲ್ಲಿ 18.64 ಲಕ್ಷ AAY ಪಡಿತರ ಚೀಟಿಗಳಿದ್ದು, 69.27 ಲಕ್ಷ ಫಲಾನುಭವಿಗಳು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ತಿದ್ದುಪಡಿ ಜಾರಿಯಾದರೆ ರಾಜ...
ಧಾರ್ಮಿಕ ಕಿರುಕುಳದಿಂದ ಭಾರತಕ್ಕೆ ಬಂದಿರುವ ಅರ್ಹ ನಿರಾಶ್ರಿತರಿಗೆ ಶೀಘ್ರವೇ ಪೌರತ್ವ; ಅಮಿತ್ ಶಾ

ಧಾರ್ಮಿಕ ಕಿರುಕುಳದಿಂದ ಭಾರತಕ್ಕೆ ಬಂದಿರುವ ಅರ್ಹ ನಿರಾಶ್ರಿತರಿಗೆ ಶೀಘ್ರವೇ ಪೌರತ್ವ; ಅಮಿತ್ ಶಾ

ದೇಶ, ಪ್ರಮುಖ ಸುದ್ದಿ
ಕೋಲ್ಕತ್ತಾ: ಪೌರತ್ವ ತಿದ್ದುಪಡಿ ಕಾಯ್ದೆ (CAA) ಅಡಿಯಲ್ಲಿ ಧಾರ್ಮಿಕ ಕಿರುಕುಳದಿಂದ ಭಾರತಕ್ಕೆ ಬಂದಿರುವ ಅರ್ಹ ನಿರಾಶ್ರಿತರಿಗೆ ಪೌರತ್ವ ನೀಡುವ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆರೆಯ ದೇಶಗಳಲ್ಲಿ ಧಾರ್ಮಿಕ ಹಿಂಸೆ ಅನುಭವಿಸಿ ಭಾರತಕ್ಕೆ ಬಂದ ಹಿಂದೂ ಹಾಗೂ ಇತರ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಸಿಎಎ ಮೂಲಕ ಪೌರತ್ವ ನೀಡಲಾಗುವುದು ಎಂದು ಭರವಸೆ ನೀಡಿದರು. 1950ರ ಲಿಯಾಕತ್–ನೆಹರು ಒಪ್ಪಂದವು ಪಾಕಿಸ್ತಾನ ಹಾಗೂ ಪೂರ್ವ ಪಾಕಿಸ್ತಾನದಲ್ಲಿದ್ದ (ಈಗಿನ ಬಾಂಗ್ಲಾದೇಶ) ಹಿಂದೂ ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ಸಮರ್ಪಕವಾಗಿ ರಕ್ಷಿಸಲು ವಿಫಲವಾಗಿದೆ ಎಂದು ಶ್ಯಾಮ ಪ್ರಸಾದ್ ಮುಖರ್ಜಿ ಅಂದೇ ಪ್ರತಿಪಾದಿಸಿದ್ದರು ಎಂದು ಶಾ ಹೇಳಿದರು.ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಕಾರ್ಯವೈಖರಿಯನ್ನೂ ಶ್ಲಾಘಿಸಿದ ಅಮಿತ್ ಶಾ, ಸಮಾಜವಿರೋಧಿ ಹಾಗೂ ಭ್ರಷ್ಟ ಅಂಶಗಳ ವಿರುದ...
ಮುಂಬೈನಲ್ಲಿ ಮಳೆಯ ಆರ್ಭಟ; ಕಟ್ಟಡ ಕುಸಿದು 6 ಸಾವು, ಜನಜೀವನ ಅಸ್ತವ್ಯಸ್ತ

ಮುಂಬೈನಲ್ಲಿ ಮಳೆಯ ಆರ್ಭಟ; ಕಟ್ಟಡ ಕುಸಿದು 6 ಸಾವು, ಜನಜೀವನ ಅಸ್ತವ್ಯಸ್ತ

ದೇಶ, ಪ್ರಮುಖ ಸುದ್ದಿ
ಮುಂಬೈ: ಧಾರಾಕಾರ ಮಳೆಯಿಂದ ಮಹಾರಾಷ್ಟ್ರದ ರಾಜಧಾನಿ ಮುಂಬೈ ತತ್ತರಿಸಿದೆ. ಭಾನುವಾರ ಮುಂಬೈನ ಹಲವು ಭಾಗಗಳಲ್ಲಿ 200 ರಿಂದ 300 ಮಿ.ಮೀ.ವರೆಗೆ ಮಳೆಯಾಗಿದೆ ಎಂದು ಅಂದಾಜಿಸಲಾಗಿದೆ. ಸೋಮವಾರವೂ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಿರಂತರ ಮಳೆ ಸಂದರ್ಭದಲ್ಲಿ ಮನ್ಖುರ್ಡ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಆರು ಮಂದಿ ಮೃತಪಟ್ಟಿದ್ದಾರೆ. ಓರ್ವ ಗಾಯಗೊಂಡಿದ್ದು, ಮತ್ತೊಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್‌, ಅಗ್ನಿಶಾಮಕ ದಳ, ಬಿಎಂಸಿ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಭಾನುವಾರ ರಾತ್ರಿ ಮನ್ಖುರ್ಡ್‌ನ ಜನತಾ ನಗರದಲ್ಲಿ ಹನುಮಾನ್ ಮಂದಿರದ ಸಮೀಪ ಕಟ್ಟಡದ ಒಂದು ಭಾಗ ಏಕಾಏಕಿ ಕುಸಿದಿದೆ. ಅವಶೇಷಗಳಡಿಯಿಂದ ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಈ ನಡುವೆ, ಮಳೆಯ ಅಬ್ಬರದಿಂದ ನಗರದಲ್ಲಿ ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರ ಹಾಗೂ ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಪ್ರದೇಶಗಳಲ್ಲಿ ಮರಗಳು ಧ...
ಮುಂಬೈ ಮಳೆ ಎಫೆಕ್ಟ್: ವಿಶ್ವವಿದ್ಯಾಲಯದ ಸೋಮವಾರದ ಎಲ್ಲಾ ಪರೀಕ್ಷೆಗಳು ಮುಂದೂಡಿಕೆ

ಮುಂಬೈ ಮಳೆ ಎಫೆಕ್ಟ್: ವಿಶ್ವವಿದ್ಯಾಲಯದ ಸೋಮವಾರದ ಎಲ್ಲಾ ಪರೀಕ್ಷೆಗಳು ಮುಂದೂಡಿಕೆ

ದೇಶ, ಪ್ರಮುಖ ಸುದ್ದಿ
ಮುಂಬೈ: ಧಾರಾಕಾರ ಮಳೆ ಮತ್ತು ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಭಾರೀ ಮಳೆ ಎಚ್ಚರಿಕೆಯ ಹಿನ್ನೆಲೆಯಲ್ಲಿ ಮುಂಬೈ ವಿಶ್ವವಿದ್ಯಾಲಯವು ಸೋಮವಾರ ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ. ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ. ನಿರಂತರ ಮಳೆ ಮತ್ತು ಹವಾಮಾನ ವೈಪರೀತ್ಯದಿಂದ ಸಂಚಾರ ಹಾಗೂ ಪರೀಕ್ಷೆಗಳ ಸುಗಮ ನಿರ್ವಹಣೆಗೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.ಮುಂದೂಡಲಾದ ಪರೀಕ್ಷೆಗಳ ಹೊಸ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಪರಿಷ್ಕೃತ ವೇಳಾಪಟ್ಟಿಗಾಗಿ ವಿದ್ಯಾರ್ಥಿಗಳು ಮುಂಬೈ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಪರಿಶೀಲಿಸದ ಮಾಹಿತಿಯನ್ನು ನಂಬದಂತೆ ವಿಶ್ವವಿದ್ಯಾಲಯ ಮನವಿ ಮಾಡಿದೆ....
ಆಂಧ್ರ, ತೆಲಂಗಾಣದಲ್ಲಿ ಭೀಕರ ಅಪಘಾತಗಳು; ಒಟ್ಟು 8 ಮಂದಿ ದುರ್ಮರಣ

ಆಂಧ್ರ, ತೆಲಂಗಾಣದಲ್ಲಿ ಭೀಕರ ಅಪಘಾತಗಳು; ಒಟ್ಟು 8 ಮಂದಿ ದುರ್ಮರಣ

ದೇಶ, ಪ್ರಮುಖ ಸುದ್ದಿ
ಅಮರಾವತಿ: ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು ಎಂಟು ಮಂದಿ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಎಲೂರು ಜಿಲ್ಲೆಯ ಉಂಗುತೂರ್ ಮಂಡಲದ ಚೆಬ್ರೋಲ್ ಸಮೀಪ ಶನಿವಾರ ತಡರಾತ್ರಿ ಚೆರ್ಲಪಲ್ಲಿ–ಶಾಲಿಮಾರ್ ವಿಶೇಷ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಮೃತದೇಹಗಳು ಗುರುತಿಸಲಾಗದಷ್ಟು ನಜ್ಜುಗುಜ್ಜಾಗಿದ್ದು, ತಾಡೇಪಲ್ಲಿಗುಡೆಮ್ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಸ್ಥಳಕ್ಕೆ ಭೇಟಿ ನೀಡಿ ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಮೃತಪಟ್ಟವರು ಒಂದೇ ಕುಟುಂಬದವರಾಗಿರಬಹುದೆಂದು ಶಂಕಿಸಲಾಗಿದೆ. ಘಟನಾ ಸ್ಥಳದಲ್ಲಿ ದೊರೆತ ಎಟಿಎಂ ಕಾರ್ಡ್, ಬೈಕ್ ಪಾರ್ಕಿಂಗ್ ರಶೀದಿ ಹಾಗೂ ಮೊಬೈಲ್ ಫೋನ್‌ಗಳ ಆಧಾರದ ಮೇಲೆ ಮೃತರ ಗುರುತು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಆತ್ಮಹತ್ಯೆ ಶಂಕೆಯೂ ವ್ಯಕ್ತವಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.ಇದೇ ವೇಳೆ, ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪೆದ್ದಕಪರ್ತಿ ಗ್ರಾಮದ ಬಳಿ ಭಾನುವಾರ...