Sunday, August 9

ದೇಶ

ಎರಡು ವರ್ಷಗಳಲ್ಲಿ 500 ನಗರಗಳಿಗೆ ಭಾರತ್ ಟ್ಯಾಕ್ಸಿ ವಿಸ್ತರಣೆ: ಅಮಿತ್ ಶಾ

ದೇಶ, ಪ್ರಮುಖ ಸುದ್ದಿ
ಗಾಂಧಿನಗರ: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಶುಕ್ರವಾರ ಗುಜರಾತ್‌ನಲ್ಲಿ ಸಹಕಾರಿ ಆಧಾರಿತ ಮೊಬಿಲಿಟಿ ವೇದಿಕೆ ‘ಭಾರತ್ ಟ್ಯಾಕ್ಸಿ’ಗೆ ಚಾಲನೆ ನೀಡಿದರು. ಈ ಸೇವೆ ಅಹಮದಾಬಾದ್, ಸೂರತ್, ರಾಜ್‌ಕೋಟ್ ಸೇರಿದಂತೆ ಪ್ರಮುಖ ನಗರಗಳಲ್ಲಿ ದ್ವಿಚಕ್ರ ವಾಹನ, ಆಟೋರಿಕ್ಷಾ ಮತ್ತು ಕ್ಯಾಬ್ ಸೇವೆಗಳನ್ನು ಒದಗಿಸಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಮುಂದಿನ ಎರಡು ವರ್ಷಗಳಲ್ಲಿ ಭಾರತ್ ಟ್ಯಾಕ್ಸಿ ದೇಶದ 500ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಿಗೆ ವಿಸ್ತರಿಸಲಿದೆ ಎಂದು ತಿಳಿಸಿದರು. ಜುಲೈ 31ರೊಳಗೆ ಏಳು ಪ್ರಮುಖ ನಗರಗಳಲ್ಲಿ ಸೇವೆ ಆರಂಭವಾಗಲಿದೆ ಎಂದರು. ‘ಸಾರಥಿಗಳು’ ಎಂದು ಕರೆಯಲ್ಪಡುವ ಚಾಲಕರಿಗೆ ಮಾಲೀಕತ್ವ, ಭದ್ರತೆ, ಗೌರವ ಹಾಗೂ ಉತ್ತಮ ಆದಾಯ ಒದಗಿಸುವ ಉದ್ದೇಶದಿಂದ ಈ ವೇದಿಕೆಯನ್ನು ರೂಪಿಸಲಾಗಿದೆ ಎಂದು ಶಾ ಹೇಳಿದರು. ಈಗಾಗಲೇ 7 ಲಕ್ಷಕ್ಕೂ ಹೆಚ್ಚು ಚಾಲಕರು ಈ ಯೋಜನೆಗೆ ಸೇರಿದ್ದು, ಸುಮಾರು 37 ಲಕ್ಷ ಗ್ರಾಹಕರು ಸೇವೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು. ಸಹಕಾರಿ ಮಾದರಿಯ ವಿಶೇಷತೆಯನ್ನು ಉಲ್ಲೇಖಿಸಿದ ಅವರು, ಚಾಲಕರು ಕೇವಲ ಸೇವೆ ನೀಡುವವರಲ್ಲ, ವೇದಿಕ...

ವಿವಿಧ ಹುದ್ದೆಗಳ ನೇರ ನೇಮಕಾತಿಗೆ UPSC ಅರ್ಜಿ ಆಹ್ವಾನ

ದೇಶ, ಪ್ರಮುಖ ಸುದ್ದಿ
ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ನಡೆಸಲು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಯುಪಿಎಸ್‌ಸಿ ಬಿಡುಗಡೆ ಮಾಡಿರುವ ಅಧಿಸೂಚನೆ ಪ್ರಕಾರ, ಜಾಹೀರಾತು ಸಂಖ್ಯೆ 07/2026ರಡಿ ಖಾಲಿ ಹುದ್ದೆಗಳ ವಿವರ, ಅರ್ಹತಾ ಮಾನದಂಡಗಳು ಹಾಗೂ ಅಭ್ಯರ್ಥಿಗಳಿಗೆ ಅಗತ್ಯ ಸೂಚನೆಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 27, 2026ರಿಂದ ಜುಲೈ 17, 2026ರವರೆಗೆ ಆನ್‌ಲೈನ್ ನೇಮಕಾತಿ ಅರ್ಜಿ (ORA) ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಸಂಪೂರ್ಣ ಜಾಹೀರಾತನ್ನು ಗಮನವಿಟ್ಟು ಓದಿ, ಅರ್ಹತೆ ಹಾಗೂ ಇತರ ನಿಯಮಗಳನ್ನು ಪರಿಶೀಲಿಸಿಕೊಳ್ಳುವಂತೆ ಯುಪಿಎಸ್‌ಸಿ ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು UPSC ಅಧಿಕೃತ ನೇಮಕಾತಿ ಪೋರ್ಟಲ್‌ಗೆ ಭೇಟಿ ನೀಡಿ ಜಾಹೀರಾತು ಸಂಖ್ಯೆ 07/2026ರ ವಿವರಗಳನ್ನು ಪರಿಶೀಲಿಸಬಹುದು....
ಭಾರತ–ಯುಕೆ ವ್ಯಾಪಾರ ಒಪ್ಪಂದ: ಉದ್ಯಮಗಳಿಗೆ ನೆರವಾಗಲು ದೇಶಾದ್ಯಂತ 1,000 ಸಲಹೆಗಾರರ ನಿಯೋಜನೆಗೆ ಕೇಂದ್ರ ನಿರ್ಧಾರ

ಭಾರತ–ಯುಕೆ ವ್ಯಾಪಾರ ಒಪ್ಪಂದ: ಉದ್ಯಮಗಳಿಗೆ ನೆರವಾಗಲು ದೇಶಾದ್ಯಂತ 1,000 ಸಲಹೆಗಾರರ ನಿಯೋಜನೆಗೆ ಕೇಂದ್ರ ನಿರ್ಧಾರ

ದೇಶ, ಪ್ರಮುಖ ಸುದ್ದಿ
ಲಂಡನ್: ಭಾರತ–ಯುನೈಟೆಡ್ ಕಿಂಗ್‌ಡಮ್ (ಯುಕೆ) ನಡುವಿನ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA) ಜುಲೈ 15ರಿಂದ ಜಾರಿಗೆ ಬರಲಿದ್ದು, ಇದರ ಲಾಭವನ್ನು ಉದ್ಯಮಗಳು ಪರಿಣಾಮಕಾರಿಯಾಗಿ ಪಡೆದುಕೊಳ್ಳಲು ದೇಶಾದ್ಯಂತ 1,000 ಸಲಹಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಘೋಷಿಸಿದ್ದಾರೆ. ಲಂಡನ್‌ನಲ್ಲಿ ನಡೆದ 10ನೇ ವಾರ್ಷಿಕ ಯುಕೆ–ಭಾರತ ವಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಫ್ತುದಾರರು ಮತ್ತು ಉದ್ಯಮಿಗಳಿಗೆ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲು ಸರ್ಕಾರ ತನ್ನ ವ್ಯಾಪಾರ ಪೋರ್ಟಲ್‌ನ್ನೂ ನವೀಕರಿಸಲಿದೆ ಎಂದು ತಿಳಿಸಿದರು. ಸಿಇಟಿಎ ಒಪ್ಪಂದವನ್ನು ಭಾರತದ ಅತ್ಯಂತ ಸಮಗ್ರ ಮುಕ್ತ ವ್ಯಾಪಾರ ಒಪ್ಪಂದವೆಂದು ಬಣ್ಣಿಸಿದ ಗೋಯಲ್, ಇದರಿಂದ ಭಾರತ–ಯುಕೆ ನಡುವಿನ ದ್ವಿಪಕ್ಷೀಯ ವ್ಯಾಪಾರವು ವರ್ಷಕ್ಕೆ 25.5 ಬಿಲಿಯನ್ ಪೌಂಡ್‌ಗಳಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಹೇಳಿದರು. ಭಾರತ–ಯುಕೆ ಸಂಬಂಧಗಳು ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI), ನಿರ್ಣಾಯಕ ಖನಿಜಗಳು, ರಕ್ಷಣಾ ಕ್ಷೇತ್ರ ಹಾಗೂ ಶು...
ಅಳಿವಿನಂಚಿನ ಪ್ರಭೇದಗಳ ಸಂರಕ್ಷಣೆಗೆ ಹೊಸ SOP ಬಿಡುಗಡೆ: ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ ಕ್ರಮ

ಅಳಿವಿನಂಚಿನ ಪ್ರಭೇದಗಳ ಸಂರಕ್ಷಣೆಗೆ ಹೊಸ SOP ಬಿಡುಗಡೆ: ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ ಕ್ರಮ

ದೇಶ, ಪ್ರಮುಖ ಸುದ್ದಿ
ನವದೆಹಲಿ: ದೇಶದ ಜೀವವೈವಿಧ್ಯ ಸಂರಕ್ಷಣೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ (NBA) ಅಳಿವಿನಂಚಿನಲ್ಲಿರುವ ಹಾಗೂ ಅಪಾಯದಲ್ಲಿರುವ ಪ್ರಭೇದಗಳ ಗುರುತಿಸುವಿಕೆ ಮತ್ತು ಸಂರಕ್ಷಣೆಗಾಗಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (SOP) ಬಿಡುಗಡೆ ಮಾಡಿದೆ. ಜೈವಿಕ ವೈವಿಧ್ಯತೆ ಕಾಯ್ದೆ-2002ರ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವೈಜ್ಞಾನಿಕ ಆಧಾರದ ಮೇಲೆ ಅಪಾಯದಲ್ಲಿರುವ ಪ್ರಭೇದಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಲು ಈ ಮಾರ್ಗಸೂಚಿ ನೆರವಾಗಲಿದೆ. ಹೊಸ SOP ಮೂಲಕ ಅಳಿವಿನ ಅಪಾಯ ಎದುರಿಸುತ್ತಿರುವ ಪ್ರಾಣಿ ಮತ್ತು ಸಸ್ಯ ಪ್ರಭೇದಗಳನ್ನು ಗುರುತಿಸಲು ಏಕರೂಪ, ಪಾರದರ್ಶಕ ಹಾಗೂ ವಿಜ್ಞಾನಾಧಾರಿತ ವ್ಯವಸ್ಥೆ ರೂಪಿಸುವ ಗುರಿ ಹೊಂದಲಾಗಿದೆ. ಜೊತೆಗೆ, ಅವುಗಳ ಸಂರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಲು ಸಹ ಇದು ನೆರವಾಗಲಿದೆ. ಭಾರತವು ವಿಶ್ವದ ಜೀವವೈವಿಧ್ಯ ಸಮೃದ್ಧ ರಾಷ್ಟ್ರಗಳಲ್ಲಿ ಒಂದಾಗಿದ್ದರೂ, ಆವಾಸಸ್ಥಾನ ನಷ್ಟ, ಅತಿಯಾದ ಶೋಷಣೆ, ಮಾಲಿನ್ಯ, ಆಕ್ರಮಣಕಾರಿ ಪ್ರಭೇದಗಳು ಹಾಗೂ ಹವಾಮಾನ ಬದಲಾವಣೆಯಿಂದ ಜೀವವೈವಿಧ್ಯಕ್ಕೆ ಗಂಭೀರ ಸ...
ವಾಣಿಜ್ಯ ಎಲ್‌ಪಿಜಿ ಪೂರೈಕೆ ಮೇಲಿನ ನಿರ್ಬಂಧ ತೆರವು: ಸಿಲಿಂಡರ್ ಸರಬರಾಜು ಯಥಾಸ್ಥಿತಿ

ವಾಣಿಜ್ಯ ಎಲ್‌ಪಿಜಿ ಪೂರೈಕೆ ಮೇಲಿನ ನಿರ್ಬಂಧ ತೆರವು: ಸಿಲಿಂಡರ್ ಸರಬರಾಜು ಯಥಾಸ್ಥಿತಿ

ದೇಶ, ಪ್ರಮುಖ ಸುದ್ದಿ
ನವದೆಹಲಿ: ಕೈಗಾರಿಕಾ ಹಾಗೂ ವಾಣಿಜ್ಯ ಗ್ರಾಹಕರಿಗೆ ಮಹತ್ವದ ಪರಿಹಾರ ನೀಡಿರುವ ಕೇಂದ್ರ ಸರ್ಕಾರ, ದೇಶೀಯವಲ್ಲದ ಪ್ಯಾಕ್ ಮಾಡಲಾದ ಎಲ್‌ಪಿಜಿ (LPG) ಪೂರೈಕೆಯ ಮೇಲಿನ ಎಲ್ಲಾ ವಲಯವಾರು ನಿರ್ಬಂಧಗಳನ್ನು ತೆರವುಗೊಳಿಸಿದೆ. ಇಂಧನ ಲಭ್ಯತೆ ಸುಧಾರಿಸಿರುವ ಹಿನ್ನೆಲೆಯಲ್ಲಿ ಎಲ್‌ಪಿಜಿ ಸರಬರಾಜನ್ನು ಬಿಕ್ಕಟ್ಟಿನ ಪೂರ್ವ ಮಟ್ಟಕ್ಕೆ ಮರುಸ್ಥಾಪಿಸಲಾಗಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಸಂದರ್ಭದಲ್ಲಿ ಕಡಿತಗೊಳಿಸಲಾಗಿದ್ದ ಬೃಹತ್ ಎಲ್‌ಪಿಜಿ ಸರಬರಾಜನ್ನು ಈಗ ಬಿಕ್ಕಟ್ಟಿನ ಪೂರ್ವ ಬಳಕೆಯ ಮಟ್ಟದ ಶೇ.50ರಷ್ಟು ಪುನಃಸ್ಥಾಪಿಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಇದರಿಂದ ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆದಾರರಿಗೆ ಗಮನಾರ್ಹ ನೆರವು ದೊರೆಯಲಿದೆ. ಪಶ್ಚಿಮ ಏಷ್ಯಾದಲ್ಲಿ ಉಂಟಾದ ಬಿಕ್ಕಟ್ಟಿನ ವೇಳೆ ದೇಶೀಯ ಅಡುಗೆ ಅನಿಲ ಪೂರೈಕೆ ಅಡಚಣೆಯಾಗದಂತೆ ನೋಡಿಕೊಳ್ಳಲು, ಅಗತ್ಯ ಸರಕುಗಳ ಕಾಯ್ದೆಯಡಿ ಎಲ್‌ಪಿಜಿ ಉತ್ಪಾದನೆಗೆ ಬಳಸುವ ಸಿ3-ಸಿ4 ಹೈಡ್ರೋಕಾರ್ಬನ್ ಸ್ಟ್ರೀಮ್‌ಗಳನ್ನು ಸರ್ಕಾರ ಮರುನಿರ್ದೇಶಿಸಿತ್ತು. ಈಗ ಸ್ಥಳೀಯ ಉತ್ಪಾದನೆ ಹಾಗೂ ಎಲ್‌ಪಿಜಿ ಆಮದು ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧಗಳನ್...
ಲಸಿಕೆ, ಕ್ಯಾನ್ಸರ್ ಔಷಧಿಗಳಿಗೆ QR ಕೋಡ್ ಕಡ್ಡಾಯ: ಔಷಧ ಟ್ರ್ಯಾಕಿಂಗ್ ವ್ಯವಸ್ಥೆ ವಿಸ್ತರಿಸಿದ ಕೇಂದ್ರ

ಲಸಿಕೆ, ಕ್ಯಾನ್ಸರ್ ಔಷಧಿಗಳಿಗೆ QR ಕೋಡ್ ಕಡ್ಡಾಯ: ಔಷಧ ಟ್ರ್ಯಾಕಿಂಗ್ ವ್ಯವಸ್ಥೆ ವಿಸ್ತರಿಸಿದ ಕೇಂದ್ರ

ದೇಶ, ಪ್ರಮುಖ ಸುದ್ದಿ
ನವದೆಹಲಿ: ಔಷಧಗಳ ಸುರಕ್ಷತೆ ಹೆಚ್ಚಿಸುವ ಹಾಗೂ ನಕಲಿ ಔಷಧಿಗಳ ಹಾವಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಆರೋಗ್ಯ ಸಚಿವಾಲಯವು QR ಕೋಡ್ ಆಧಾರಿತ ಔಷಧ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಿದೆ. ಇನ್ನು ಮುಂದೆ ಲಸಿಕೆಗಳು, ಆಂಟಿಮೈಕ್ರೊಬಿಯಲ್ ಔಷಧಿಗಳು, ಕ್ಯಾನ್ಸರ್ ವಿರೋಧಿ ಔಷಧಿಗಳು ಹಾಗೂ ಮಾದಕ ಮತ್ತು ಸೈಕೋಟ್ರೋಪಿಕ್ ಔಷಧಿಗಳ ಮೇಲೂ ಈ ನಿಯಮ ಅನ್ವಯವಾಗಲಿದೆ. ಈ ಸಂಬಂಧ 1945ರ ಔಷಧ ನಿಯಮಗಳಿಗೆ ತಿದ್ದುಪಡಿ ಪ್ರಕಟಿಸಿರುವ ಸಚಿವಾಲಯ, ಮೇಲ್ಕಂಡ ಔಷಧ ವರ್ಗಗಳನ್ನು ‘ಷೆಡ್ಯೂಲ್ H2’ ವ್ಯಾಪ್ತಿಗೆ ಸೇರಿಸಿದೆ. ಇದರ ಅನ್ವಯ, ಔಷಧಗಳ ಪ್ಯಾಕೇಜಿಂಗ್ ಮೇಲೆ ಬಾರ್‌ಕೋಡ್ ಅಥವಾ QR ಕೋಡ್ ಅಳವಡಿಸುವುದು ಕಡ್ಡಾಯವಾಗಲಿದೆ. ಹೊಸ ನಿಯಮಗಳ ಪ್ರಕಾರ, ಔಷಧ ತಯಾರಕರು ಉತ್ಪನ್ನದ ಜೆನೆರಿಕ್ ಮತ್ತು ಬ್ರಾಂಡ್ ಹೆಸರು, ತಯಾರಕ ಸಂಸ್ಥೆಯ ವಿವರ, ಬ್ಯಾಚ್ ಸಂಖ್ಯೆ, ಉತ್ಪಾದನೆ ಹಾಗೂ ಅವಧಿ ಮುಕ್ತಾಯ ದಿನಾಂಕ, ಪರವಾನಗಿ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು QR ಕೋಡ್‌ನಲ್ಲಿ ದಾಖಲಿಸಿ ಪ್ಯಾಕೇಜ್ ಮೇಲೆ ಮುದ್ರಿಸಬೇಕು ಅಥವಾ ಅಂಟಿಸಬೇಕು.ಈ ಕ್ರಮದಿಂದ ಔಷಧಗಳ ಮೂಲವನ್ನು ಸುಲಭವಾಗಿ ಪರಿಶೀಲಿಸಲ...
ಆಂಧ್ರ-ತೆಲಂಗಾಣ-ಕರ್ನಾಟಕ ಸಿಎಂಗಳ ಒಗ್ಗಟ್ಟಿಗೆ ಸಾಕ್ಷಿಯಾದ ‘ತುಂಗಭದ್ರಾ’

ಆಂಧ್ರ-ತೆಲಂಗಾಣ-ಕರ್ನಾಟಕ ಸಿಎಂಗಳ ಒಗ್ಗಟ್ಟಿಗೆ ಸಾಕ್ಷಿಯಾದ ‘ತುಂಗಭದ್ರಾ’

ದೇಶ, ಪ್ರಮುಖ ಸುದ್ದಿ
ಕೊಪ್ಪಳ: ಮುನಿರಾಬಾದ್‌ನ ಐತಿಹಾಸಿಕ ತುಂಗಭದ್ರಾ ಜಲಾಶಯದಲ್ಲಿ ನೂತನ 18, 19, 20 ಮತ್ತು 21ನೇ ಕ್ರಸ್ಟ್ ಗೇಟ್‌ಗಳನ್ನು ಗುರುವಾರ ಅದ್ಧೂರಿಯಾಗಿ ಲೋಕಾರ್ಪಣೆ ಮಾಡಲಾಯಿತು. ಈ ಮಹತ್ವದ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಭಾಗವಹಿಸಿದರು. ಗಣ್ಯರು ಜಂಟಿಯಾಗಿ ಬಟನ್ ಒತ್ತುವ ಮೂಲಕ ನೂತನ ಗೇಟ್‌ಗಳ ಉದ್ಘಾಟನೆ ನೆರವೇರಿಸಿದರು.ಲೋಕಾರ್ಪಣೆ ಬಳಿಕ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಗೇಟ್‌ಗಳನ್ನು ವೀಕ್ಷಿಸಿ ಮಾಹಿತಿ ಪಡೆದರು. ಈ ವೇಳೆ ತುಂಗಭದ್ರಾ ಜಲಾಶಯದ ಅಧಿಕಾರಿಗಳು ನೂತನ ಕ್ರಸ್ಟ್ ಗೇಟ್‌ಗಳ ತಾಂತ್ರಿಕ ವೈಶಿಷ್ಟ್ಯಗಳು ಹಾಗೂ ಅವುಗಳ ಕಾರ್ಯವೈಖರಿ ಕುರಿತು ವಿವರಿಸಿದರು. ಜಲಾಶಯದ ಸುರಕ್ಷತೆ ಮತ್ತು ನೀರು ನಿರ್ವಹಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಗೇಟ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ನೀರಿನ ಹರಿವಿನ ನಿಯಂತ್ರಣ ಸುಧಾರಣೆಯಾಗಲಿದ್ದು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಕೃಷ...
ತುಂಗಭದ್ರಾ ನೀರು ಹಂಚಿಕೆ ವಿವಾದ; ಕೇಂದ್ರದ ಮಧ್ಯಸ್ತಿಕೆಗೆ ತೆಲಂಗಾಣ ಸಿಎಂ ಆಗ್ರಹ

ತುಂಗಭದ್ರಾ ನೀರು ಹಂಚಿಕೆ ವಿವಾದ; ಕೇಂದ್ರದ ಮಧ್ಯಸ್ತಿಕೆಗೆ ತೆಲಂಗಾಣ ಸಿಎಂ ಆಗ್ರಹ

ದೇಶ, ಪ್ರಮುಖ ಸುದ್ದಿ
ಹೈದರಾಬಾದ್: ತುಂಗಭದ್ರಾ ಯೋಜನೆಯಿಂದ ತೆಲಂಗಾಣಕ್ಕೆ ಸಿಗಬೇಕಾದ ನೀರಿನ ಹಂಚಿಕೆಯನ್ನು ಖಚಿತಪಡಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಒತ್ತಾಯಿಸಿದ್ದಾರೆ. ತುಂಗಭದ್ರಾ ಅಣೆಕಟ್ಟಿನಿಂದ ತೆಲಂಗಾಣಕ್ಕೆ 15.9 ಟಿಎಂಸಿ ನೀರು ದೊರೆಯಬೇಕಿದ್ದರೂ, ಪ್ರಸ್ತುತ ಕೇವಲ 5 ರಿಂದ 6 ಟಿಎಂಸಿ ನೀರು ಮಾತ್ರ ಹರಿದುಬರುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಇದರಿಂದ ಜೋಗುಳಂಬ ಗಡ್ವಾಲ್ ಜಿಲ್ಲೆಯ 75 ಗ್ರಾಮಗಳ ಸುಮಾರು 83,987 ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುವ ರಾಜೋಳಿ ಬಂದಾ ತಿರುವು ಯೋಜನೆ (ಆರ್‌ಡಿಎಸ್) ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಬುಧವಾರ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ನಡುವೆ ನೀರಿನ ಹಂಚಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೇಂದ್ರ ಜಲ ಆಯೋಗದ ಅಧೀನದಲ್ಲಿರುವ ತುಂಗಭದ್ರಾ ಮಂಡಳಿಯನ್ನು ಬಲಪಡಿಸುವಂತೆ ಕೇಂದ್ರವನ್ನು ಕೋರಿದರು.ಆರ್‌ಡಿಎಸ್ ಅಣೆಕಟ್ಟು ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಮುಖ್ಯಮಂತ್ರಿ, ತುರ್ತು ಕಾಮಗಾರಿಗಳನ್ನು ಕೈಗ...
ಕೋಲ್ಕತ್ತಾದಲ್ಲಿ ಕಟ್ಟಡ ಕುಸಿತ ದುರಂತ: ಐವರ ಸಾವು, ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಕೋಲ್ಕತ್ತಾದಲ್ಲಿ ಕಟ್ಟಡ ಕುಸಿತ ದುರಂತ: ಐವರ ಸಾವು, ಮುಂದುವರಿದ ರಕ್ಷಣಾ ಕಾರ್ಯಾಚರಣೆ

ದೇಶ, ಪ್ರಮುಖ ಸುದ್ದಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ತಾರಾತಲಾ ಪ್ರದೇಶದಲ್ಲಿ ನಿರ್ಮಾಣ ಹಂತದ ಮೂರು ಅಂತಸ್ತಿನ ಗೋದಾಮು ಕುಸಿದು ಬಿದ್ದ ಪರಿಣಾಮ ಕನಿಷ್ಠ ಐದು ಕಾರ್ಮಿಕರು ಮೃತಪಟ್ಟಿದ್ದು, 20 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಶಂಕೆ ಇರುವುದರಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಬ್ರೇಸ್ ಬ್ರಿಡ್ಜ್ ರೈಲು ನಿಲ್ದಾಣದ ಸಮೀಪದ ಕಟ್ಟಡದಲ್ಲಿ ಬುಧವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಮೇಲ್ಛಾವಣಿ ಕಾಂಕ್ರೀಟ್ ಹಾಕುವ ವೇಳೆ ಕಟ್ಟಡದ ಒಂದು ಭಾಗ ಕುಸಿದು, ಬಳಿಕ ಸಂಪೂರ್ಣ ರಚನೆ ನೆಲಸಮವಾಯಿತು. ಘಟನೆ ವೇಳೆ 30 ರಿಂದ 40 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳ, ಪೊಲೀಸ್, ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ಸೇನಾ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕ್ರೇನ್, ಬುಲ್ಡೋಜರ್ ಮತ್ತು ವಿಶೇಷ ಕಟರ್‌ಗಳ ಸಹಾಯದಿಂದ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ.ರಕ್ಷಿಸಲ್ಪಟ್ಟ ಗಾಯಾಳುಗಳನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿ...
ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ: ಕರಾಳ ಇತಿಹಾಸ ನೆನಪಿಸಿಕೊಂಡ ಪ್ರಧಾನಿ

ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ: ಕರಾಳ ಇತಿಹಾಸ ನೆನಪಿಸಿಕೊಂಡ ಪ್ರಧಾನಿ

ದೇಶ, ಪ್ರಮುಖ ಸುದ್ದಿ
ನವದೆಹಲಿ: 1975ರಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ 51ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಆ ಅವಧಿಯನ್ನು ಭಾರತದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದೆಂದು ವರ್ಣಿಸಿ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಧೈರ್ಯದಿಂದ ರಕ್ಷಿಸಿದ ಎಲ್ಲರಿಗೂ ಗೌರವ ಸಲ್ಲಿಸಿದರು. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ, ತುರ್ತು ಪರಿಸ್ಥಿತಿಯು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ನೇರ ದಾಳಿಯಾಗಿತ್ತು ಎಂದು ಹೇಳಿದರು. ಆ ಸಮಯದಲ್ಲಿ ನಾಗರಿಕ ಸ್ವಾತಂತ್ರ್ಯಗಳನ್ನು ಅಮಾನತುಗೊಳಿಸಲಾಗಿತ್ತು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗಂಭೀರ ನಿರ್ಬಂಧಗಳು ವಿಧಿಸಲಾಗಿದ್ದವು. ರಾಜಕೀಯ ನಾಯಕರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಪ್ರಜಾಪ್ರಭುತ್ವದ ಮೂಲಸ್ತಂಭಗಳನ್ನು ದುರ್ಬಲಗೊಳಿಸಲಾಗಿತ್ತು ಎಂದು ಅವರು ನೆನಪಿಸಿದರು.ಆದರೂ, ಕಠಿಣ ಪರಿಸ್ಥಿತಿಯ ನಡುವೆಯೂ ಮೌನವಾಗಿರಲು ನಿರಾಕರಿಸಿ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿದ ಅಸಂಖ್ಯಾತ ನಾಗರಿಕರ ಧೈರ್ಯ ಮತ್ತು ಸ್ಥೈರ್ಯವನ್ನು ಪ್ರಧಾನಿ ಶ್ಲಾಘಿಸಿದರು. “ಅವರ ಧೈರ್ಯವೇ ಪ್ರ...