
ಅಮರಾವತಿ: ಸೋಮನಾಥ ದೇವಾಲಯವು ಭಾರತದ ನಾಗರಿಕತೆಯ ಚೈತನ್ಯದ ಶಾಶ್ವತ ಸಂಕೇತವಾಗಿದ್ದು, ಅದನ್ನು ಶತಮಾನಗಳಿಂದ ರಕ್ಷಿಸಿ ಪುನರ್ನಿರ್ಮಿಸಿದವರ ಭಕ್ತಿ ಮತ್ತು ತ್ಯಾಗವನ್ನು ಪ್ರತಿಬಿಂಬಿಸುತ್ತದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಸೋಮನಾಥ ದೇವಾಲಯದ ಪುನಃಸ್ಥಾಪನೆಯ 75 ವರ್ಷಗಳ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ ಮಹಾಪೂಜೆ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ ಅವರು, “ನಮ್ಮದು ನಂಬಿಕೆಯನ್ನು ಗೌರವಿಸುವ ಭೂಮಿ. ಸೋಮನಾಥ ದೇವಾಲಯ ಕೇವಲ ಪೂಜಾ ಸ್ಥಳವಲ್ಲ, ಅದು ಭಾರತದ ನಾಗರಿಕತೆಯ ಶಕ್ತಿಯ ಸಂಕೇತ” ಎಂದು ಬರೆದಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ “ವಿಕಾಸ್ ಭಿ, ವಿರಾಸತ್ ಭಿ” ಎಂಬ ಧೋರಣೆಯನ್ನು ಅನುಸರಿಸುತ್ತಿದ್ದು, ಅಭಿವೃದ್ಧಿಯ ಜೊತೆಗೆ ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಸಂರಕ್ಷಣೆಯನ್ನೂ ಮುಂದುವರಿಸುತ್ತಿದೆ ಎಂದು ನಾಯ್ಡು ಹೇಳಿದ್ದಾರೆ.
Ours is a land where faith is respected and serves as a force that unites everyone. Somnath Temple is more than a place of worship, it stands as an enduring symbol of India’s civilisational spirit, reflecting the sacrifice and devotion of those who defended and rebuilt it through… https://t.co/L4zFxOs0kD
— N Chandrababu Naidu (@ncbn) May 11, 2026
“ಸೋಮನಾಥ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶ್ವದಾದ್ಯಂತದ ಭಕ್ತರಿಗೆ ಶುಭಾಶಯಗಳು. ಹರ ಹರ ಮಹಾದೇವ್” ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಸೋಮನಾಥದಿಂದ ವಡೋದರಾಗೆ ಹೋಗುವ ದಾರಿಯಲ್ಲಿ ತೆಗೆದ ದೇವಾಲಯದ ಫೋಟೋವನ್ನು ಸಾಮಾಜಿಕ ಮಾಧ್ಯಮ X ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಭಾಸ್ ಪಟಾನ್ ತೀರದಲ್ಲಿ, ಸೋಮನಾಥ ದೇವಾಲಯವು ಭಕ್ತಿ, ಇತಿಹಾಸ ಮತ್ತು ನಾಗರಿಕತೆಯ ಉಜ್ವಲ ಸಂಕೇತವಾಗಿ ಎತ್ತರವಾಗಿ ನಿಂತಿದೆ. ಇದು ಅನಾಗರಿಕ ದಾಳಿಗಳು, ಆಕ್ರಮಣಗಳು ಮತ್ತು ಶತಮಾನಗಳ ಹಾದಿಯನ್ನು ಮೀರಿಸಿದೆ. ಇದು ಶಾಶ್ವತ. ಸೋಮನಾಥವು ಪ್ರತಿಯೊಬ್ಬ ಭಾರತೀಯನಿಗೂ ಶಕ್ತಿ, ಧೈರ್ಯ ಮತ್ತು ಭರವಸೆಯನ್ನು ನೀಡುತ್ತದೆ ಎಂದವರು ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
Took this photo while on the way from Somnath to Vadodara…
On the shores of Prabhas Patan, the Somnath Temple stands tall as a radiant symbol of devotion, history and civilisational spirit. It has outlasted barbaric attacks, invasions and the passage of centuries. It is… pic.twitter.com/VPkF54tBJO
— Narendra Modi (@narendramodi) May 11, 2026
